Oct 3, 2019, 3:32 PM IST
ಬೆಂಗಳೂರು (ಅ.03): ಡಿ.ಕೆ.ಶಿವಕುಮಾರ್ ಸಹೋದರ, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಕೊರಳಿಗೂ ಜಾರಿ ನಿರ್ದೇಶನಾಲಯದ (ED) ಕಂಟಕ ಸುತ್ತಿಕೊಂಡಿದೆ. ಡಿ,ಕೆ. ಸುರೇಶ್ಗೂ ED ಯಿಂದ ನೋಟಿಸ್ ಬರಲಿದೆ ಎಂಬ ಬಗ್ಗೆ ಕನ್ನಡಪ್ರಭ- ಸುವರ್ಣನ್ಯೂಸ್ ವರದಿ ಮಾಡಿತ್ತು.
ಆದರೆ ಡಿಕೆಸು ಅದನ್ನು ಅಲ್ಲಗಳೆದಿದ್ದರು. ಕೊನೆಗೂ ನೋಟಿಸ್ ಕೈತಲುಪಿದ ಬಳಿಕ ಡಿಕೆಸು ED ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆಸು, ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.