ಪುಸ್ತಕ ಹರಿದ ಸುನ್ನಿ ವಕ್ಫ್ ಬೋರ್ಡ್ ವಕೀಲ: ಸಿಜೆಐ ಎಚ್ಚರಿಕೆಯಿಂದ ಒದ್ದಾಡಿದರು ವಿಲವಿಲ!

ಪುಸ್ತಕ ಹರಿದ ಸುನ್ನಿ ವಕ್ಫ್ ಬೋರ್ಡ್ ವಕೀಲ: ಸಿಜೆಐ ಎಚ್ಚರಿಕೆಯಿಂದ ಒದ್ದಾಡಿದರು ವಿಲವಿಲ!

Published : Oct 16, 2019, 04:00 PM IST

ಅಯೋಧ್ಯೆ ಕೊನೆ ದಿನದ ವಿಚಾರಣೆ ವೇಳೆ ಹೈಡ್ರಾಮಾ| ಸಿಜೆಐ ಮುಂದೆಯೇ ಪುಸ್ತಕ ಹರಿದು ಹಾಕಿದ ಸುನ್ನಿ ವಕ್ಫ್ ಬೋರ್ಡ್ ಪರ ವಕೀಲ| ಹಿಂದೂ ಮಹಾಸಭಾ ಪರ ವಕೀಲ ಪ್ರದರ್ಶಿಸಿದ ಪುಸ್ತಕ| ಮಾಜಿ ಐಪಿಎಸ್ ಅಧಿಕಾರಿ  ಕಿಶೋರ್ ಬರೆದಿರುವ ಅಯೋಧ್ಯೆ ರಿವಿಸಿಟೆಡ್ ಪುಸ್ತಕ ಹರಿದ ರಾಜೀವ್ ಧವನ್| ರಾಜೀವ್ ಧವನ್ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಿಜೆಐ ರಂಜನ್ ಗೊಗೋಯ್| ನ್ಯಾಯಪೀಠದಿಂದ ಎದ್ದು ಹೊರನಡೆಯುವುದಾಗಿ ಎಚ್ಚರಿಕೆ ನೀಡಿದ ಗೊಗೊಯ್| ತಮ್ಮ ವರ್ತನೆಗೆ ನ್ಯಾಯಾಲಯದ ಕ್ಷಮೆ ಕೇಳಿದ ರಾಜೀವ್ ಧವನ್|

ಅಯೋಧ್ಯೆಯ ರಾಮಜನ್ಮಭೂಮಿ -ಬಾಬ್ರಿಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ, ಸುಪ್ರೀಂಕೋರ್ಟ್'ನಲ್ಲಿ ನಡೆಯುತ್ತಿರುವ ವಿಚಾರಣೆಯ ಅಂತಿಮ ದಿನ ಹಲವು ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಗಿದೆ.

ತಮ್ಮ ವಾದಗಳಿಗೆ ಬೆಂಬಲವಾಗಿ ಹಿಂದೂ ಮಹಾ ಸಭಾ ವಕೀಲರು  ನ್ಯಾಯಾಲಯದಲ್ಲಿ  ಪ್ರದರ್ಶಿಸಿದ ಪುಸ್ತಕ  ಹಾಗೂ ನಕ್ಷೆ  ತೀವ್ರ ವಿವಾದ ಸೃಷ್ಟಿಸಿದ್ದು, ಈ ಪುಸ್ತಕವನ್ನು ಮುಸ್ಲಿಂ ಸಂಘಟನೆಗಳ ಪರ ವಕೀಲ ರಾಜೀವ್ ಧವನ್ ಹರಿದು ಹಾಕಿದ್ದಾರೆ.

ಮಾಜಿ ಐಪಿಎಸ್ ಅಧಿಕಾರಿ  ಕಿಶೋರ್ ಬರೆದಿರುವ ರಿವಿಸಿಟೆಡ್ ಎಂಬ ಹೆಸರಿನ  ಪುಸ್ತಕವನ್ನು ಹಿಂದೂ ಮಹಾಸಭಾ ವಕೀಲ ವಿಕಾಸ್ ಸಿಂಗ್ ನ್ಯಾಯಾಲಯದ ಮುಂದೆ  ಹಾಜರುಪಡಿಸಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸುನ್ನಿ ವಕ್ಫ್ ಮಂಡಳಿಯ ವಕೀಲ ರಾಜೀವ್ ಧವನ್, ಪುಸ್ತಕ ಹಾಗೂ ನಕ್ಷೆಯನ್ನು ಹರಿದುಹಾಕಿದರು.

ರಾಜೀವ್ ಧವನ್ ವರ್ತನೆಗೆ ತೀವ್ರ ಆಕ್ಷೇಪದ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಈ ರೀತಿಯ ವರ್ತನೆ ಒಪ್ಪಲು ಸುತಾರಾಂ ಸಾಧ್ಯವಿಲ್ಲ ಎಂದು ಖಡ್ ಎಚ್ಚರಿಕೆ ನೀಡಿದರು. ಅಲ್ಲದೇ ತಾವು ನ್ಯಾಯಪೀಠದಿಂದ ಎದ್ದು ಹೊರನಡೆಯುವುದಾಗಿ ಬೆದರಿಕೆಯೊಡ್ಡಿದರು.

ಸಿಜೆಐ ಎಚ್ಚರಿಕೆಗೆ ಬೆದರಿದ ರಾಜೀವ್ ಧವನ್, ತಮ್ಮ ವರ್ತನೆಗೆ ಕ್ಷಮೆ ಕೋರಿದರಲ್ಲದೇ ವಿಚಾರಣಾ ಪ್ರಕ್ರಿಯೆ ಮೇಲೆ ತಮಗೆ ಸಂಪೂರ್ಣ ನಂಬಿಕೆಯಿದೆ ಎಂದು ಮನವರಿಕೆ ಮಾಡಿಕೊಟ್ಟರು.

ಪ್ರಕರಣದ ಪ್ರತಿದಿನದ ವಿಚಾರಣೆ ಇಂದು ಸಂಜೆ 5 ಗಂಟೆಗೆ ಅಂತ್ಯವಾಗಲಿದ್ದು, ಇದೇ ನವೆಂಬರ್ 4 ಅಥವಾ 5 ರಂದು ತೀರ್ಪು ಹೊರಬೀಳಲಿದೆ. ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂವಿವಾದ ಪ್ರಕರಣದ ಶೀಘ್ರ ಇತ್ಯರ್ಥದ ಆಶಾವಾದ ಮೂಡಿಸಿದೆ.

24:25ಮೂಡಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ 'ಕಾಮಲೀಲೆ' ಭಾಗ-2: ಬಗೆದಷ್ಟು ಬಯಲಾಗ್ತಿದೆ ‘ಪೋಲಿ’ಸ್ ಮಾಮನ ಲೀಲೆ
19:31ದೊಡ್ಡಣ್ಣನ ಗರ್ವಭಂಗ! ನಾವು ಬೆಚ್ಚಿ ಬಿದ್ದಿದ್ದೇವೆ; ಕದನದ ಕಹಿಸತ್ಯ ಒಪ್ಪಿಕೊಂಡ ಟ್ರಂಪ್
24:18ಗಂಡನ ಮೇಲೆ ಕೇಸ್ ಹಾಕಿ ಹೆಂಡತಿಯರನ್ನ ಮಂಚಕ್ಕೆ ಕರೆಯೋ ಇನ್ಸ್‌ಪೆಕ್ಟರ್ ಸಂದೇಶ್; ಖಾಕಿ ಕಾಮಕಾಂಡ ಬಟಾಬಯಲು
18:59ಒಬ್ಬಂಟಿ ಐಲು ದೊರೆ ಟ್ರಂಪ್‌ಗೆ ಮಿತ್ರರ ಶಾಕ್: ಹಾರ್ಮುಜ್ ಬಿಕ್ಕಟ್ಟಿನಲ್ಲಿ ಅಮೆರಿಕ ಏಕಾಂಗಿ!
19:41ಅತಿ ಬುದ್ಧಿವಂತಿಕೆಯಿಂದ ಏಕಾಂಗಿಯಾಯ್ತು ಟ್ರಂಪ್ ಆಳ್ವಿಕೆಯ ಅಮೆರಿಕಾ! ದಾರಿ ತಪ್ಪಿದ್ದೆಲ್ಲಿ ದೊಡ್ಡಣ್ಣ?
19:4890 ಸೆಕೆಂಡುಗಳ ಬದುಕು..ಇಸ್ರೇಲ್, ಇರಾನ್‌ ಜನರ ಅನುಕ್ಷಣದ ತಳಮಳ!
42:27ಇರಾನ್ ವಿರುದ್ಧ ಯುದ್ಧಕ್ಕೆ ಅಮೆರಿಕಾ ಮಾಡಿದ ಖರ್ಚೆಷ್ಟು? ಯುದ್ಧದಿಂದ ಅಮೆರಿಕಕ್ಕೇನು ಲಾಭ?
19:11ಇರಾನ್ ಹೆಣೆದ ತೈಲ ಚಕ್ರವ್ಯೂಹಕ್ಕೆ ಜಗತ್ತೇ ತತ್ತರ: ಅಮೆರಿಕದ ಅಹಂ ಇಳಿಸಿದ ಇಸ್ಲಾಮಿಕ್ ರಾಷ್ಟ್ರದ ಮಾಸ್ಟರ್ ಪ್ಲ್ಯಾನ್!
18:49ಇರಾನ್ ಮೇಲೆ ಮುಗಿಬಿದ್ದ ಅಮೆರಿಕಗೆ ಕಂಟಕ, ಎಂಟ್ರಿಕೊಟ್ಟ ಉ.ಕೊರಿಯಾದ ಕಿಮ್ ಜಾಂಗ್
18:09ಕಪ್ಪು ಚಿನ್ನದ ರಕ್ತ ಚರಿತ್ರೆ! ಮಧ್ಯಪ್ರಾಚ್ಯದ ಮರಳಿನಡಿ ಸೇರಿದ್ದು ಹೇಗೆ ಜಗತ್ತನ್ನೇ ಆಳುವ ಮಹಾಶಕ್ತಿ