ಬಾಲಕನಿಗೆ 9 ಬಾರಿ ಹಾವು ಕಚ್ಚಿರೋದು ನಿಜನಾ..? ಖ್ಯಾತ ಉರಗ ತಜ್ಞರು, ವೈದ್ಯರು ಈ ಬಗ್ಗೆ ಹೇಳೋದೇನು..?

ಬಾಲಕನಿಗೆ 9 ಬಾರಿ ಹಾವು ಕಚ್ಚಿರೋದು ನಿಜನಾ..? ಖ್ಯಾತ ಉರಗ ತಜ್ಞರು, ವೈದ್ಯರು ಈ ಬಗ್ಗೆ ಹೇಳೋದೇನು..?

Published : Sep 01, 2023, 11:57 AM IST

ಹಾವಿನ ದ್ವೇಷ 12 ವರುಷ ಅನ್ನೋ ಗಾದೆ ಮಾತು ನೀವ್ ಕೇಳೇ ಇರ್ತೀರಾ. ಆದ್ರೆ  ಇಲ್ಲೊಬ್ಬ 14 ವರ್ಷದ ಪೋರನಿಗೆ ಒಂದಲ್ಲ ಎರಡಲ್ಲ ಬರೋಬ್ಬರಿ 9 ಬಾರಿ ಹಾವು ಕಚ್ಚಿದೆ ಅನ್ನೋ ಸುದ್ದಿ ರಾಜ್ಯಾದ್ಯಂತ ಸುದ್ದಿಯಾಗುತ್ತಿದೆ. ಆದ್ರೆ ಈ ಬಾಲಕ ಪ್ರಜ್ವಲ್‌ಗೆ ಪದೇ ಪದೇ ಹಾವು ಕಚ್ಚುತ್ತಿರೋದು ನಿಜವೋ.. ಸುಳ್ಳೋ..? ಅನ್ನೋ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

ಪ್ರಜ್ವಲ್‌ಗೆ 9 ಬಾರಿ ಹಾವು ಕಚ್ಚಿದೆ ಎಂದು ಪೋಷಕರು ಹೇಳ್ತಿದ್ದಾರೆ. ಆದ್ರೆ ಪ್ರಜ್ವಲ್‌ಗೆ ಚಿಕಿತ್ಸೆ ನೀಡಿರುವ ಕಲಬುರಗಿ(Kalaburagi) ಜಿಮ್ಸ್‌ನ ವೈದ್ಯರು ಹೇಳೋದೇ ಬೇರೆ. ಬಾಲಕನಿಗೆ ಮೊದಲ ಬಾರಿ ಹಾವು(Snake) ಕಚ್ಚಿದ್ದು ನಿಜ, ಆಡ್ಮಿಟ್ ಆಗಿದ್ದಾಗ ಅಂತಹ ಲಕ್ಷಣಗಳು ಕಂಡಿದ್ದವು. ಆದ್ರೆ, ನಂತರ ಬಂದಾಗ ಹಾವು ಕಚ್ಚಿದ ಲಕ್ಷಣಗಳು ಗೋಚರಿಸಿರಲಿಲ್ಲ ಎನ್ನುತ್ತಿದ್ದಾರೆ ವೈದ್ಯರು. ಉರಗ ತಜ್ಞ ಸ್ನೇಕ್ ಶಾಮ್(Snake Sham) ಕೂಡ  ಹಾವಿನ ದ್ವೇಷ 12 ವರ್ಷ ಅನ್ನೋದನ್ನು ತಳ್ಳಿ ಹಾಕುತ್ತಿದ್ದಾರೆ. ಹಾವು ಅಂಜುಬುರಕ ಜೀವಿ, ಅದ್ರಲ್ಲೂ ಹಾವಿನ ಜ್ಞಾಪಕ ಶಕ್ತಿ ಕಡಿಮೆ. ದ್ವೇಷ ಇಟ್ಟುಕೊಂಡು ಹುಡುಕಿ ಕಚ್ಚುವ ಜಾಯಮಾನ ಹಾವುಗಳದ್ದು ಅಲ್ಲವೇ ಅಲ್ಲ ಅಂತಾರೆ ಮೈಸೂರಿನ ಪ್ರಸಿದ್ದ ಉರಗ ತಜ್ಞ ಸ್ನೇಕ ಶಾಮ್. ಬಾಲಕನ ಕುಟುಂಬ ಮಾತ್ರ ಹಾವಿನ ಗುಂಗಿನಿಂದ ಹೊರ ಬಂದಿಲ್ಲ. ತಮ್ಮ ಹೊಲದಲ್ಲಿನ ತಾಯಮ್ಮ ಕಾಡುತ್ತಿದ್ದಾಳೆ ಅಂತ ಯಾರೋ ಹೇಳಿದ್ದಕ್ಕೆ ತಾಯಮ್ಮನ ಗುಡಿಯನ್ನೇ ನಿರ್ಮಿಸಿದ್ದಾರೆ. ತಾಯಮ್ಮ ಗುಡಿ ಕಟ್ಟಿಸಿದ ಮರು ದಿನವೇ 9 ನೇ ಬಾರಿ ಹಾವು ಕಚ್ಚಿದಿಯಂತೆ. ಪ್ರಜ್ವಲ್ ಪೋಷಕರು ಸಿಕ್ಕ ಸಿಕ್ಕ ದೇಗುಲಗಳಿಗೆ ಭೇಟಿ ನೀಡಿ ಪೂಜೆ ಮಾಡುತ್ತಿದ್ದಾರೆ. ನಾಗ ದೋಷ ಸರಿಹೋಗಲೆಂದು ಬೇಡಿಕೊಳ್ಳುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ:  ಪ್ರತಿಭಟನೆ ಮಧ್ಯೆಯೂ ಹರಿಯುತ್ತಿರುವ ಕಾವೇರಿ: ಸುಪ್ರೀಂ ಅಂಗಳದಲ್ಲಿ ‘ಕಾವೇರಿ’ ಭವಿಷ್ಯ !

27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
45:33ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!
26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
Read more