Panchanga: ಇಂದು ಅಮೃತಲಕ್ಷ್ಮೀ ವ್ರತ, ಸುಮಂಗಲಿಯರಿಗೆ ಅರಿಶಿನ, ಕುಂಕುಮ ಬಾಗಿನ ಕೊಡಬೇಕು

Jul 4, 2022, 8:26 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಆಷಾಢ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಪುಬ್ಬ ನಕ್ಷತ್ರ, ಇಂದು ಸೋಮವಾರ. ಆಷಾಢದ ಪಂಚಮಿಯಂದು ಅಮೃತಲಕ್ಷ್ಮೀ ವ್ರತ ಮಾಡಬೇಕು. ಲಕ್ಷ್ಮೀ ಅಂದರೆ ಬರೀ ಹಣವಲ್ಲ, ವಿದ್ಯೆ, ಧಾನ್ಯ, ಸಮೃದ್ಧಿ, ಸಂಪತ್ತು, ಆರೋಗ್ಯ ಎಲ್ಲವೂ ಹೌದು. ಇಂದು ಸುಮಂಗಲಿಯರನ್ನು ಕರೆದು, ಅವರಿಗೆ ಅರಿಶಿನ ಕುಂಕುಮ ಕೊಡುವುದರಿಂದ ಲಕ್ಷ್ಮೀ ಸಂಪನ್ನನಾಗುತ್ತಾಳೆ.