ನೆಮ್ಮದಿಯೇ ಇಲ್ಲ ಎಂದು ಕೊರಗುತ್ತಿದ್ದೀರಾ? ಶಿವನ ಈ ಮಂತ್ರವನ್ನು ಪಠಿಸಿದರೆ ಅನುಕೂಲವಾಗುವುದು

Feb 15, 2021, 8:32 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ,ಮಾಘ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ಉತ್ತರಾಭಾದ್ರ ನಕ್ಷತ್ರ ಇಂದು ಸೋಮವಾರ. ಮಾಘಮಾಸದ ಚತುರ್ಥಿಯನ್ನು ಕುಂದ ಚತುರ್ಥಿ ಎಂದು ಕರೆಯುತ್ತಾರೆ.

ದಿನ ಭವಿಷ್ಯ : ಈ ರಾಶಿಯವರಿಗೆ ಸುಖ ನಷ್ಟವಾಗಲಿದೆ, ಅಸಮಾಧಾನದ ದಿನ!

ಪರಶಿವ ತನ್ನ ಮಡದಿಗೆ ಹೇಳುತ್ತಾನೆ, ಯಾರು ಮಾಘ ಮಾಸದ ಚತುರ್ಥಿಯಂದು ನಿನ್ನನ್ನು ಆರಾಧಿಸುತ್ತಾರೋ ಅವರಿಗೆ ಸಕಲೈಶ್ವರ್ಯ ಕರುಣಿಸುತ್ತೇನೆ ಎನ್ನುತ್ತಾನೆ. ಹಾಗಾಗಿ ತಾಯಿ ಪಾರ್ವತಿಯನ್ನು ಪ್ರಾರ್ಥಿಸಬೇಕು. ಇನ್ನು ನೆಮ್ಮದಿಯೇ ಇಲ್ಲ ಎಂದು ಕೊರಗುವವರು ಶಿವನ ಈ ಮಂತ್ರವನ್ನು ಪ್ರತಿದಿನ 11 ರಂತೆ, 11 ದಿನ ಮಾಡಿದರೆ ಅನುಕೂಲವಾಗುವುದು.