Panchanga: ಸೂರ್ಯನಿಗೆ ಅರ್ಘ್ಯ ಪ್ರದಾನ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ

Dec 5, 2021, 8:41 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿದೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಪ್ರತಿಪತ್ ತಿಥಿ, ಜ್ಯೇಷ್ಠ ನಕ್ಷತ್ರ, ಇಂದು ಭಾನುವಾರ. ಮಾರ್ಗಶಿರ ಮಾಸ ಕೃಷ್ಣನಿಗೆ ಅತ್ಯಂತ ಪ್ರಿಯವಾದ ಮಾಸ. ಇಂದು ಭಾನುವಾರ, ಸೂರ್ಯನ ಪ್ರಾರ್ಥನೆ ಮಾಡಿಕೊಳ್ಳಿ. ತಂಬಿಗೆಯಲ್ಲಿ ನದಿ ನೀರನ್ನು ತುಂಬಿ ಅದರಲ್ಲಿ ಕೆಂಪು ಹೂವುಗಳನ್ನು ಮಿಶ್ರಣ ಮಾಡಿ ಸೂರ್ಯನಿಗೆ ಅರ್ಘ್ಯ ಪ್ರದಾನ ಮಾಡಬೇಕು. ಹೀಗೆ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆ.