ಪಂಚಾಂಗ| ಸುಬ್ರಹ್ಮಣ್ಯನ ಆರಾಧಿಸಿ ಜ್ಞಾನಾಭಿವೃದ್ಧಿ ಮಾಡಿಕೊಳ್ಳಿ!

Jan 19, 2021, 9:12 AM IST

ನಿತ್ಯ ಪಂಚಾಂಗ| 19 ಜನವರಿ 2020, ಮಂಗಳವಾರದ ಪಂಚಾಂಗ| ಮಂಗಳವಾರಷಷ್ಠಿ ಬರುವುದು ಬಹಳ ಒಳ್ಳೆಯ ಯೋಗ. ಸುಬ್ರಹ್ಮಣ್ಯನ ಆರಾಧನೆ, ನಾಗಾರಾಧನೆಗೆ ಇದು ಅತ್ಯುತ್ತಮ. ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯಿಂದ ಏನು ಪ್ರಾಪ್ತಿಯಾಗುತ್ತದೆ? ಎಂಬುವುದು ಬಹಳ ಮುಖ್ಯ. ಸುಬ್ರಹ್ಮಣ್ಯ ಜ್ಞಾನಕ್ಕೆ ಅಧಿಪತಿ. ಶಿವನಿಗೆ ಓಂಕಾರ ಉಪದೇಶ ಮಾಡಿದ ಮಹನೀಯ. ಹೀಗಾಗಿ ಸುಬ್ರಹ್ನಣ್ಯ ಸ್ವಾಮಿಯ ಸಮೀಪಕ್ಕೆ ಹೋಗುವುದೆಂದರೆ ಬ್ರಹ್ಮ ಜ್ಞಾನ ಪ್ರಾಪ್ತಿ ಮಾಡಿಕೊಳ್ಳುವುದು. ಅಂತಹ ದಿವ್ಯವಾದ ಅನುಗ್ರಹ ಮಾಡುತ್ತಾನೆ.