ಬಾಲಕನಿಗೆ 9 ಬಾರಿ ಹಾವು ಕಚ್ಚಿರೋದು ನಿಜನಾ..? ಖ್ಯಾತ ಉರಗ ತಜ್ಞರು, ವೈದ್ಯರು ಈ ಬಗ್ಗೆ ಹೇಳೋದೇನು..?

ಬಾಲಕನಿಗೆ 9 ಬಾರಿ ಹಾವು ಕಚ್ಚಿರೋದು ನಿಜನಾ..? ಖ್ಯಾತ ಉರಗ ತಜ್ಞರು, ವೈದ್ಯರು ಈ ಬಗ್ಗೆ ಹೇಳೋದೇನು..?

Published : Sep 01, 2023, 11:57 AM IST

ಹಾವಿನ ದ್ವೇಷ 12 ವರುಷ ಅನ್ನೋ ಗಾದೆ ಮಾತು ನೀವ್ ಕೇಳೇ ಇರ್ತೀರಾ. ಆದ್ರೆ  ಇಲ್ಲೊಬ್ಬ 14 ವರ್ಷದ ಪೋರನಿಗೆ ಒಂದಲ್ಲ ಎರಡಲ್ಲ ಬರೋಬ್ಬರಿ 9 ಬಾರಿ ಹಾವು ಕಚ್ಚಿದೆ ಅನ್ನೋ ಸುದ್ದಿ ರಾಜ್ಯಾದ್ಯಂತ ಸುದ್ದಿಯಾಗುತ್ತಿದೆ. ಆದ್ರೆ ಈ ಬಾಲಕ ಪ್ರಜ್ವಲ್‌ಗೆ ಪದೇ ಪದೇ ಹಾವು ಕಚ್ಚುತ್ತಿರೋದು ನಿಜವೋ.. ಸುಳ್ಳೋ..? ಅನ್ನೋ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

ಪ್ರಜ್ವಲ್‌ಗೆ 9 ಬಾರಿ ಹಾವು ಕಚ್ಚಿದೆ ಎಂದು ಪೋಷಕರು ಹೇಳ್ತಿದ್ದಾರೆ. ಆದ್ರೆ ಪ್ರಜ್ವಲ್‌ಗೆ ಚಿಕಿತ್ಸೆ ನೀಡಿರುವ ಕಲಬುರಗಿ(Kalaburagi) ಜಿಮ್ಸ್‌ನ ವೈದ್ಯರು ಹೇಳೋದೇ ಬೇರೆ. ಬಾಲಕನಿಗೆ ಮೊದಲ ಬಾರಿ ಹಾವು(Snake) ಕಚ್ಚಿದ್ದು ನಿಜ, ಆಡ್ಮಿಟ್ ಆಗಿದ್ದಾಗ ಅಂತಹ ಲಕ್ಷಣಗಳು ಕಂಡಿದ್ದವು. ಆದ್ರೆ, ನಂತರ ಬಂದಾಗ ಹಾವು ಕಚ್ಚಿದ ಲಕ್ಷಣಗಳು ಗೋಚರಿಸಿರಲಿಲ್ಲ ಎನ್ನುತ್ತಿದ್ದಾರೆ ವೈದ್ಯರು. ಉರಗ ತಜ್ಞ ಸ್ನೇಕ್ ಶಾಮ್(Snake Sham) ಕೂಡ  ಹಾವಿನ ದ್ವೇಷ 12 ವರ್ಷ ಅನ್ನೋದನ್ನು ತಳ್ಳಿ ಹಾಕುತ್ತಿದ್ದಾರೆ. ಹಾವು ಅಂಜುಬುರಕ ಜೀವಿ, ಅದ್ರಲ್ಲೂ ಹಾವಿನ ಜ್ಞಾಪಕ ಶಕ್ತಿ ಕಡಿಮೆ. ದ್ವೇಷ ಇಟ್ಟುಕೊಂಡು ಹುಡುಕಿ ಕಚ್ಚುವ ಜಾಯಮಾನ ಹಾವುಗಳದ್ದು ಅಲ್ಲವೇ ಅಲ್ಲ ಅಂತಾರೆ ಮೈಸೂರಿನ ಪ್ರಸಿದ್ದ ಉರಗ ತಜ್ಞ ಸ್ನೇಕ ಶಾಮ್. ಬಾಲಕನ ಕುಟುಂಬ ಮಾತ್ರ ಹಾವಿನ ಗುಂಗಿನಿಂದ ಹೊರ ಬಂದಿಲ್ಲ. ತಮ್ಮ ಹೊಲದಲ್ಲಿನ ತಾಯಮ್ಮ ಕಾಡುತ್ತಿದ್ದಾಳೆ ಅಂತ ಯಾರೋ ಹೇಳಿದ್ದಕ್ಕೆ ತಾಯಮ್ಮನ ಗುಡಿಯನ್ನೇ ನಿರ್ಮಿಸಿದ್ದಾರೆ. ತಾಯಮ್ಮ ಗುಡಿ ಕಟ್ಟಿಸಿದ ಮರು ದಿನವೇ 9 ನೇ ಬಾರಿ ಹಾವು ಕಚ್ಚಿದಿಯಂತೆ. ಪ್ರಜ್ವಲ್ ಪೋಷಕರು ಸಿಕ್ಕ ಸಿಕ್ಕ ದೇಗುಲಗಳಿಗೆ ಭೇಟಿ ನೀಡಿ ಪೂಜೆ ಮಾಡುತ್ತಿದ್ದಾರೆ. ನಾಗ ದೋಷ ಸರಿಹೋಗಲೆಂದು ಬೇಡಿಕೊಳ್ಳುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ:  ಪ್ರತಿಭಟನೆ ಮಧ್ಯೆಯೂ ಹರಿಯುತ್ತಿರುವ ಕಾವೇರಿ: ಸುಪ್ರೀಂ ಅಂಗಳದಲ್ಲಿ ‘ಕಾವೇರಿ’ ಭವಿಷ್ಯ !

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more