ಲಾಜಿಕ್‌ ಇಲ್ಲದ ಮಾತು ಆಡೋದ್ರಲ್ಲಿ ದರ್ಶನ್‌ ಎಕ್ಸ್‌ಪರ್ಟ್‌! ಅಭಿಮಾನಿ ಕೊಟ್ಟ ಉಡುಗೊರೆ ಏನು? ನಟ ಹೇಳಿದ್ದೇನು?

Jun 22, 2024, 9:20 AM IST

ನಟ ದರ್ಶನ್‌(Actor Darshan) ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ(Renukaswamy murder case) ಅರೆಸ್ಟ್‌ ಆಗಿದ್ದಾರೆ. ರೇಣುಕಾಸ್ವಾಮಿ ಮೃತದೇಹ ಒಂದು ಮೋರಿ ಬಳಿ ಸಿಕ್ಕಿದೆ. ಈ ಪ್ರಕರಣದಲ್ಲಿ ದರ್ಶನ್‌ ಕೈವಾಡವಿದೆ ಎಂಬುದನ್ನು ಸಾಬೀತುಪಡಿಸಲು ಹಲವಾರು ಸಾಕ್ಷಿಗಳು ಸಹ ದೊರೆತಿವೆ. ನಟ ದರ್ಶನ್‌ ಮಾತಿನಲ್ಲಿ ಇತ್ತೀಚಿಗೆ ದರ್ಪ, ಅಹಂಕಾರ ಎದ್ದು ಕಾಣುತ್ತಿದೆ. ಒಮ್ಮೆ ನಟ ದರ್ಶನ್‌ಗೆ ಅಭಿಮಾನಿಯೊಬ್ಬ ಕೊಡಬಾರದ ಉಡುಗೊರೆಯೊಂದನ್ನು ಕೊಟ್ಟಿದ್ದ, ಕಾರ್ಯಕ್ರಮದಲ್ಲಿ ನಟ ದರ್ಶನ್‌ ಮೇಲೆ ಅಭಿಮಾನಿಯೊಬ್ಬ ಚಪ್ಪಲಿ ಎಸೆದಿದ್ದ. ಬಳಿಕ ಇದನ್ನು ದರ್ಶನ್‌ ಸಮರ್ಥಿಸಿಕೊಂಡಿದ್ದರು. ಅಲ್ಲದೇ ಹೇಳಿದ ಒರಟು ಮಾತಿಗೆ ಸಮಜಾಯಿಷಿಯನ್ನು ನೀಡಿದ್ದರು.

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರಿಗೆ ಇಂದು ಪ್ರಯಾಣದಲ್ಲಿ ತೊಂದರೆಯಾಗಲಿದ್ದು, ವೃತ್ತಿಯಲ್ಲಿ ಕಿರಿಕಿರಿ ಉಂಟಾಗಲಿದೆ..