ಅನುಮಾನಕ್ಕೆಲ್ಲಾ ಉತ್ತರ ನೀಡುತ್ತಾ ವಿಧಿವಿಜ್ಞಾನ ಪರೀಕ್ಷೆ? ಡಿ ಗ್ಯಾಂಗ್ ವಿರುದ್ಧ  ಡಿಜಿಟಲ್ ಸಾಕ್ಷಿಗಳು!

ಅನುಮಾನಕ್ಕೆಲ್ಲಾ ಉತ್ತರ ನೀಡುತ್ತಾ ವಿಧಿವಿಜ್ಞಾನ ಪರೀಕ್ಷೆ? ಡಿ ಗ್ಯಾಂಗ್ ವಿರುದ್ಧ ಡಿಜಿಟಲ್ ಸಾಕ್ಷಿಗಳು!

Published : Jun 21, 2024, 04:45 PM IST


ಬರ್ಬರ ಹತ್ಯೆಯ ಗುಟ್ಟು ಹೇಳುತ್ತಾ ವೈಜ್ಞಾನಿಕ ಪರೀಕ್ಷೆ..?
ಎಫ್ಎಸ್ಎಲ್‌ ವರದಿಗಾಗಿ ಕಾಯ್ತಿರೋದೇಕೆ ಪೊಲೀಸರು.?
ಇಲ್ಲಿ ತನಕ ಆಗಿದ್ದೇನು? ಇನ್ನುಮುಂದೆ ಆಗಲಿರೋದೇನು..?

ಡೆವಿಲ್ ಗ್ಯಾಂಗ್ ವಿರುದ್ಧ ಸಾಕ್ಷಿ ಹೇಳೋಕೆ ಸಿದ್ಧವಾಗ್ತಾ ಇದೆಯಂತೆ  ಡಿಎನ್ಎ ಪರೀಕ್ಷೆಯ(DNA test) ಫಲಿತಾಂಶ. ಆರೋಪಿಗಳು 17 ಮಂದಿ. ಆದ್ರೆ ಡಿಎನ್ಎ ಪರೀಕ್ಷೆ ನಡೆದದ್ದು ಆ  9 ಜನರದ್ದು ಮಾತ್ರ. ರೇಣುಕಾಸ್ವಾಮಿ ಅನ್ನೋ ಬಡಕಲು ದೇಹದ ಆಸಾಮಿಯ ಕೊಲೆ. ಅದು ಬರೀ ಕೊಲೆ ಅಲ್ಲ, ಭೀಕರ ಹತ್ಯೆ. ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ತಪ್ಪಿಗೆ, ರೇಣುಕಾಸ್ವಾಮಿಗೆ(Renukaswamy Murder case) ಚಿತ್ರಹಿಂಸೆ ಕೊಟ್ಟು  ಕೊಂದಿತ್ತು ಡೆವಿಲ್(Darshan) ಗ್ಯಾಂಗ್. ಮೈತುಂಬಾ ಸುಟ್ಟ ಗಾಯಗಳು, ಪುಡಿಪುಡಿಯಾದ ಎಲುಬುಗಳು, ಕಿತ್ತುಬಂದ ದವಡೆ, ಇದೆಲ್ಲವೂ ಕೂಡ ರೇಣುಕಾಸ್ವಾಮಿಯ ಅಂತಿಮ ಕ್ಷಣಗಳ ಭೀಕರತೆಯ ಪ್ರತಿಬಿಂಬವಾಗಿದ್ವು. ಸಾಯೋ ಮುಂಚೆ, ನಾನೂ ದರ್ಶನ್ ಅಭಿಮಾನಿನೇ ಅಂತ ಬಾಯ್ ಬಾಯ್ ಬಡ್ಕೊಂಡ್ರೂ, ಅಲ್ಲಿದ್ದ ಪುಡಾಂಗ್‌ಗಳಿಗೆ ಅದು ಕೇಳಿಸಲೇ ಇಲ್ಲ. ರೇಣುಕಾಸ್ವಾಮಿ ಕಳಿಸಬಾರದ ಮೆಸೇಜ್ ಕಳಿಸದೇ ಇದ್ದಿದ್ರೆ, ತನ್ನ ಗರ್ಭಿಣಿ ಹೆಂಡತಿಯ ಕಡೆಗೇ ಗಮನ ಕೊಟ್ಟಿದ್ದಿದ್ರೆ, ಇಷ್ಟೆಲ್ಲಾ ದಾರುಣ ಯಾಕಾದ್ರೂ ಆಗ್ತಿತ್ತು? ಇದು ಹಲವರ ಪ್ರಶ್ನೆ. ಆದ್ರೆ ಅವನು ಮಾಡಿದ ತಪ್ಪಿಗೆ, ಡಿ ಗ್ಯಾಂಗ್ ಅತಿಭೀಕರ ಶಿಕ್ಷೇನೇ ಕೊಟ್ಟುಬಿಟ್ಟಿದೆ. ಚಿತ್ರದುರ್ಗದಿಂದ ಕಿಡ್ನಾಪ್ ಮಾಡ್ಕೊಂಡ್ ಬಂದು, ಬೆಂಗಳೂರಿನ ಸುಮ್ಮನಹಳ್ಳಿಯಲ್ಲಿ ಡೆಡ್ ಬಾಡಿ ಬಿಸಾಡೋ ತನಕ, ಮಾಡಿದ ಪ್ರತಿ ಕೆಲಸವೂ ಘೋರವಾಗಿದೆ.

ಇದನ್ನೂ ವೀಕ್ಷಿಸಿ:  ಡಿ ಗ್ಯಾಂಗ್ ವಿರುದ್ಧ 10 ಕಠಿಣ ಸೆಕ್ಷನ್‌ಗಳು...! ಕೋರ್ಟ್‌ನಲ್ಲಿ ಹೇಗಿತ್ತು ವಾದ-ಪ್ರತಿವಾದ..!

22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
23:26Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!
23:26FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?