ಸಸಿ ನೆಟ್ಟ ಸೋಂಕಿತರು, ರೇಣುಕಾಚಾರ್ಯರಿಂದ ಮತ್ತೊಂದು ಮಾದರಿ ಕೆಲಸ

Jun 20, 2021, 5:08 PM IST

ದಾವಣಗೆರೆ (ಜೂ. 20) ಕೊರೋನಾ ಸಂಕಷ್ಟದ ಕಾಲದಲ್ಲಿ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ತಮ್ಮ ಕ್ಷೇತ್ರದ ಜನರಿಗೆ ಸದಾ ಸ್ಪಂದಿಸುತ್ತಲೇ ಬಂದಿದ್ದಾರೆ.

ಕೊರೋನಾ ಕೇಂದ್ರದಲ್ಲಿಯೇ ರೇಣುಕಾಚಾರ್ಯ ವಾಸ್ತವ್ಯ

ಹೊನ್ನಾಳಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಅರಬಗಟ್ಟೆಯ ಕೋವಿಡ್ ಕೇರ್ ಸೆಂಟರ್  ನಲ್ಲಿ ಸೊಂಕಿತರಿಂದ ಸಸಿ ನೆಟ್ಟಿಸಿದ್ದಾರೆ. ಪರಿಸರದ ಜಾಗೃತಿ ಮೂಡಿಸಲು ಮೊರಾರ್ಜಿ ವಸತಿ ಶಾಲೆ ಮೈದಾನದಲ್ಲಿ ಕಾರ್ಯಕ್ರಮ ನಡೆದಿದ್ದು ರೇಣುಕಾಚಾರ್ಯ ಜತೆಗಿದ್ದರು.