ಬಾಲಕನಿಗೆ 9 ಬಾರಿ ಹಾವು ಕಚ್ಚಿರೋದು ನಿಜನಾ..? ಖ್ಯಾತ ಉರಗ ತಜ್ಞರು, ವೈದ್ಯರು ಈ ಬಗ್ಗೆ ಹೇಳೋದೇನು..?

ಬಾಲಕನಿಗೆ 9 ಬಾರಿ ಹಾವು ಕಚ್ಚಿರೋದು ನಿಜನಾ..? ಖ್ಯಾತ ಉರಗ ತಜ್ಞರು, ವೈದ್ಯರು ಈ ಬಗ್ಗೆ ಹೇಳೋದೇನು..?

Published : Sep 01, 2023, 11:57 AM IST

ಹಾವಿನ ದ್ವೇಷ 12 ವರುಷ ಅನ್ನೋ ಗಾದೆ ಮಾತು ನೀವ್ ಕೇಳೇ ಇರ್ತೀರಾ. ಆದ್ರೆ  ಇಲ್ಲೊಬ್ಬ 14 ವರ್ಷದ ಪೋರನಿಗೆ ಒಂದಲ್ಲ ಎರಡಲ್ಲ ಬರೋಬ್ಬರಿ 9 ಬಾರಿ ಹಾವು ಕಚ್ಚಿದೆ ಅನ್ನೋ ಸುದ್ದಿ ರಾಜ್ಯಾದ್ಯಂತ ಸುದ್ದಿಯಾಗುತ್ತಿದೆ. ಆದ್ರೆ ಈ ಬಾಲಕ ಪ್ರಜ್ವಲ್‌ಗೆ ಪದೇ ಪದೇ ಹಾವು ಕಚ್ಚುತ್ತಿರೋದು ನಿಜವೋ.. ಸುಳ್ಳೋ..? ಅನ್ನೋ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

ಪ್ರಜ್ವಲ್‌ಗೆ 9 ಬಾರಿ ಹಾವು ಕಚ್ಚಿದೆ ಎಂದು ಪೋಷಕರು ಹೇಳ್ತಿದ್ದಾರೆ. ಆದ್ರೆ ಪ್ರಜ್ವಲ್‌ಗೆ ಚಿಕಿತ್ಸೆ ನೀಡಿರುವ ಕಲಬುರಗಿ(Kalaburagi) ಜಿಮ್ಸ್‌ನ ವೈದ್ಯರು ಹೇಳೋದೇ ಬೇರೆ. ಬಾಲಕನಿಗೆ ಮೊದಲ ಬಾರಿ ಹಾವು(Snake) ಕಚ್ಚಿದ್ದು ನಿಜ, ಆಡ್ಮಿಟ್ ಆಗಿದ್ದಾಗ ಅಂತಹ ಲಕ್ಷಣಗಳು ಕಂಡಿದ್ದವು. ಆದ್ರೆ, ನಂತರ ಬಂದಾಗ ಹಾವು ಕಚ್ಚಿದ ಲಕ್ಷಣಗಳು ಗೋಚರಿಸಿರಲಿಲ್ಲ ಎನ್ನುತ್ತಿದ್ದಾರೆ ವೈದ್ಯರು. ಉರಗ ತಜ್ಞ ಸ್ನೇಕ್ ಶಾಮ್(Snake Sham) ಕೂಡ  ಹಾವಿನ ದ್ವೇಷ 12 ವರ್ಷ ಅನ್ನೋದನ್ನು ತಳ್ಳಿ ಹಾಕುತ್ತಿದ್ದಾರೆ. ಹಾವು ಅಂಜುಬುರಕ ಜೀವಿ, ಅದ್ರಲ್ಲೂ ಹಾವಿನ ಜ್ಞಾಪಕ ಶಕ್ತಿ ಕಡಿಮೆ. ದ್ವೇಷ ಇಟ್ಟುಕೊಂಡು ಹುಡುಕಿ ಕಚ್ಚುವ ಜಾಯಮಾನ ಹಾವುಗಳದ್ದು ಅಲ್ಲವೇ ಅಲ್ಲ ಅಂತಾರೆ ಮೈಸೂರಿನ ಪ್ರಸಿದ್ದ ಉರಗ ತಜ್ಞ ಸ್ನೇಕ ಶಾಮ್. ಬಾಲಕನ ಕುಟುಂಬ ಮಾತ್ರ ಹಾವಿನ ಗುಂಗಿನಿಂದ ಹೊರ ಬಂದಿಲ್ಲ. ತಮ್ಮ ಹೊಲದಲ್ಲಿನ ತಾಯಮ್ಮ ಕಾಡುತ್ತಿದ್ದಾಳೆ ಅಂತ ಯಾರೋ ಹೇಳಿದ್ದಕ್ಕೆ ತಾಯಮ್ಮನ ಗುಡಿಯನ್ನೇ ನಿರ್ಮಿಸಿದ್ದಾರೆ. ತಾಯಮ್ಮ ಗುಡಿ ಕಟ್ಟಿಸಿದ ಮರು ದಿನವೇ 9 ನೇ ಬಾರಿ ಹಾವು ಕಚ್ಚಿದಿಯಂತೆ. ಪ್ರಜ್ವಲ್ ಪೋಷಕರು ಸಿಕ್ಕ ಸಿಕ್ಕ ದೇಗುಲಗಳಿಗೆ ಭೇಟಿ ನೀಡಿ ಪೂಜೆ ಮಾಡುತ್ತಿದ್ದಾರೆ. ನಾಗ ದೋಷ ಸರಿಹೋಗಲೆಂದು ಬೇಡಿಕೊಳ್ಳುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ:  ಪ್ರತಿಭಟನೆ ಮಧ್ಯೆಯೂ ಹರಿಯುತ್ತಿರುವ ಕಾವೇರಿ: ಸುಪ್ರೀಂ ಅಂಗಳದಲ್ಲಿ ‘ಕಾವೇರಿ’ ಭವಿಷ್ಯ !

23:42ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
25:29ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ
01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
Read more