Panchanga: ಆಶ್ಲೇಷಾ ನಕ್ಷತ್ರ, ವಿಷ್ಣು ಸಹಸ್ರನಾಮ ಪಠಣ, ಸುಬ್ರಹ್ಮಣ್ಯ ಪ್ರಾರ್ಥನೆಯಿಂದ ದಿವ್ಯಫಲ

Jul 2, 2022, 9:51 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಆಷಾಢ ಮಾಸ, ಶುಕ್ಲ ಪಕ್ಷ, ಆಶ್ಲೇಷಾ ನಕ್ಷತ್ರ, ತೃತೀಯಾ ತಿಥಿ, ಇಂದು ಶನಿವಾರ. ಆಶ್ಲೇಷಾ ನಕ್ಷತ್ರ ಇರುವುದರಿಂದ ನಾಗಾರಾಧನೆ, ಸುಬ್ರಹ್ಮಣ್ಯನ ಆರಾಧನೆಯಿಂದ ವಿಶೇಷ ಫಲಗಳಿವೆ. ಇನ್ನು ಇಂದು ಬುಧ ವೃಷಭದಿಂದ ಮಿಥುನಕ್ಕೆ ಪ್ರವೇಶಿಸುತ್ತಿದ್ದಾನೆ. ವಿದ್ಯೆ, ಬುದ್ದಿಶಕ್ತಿ, ಧೀಶಕ್ತಿ, ವಾಕ್ಚಾತುರ್ಯಕ್ಕೆ ಬುಧನ ಅನುಗ್ರಹ ಇರಲೇಬೇಕು.