Panchanga: ಇಂದು ಅಮಾವಾಸ್ಯೆ, ಕುಜನ ಸ್ಥಾನ ಬದಲಾವಣೆ, ಸುಬ್ರಹ್ಮಣ್ಯ ಸ್ವಾಮಿ ಆರಾಧನೆ ಮಾಡಿ

Dec 4, 2021, 8:34 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಅನುರಾಧಾ ನಕ್ಷತ್ರ, ಇಂದು ಶನಿವಾರ. ಈ ಅಮಾವಾಸ್ಯೆಯನ್ನು ಕುಹೂ ಎಂದು ಕರೆಯುತ್ತಾರೆ. ಇಂದು ಕುಜ ತನ್ನ ಸ್ಥಾನವನ್ನು ಬದಲಿಸುತ್ತಿದ್ದಾನೆ. ಸ್ವಕ್ಷೇತ್ರ ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಅಮಾವಾಸ್ಯೆ ದಿನ ಕುಜನ ಬದಲಾವಣೆಯಾಗುತ್ತಿರುವುದರಿಂದ, ಸುಬ್ರಹ್ಮಣ್ಯ ಸ್ವಾಮಿಯ ಸನ್ನಿಧಾನದಲ್ಲಿ ಪೂಜೆ ಮಾಡಿಸುವುದರಿಂದ ಅನುಕೂಲವಾಗುವುದು. 

Daily Horoscope: ಮಿಥುನ ರಾಶಿಗಿಂದು ಅರೋಗ್ಯ ಸಮಸ್ಯೆ, ಪರಿಹಾರವೇನು.?