ಆರೋಗ್ಯ ಕ್ಷೇತ್ರಕ್ಕೆ ಡಿಜಿಟಲ್ ಸ್ಪರ್ಶ ಕೊಟ್ಟ ಸಚಿವರು: ನರ್ವ್ ಸೆಂಟರ್ ಆರಂಭ, ಫೋನ್‌ನಲ್ಲೇ ಸಿಗುತ್ತೆ ಆರೋಗ್ಯ !

ಆರೋಗ್ಯ ಕ್ಷೇತ್ರಕ್ಕೆ ಡಿಜಿಟಲ್ ಸ್ಪರ್ಶ ಕೊಟ್ಟ ಸಚಿವರು: ನರ್ವ್ ಸೆಂಟರ್ ಆರಂಭ, ಫೋನ್‌ನಲ್ಲೇ ಸಿಗುತ್ತೆ ಆರೋಗ್ಯ !

Published : Sep 28, 2023, 10:53 AM IST

ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ಕ್ರಾಂತಿ ಮಾಡುತ್ತಿದೆ.ರೋಗಿಗಳಿಗೆ ತಕ್ಷಣ ಚಿಕಿತ್ಸೆ ನೀಡುವ ಉದ್ದೇಶದಿಂದ ರಾಜ್ಯದಲ್ಲೇ ಮೊದಲ ಬಾರಿ ನರ್ವ್‌ ಸೆಂಟರ್ ಪ್ರಾರಂಭವಾಗಿದ್ದು, ಫೋನ್‌ನಲ್ಲೇ ರೋಗಿಗೆ ತಕ್ಷಣ ಚಿಕಿತ್ಸೆ ನೀಡುವ ಕೇಂದ್ರವನ್ನ ಕೋಲಾರದಲ್ಲಿ ಉದ್ಘಾಟಿಸಲಾಗಿದೆ.
 

ಹೊರಗೆ ಯಾವುದೋ ಐಟಿ ಕಂಪನಿಯಂತೆ ಬಾಸವಾಗುವ ಕಚೇರಿ. ಹೆಲ್ಪ್ ಲೈನ್‌ನಲ್ಲಿ ರೋಗಿಗಳಿಗೆ ಮಾಹಿತಿ ನೀಡುತ್ತಿರುವ ಸಿಬ್ಬಂದಿ. ಆರೋಗ್ಯ ಸಿಬ್ಬಂದಿ ಕೆಲಸ ಮಾಡ್ತಿರೋದನ್ನ ನೋಡುತ್ತಿರುವ ಸಚಿವ ದಿನೇಶ್ ಗುಂಡೂರಾವ್(Dinesh Gundu Rao). ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಜನರ ಆರೋಗ್ಯ ಕಾಪಾಡೋಕು ಪಣ ತೊಟ್ಟಿದೆ. ಇದಕ್ಕೆ ಪುಷ್ಠಿ ನೀಡುವಂತೆ ದೇಶದಲ್ಲೇ ಮೊದಲ ಬಾರಿ ಅದರಲ್ಲೂ ಕೋಲಾರದಲ್ಲಿ ಹೊಸ ಡಿಜಿಟಲ್ ನರ್ವ್ ಸೆಂಟರ್(Nerve center) ಪ್ರಾರಂಭಿಸಲಾಗಿದೆ. 7ವರ್ಷಗಳ ಹಿಂದೆ ಆರೋಗ್ಯ ಇಲಾಖೆ ಹಾಗೂ ಟಾಟಾ ಮೆಮೋರಿಯಲ್ ಟ್ರಸ್ಟ್‌ ಸಹಯೋಗದಲ್ಲಿ ಪ್ರಾರಂಭವಾದ ಡಿಜಿಟಲ್ ನರ್ವ್ ಸೆಂಟರ್ ಅದ್ಭುತವಾಗಿ ಕೆಲಸ ಮಾಡುತ್ತಿದೆ. ಈ ನರ್ವ್‌ ಸೆಂಟರ್ ಹೇಗೆ ಕೆಲಸ ಮಾಡುತ್ತೆ ಅಂದ್ರೆ ಮನುಷ್ಯನ ನರ ವ್ಯೂಹದ ರೀತಿಯಲ್ಲಿ  ಕಾರ್ಯ ನಿರ್ವಹಿಸುತ್ತೆ. ಈ ಸೆಂಟರ್ ಜಿಲ್ಲೆಯ ಎಲ್ಲಾ ನಾಗರೀಕರ ಮಾಹಿತಿ ಹೊಂದಿರುತ್ತೆ. ಜೊತೆಗೆ ಯಾರಿಗೇ ಏನೇ ಆರೋಗ್ಯ(Health) ಸಮಸ್ಯೆ ಎದುರಾದ್ರೂ ಹೆಲ್ಫ್‌ಲೈನ್ ನಂಬರ್‌ಗೆ ಕರೆ ಮಾಡಿದ್ರೆ ತಕ್ಷಣ ಅನಾರೋಗ್ಯ ಪೀಡಿತರಿಗೆ ನುರಿತ ಸಿಬ್ಬಂದಿ ಮಾರ್ಗದರ್ಶನ ನೀಡ್ತಾರೆ. ಸ್ಥಳೀಯವಾಗಿ ಯಾವ ವೈದ್ಯರು ಸಿಗ್ತಾರೆ..ಆಂಬ್ಯುಲೆನ್ಸ್ ವ್ಯವಸ್ಥೆ ಸೇರಿ ಎಲ್ಲ ಮಾಹಿತಿ ನೀಡಲಾಗುತ್ತೆ. ಈ ಡಿಜಿಟಲ್ ಯೋಜನೆ ಕೋಲಾರದಲ್ಲಿದ್ದು ಇಡೀ ರಾಜ್ಯಕ್ಕೆ ವಿಸ್ತರಿಸಲು ಚಿಂತನೆ ನಡೆಯುತ್ತಿದೆ ಅಂತಾರೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್.ನರ್ವ್ ಸೆಂಟರ್‌ನಲ್ಲಿ ಕೇವಲ ತುರ್ತು ಸೇವೆಗಳಿಗಷ್ಟೇ ಅಲ್ಲ..ರೋಗಿಗಳ ಮೇಲೆ ನಿಗಾ ವಹಿಸ್ತಾರೆ. ಮಧುಮೇಹಿ,ಗರ್ಭಿಣಿ,ಕ್ಷಯಾ ರೋಗ ಪೀಡಿತರಿಗೆ ಪ್ರತಿ ವಾರಕ್ಕೊಮ್ಮೆ ಕರೆ ಮಾಡಿ ಆರೋಗ್ಯದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾರೆ.

ಇದನ್ನೂ ವೀಕ್ಷಿಸಿ:  ಸ್ಯಾಂಡಲ್‌ವುಡ್‌ನಲ್ಲಿ 'ಗರಡಿ' ಘರ್ಜನೆ: ಕುಸ್ತಿ ಪೈಲ್ವಾನ್ ಆದ ಯಶಸ್ ಸೂರ್ಯ!

24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
23:26Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!
23:26FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
Read more