ವಿಜಯಪುರ: 'ಸಿದ್ದೇಶ್ವರ ಶ್ರೀ ಆರೋಗ್ಯ ಬಗ್ಗೆ ವದಂತಿ ಹರಡಬೇಡಿ, ಕೋವಿಡ್‌ ಹಿನ್ನೆಲೆ ದರ್ಶನ ಇಲ್ಲ'

Dec 31, 2022, 10:52 AM IST

ವಿಜಯಪುರ(ಡಿ.31):  ಸಿದ್ದೇಶ್ವರ ಶ್ರೀ ಆರೋಗ್ಯ ಬಗ್ಗೆ ವದಂತಿ ಹರಡಬೇಡಿ, ಕೋವಿಡ್‌ ಕಾರಣದಿಂದ ನಾಳೆಯಿಂದ ಶ್ರೀಗಳ ನೇರ ದರ್ಶನ ಇಲ್ಲ ಅಂತ ಕಿರಿಯ ಶ್ರೀ ಬಸವಲಿಂಗ ಸ್ವಾಮೀಜಿ ತಿಳಿಸಿದ್ದಾರೆ. ಸಿದ್ದೇಶ್ವರ ಶ್ರೀಗಳು ಆರೋಗ್ಯವಾಗಿದ್ದಾರೆ, ಚೇತರಿಸಿಕೊಳ್ಳುತ್ತಿದ್ದಾರೆ. ವರ್ಚುವಲ್‌ ಆಗಿ ಶ್ರೀಗಳು ಭಕ್ತರಿಗೆ ದರ್ಶನ ನೀಡಲಿದ್ದಾರೆ ಅಂತ ಹೇಳಿದ್ದಾರೆ. ಸಿದ್ದೇಶ್ವರ ಶ್ರೀಗಳ ರಕ್ತದೊತ್ತಡ, ನಾಡಿಮಿಡಿತ ಸರಿಯಾಗಿದೆ. ರಕ್ತ ಪರೀಕ್ಷೆಯಲ್ಲೂ ಯಾವುದೇ ದೋಷ ಕಂಡುಬಂದಿಲ್ಲ ಅಂತ ಭಕ್ತರಿಗೆ ಮಾಹಿತಿ ನೀಡಿದ್ದಾರೆ.  

ಕತ್ತೆ ಮಾಂಸಕ್ಕಾಗಿ 'ರಾಕ್ಷಸ' ಕಸರತ್ತು: 'ಚೀನಾ' ನಡೆಸಿದೆ ಭಯಂಕರ ಸಂಚಕಾರ