ಎಫ್‌ಎಸ್‌ಎಲ್‌ ವರದಿ ಮುಚ್ಚಿ ಮತ್ತೊಂದು ಬೋಗಸ್ ವರದಿ ತಯಾರಿಸಲು ಸರ್ಕಾರ ಮುಂದಾಗಿದೆ: ಬಿ.ವೈ. ವಿಜಯೇಂದ್ರ

Mar 2, 2024, 1:23 PM IST

ಪಾಕ್ ಪರ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ. ಸಚಿವರ ಹೇಳಿಕೆಗಳು ಯಾವ ರೀತಿ ಇದ್ದವು ಎಂದ್ರೆ, ಅವರ ಹೇಳಿಕೆಗಳನ್ನ ಜನ ನಂಬಲ್ಲ. ನಾಲ್ಕೈದು ದಿನ ಆದ್ರೂ FSL ವರದಿ ಬಂದಿಲ್ಲ. ಎಫ್‌ಎಸ್‌ಎಲ್ ವರದಿ ಬಂದಿಲ್ಲ ಅಂತ ಸಿಎಂ ಮೈಸೂರಲ್ಲಿ ಹೇಳಿದ್ದಾರೆ. ಆದರೆ ನಮಗೆ ಬಂದ ಮಾಹಿತಿ ಪ್ರಕಾರ ಎಫ್‌ಎಸ್‌ಎಲ್ ವರದಿ ಬಂದಿದೆ. ಆದ್ರೆ ಅದನ್ನು ಮುಚ್ಚಿ ಮತ್ತೊಂದು ಬೋಗಸ್ ವರದಿ ತಯಾರಿಸಲು ಸರ್ಕಾರ ಮುಂದಾಗಿದೆ ಎಂದು ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.

ಇದನ್ನೂ ವೀಕ್ಷಿಸಿ: Rameshwaram Cafe Blast: 10 ವರ್ಷದ ಬಳಿಕ ಬೆಂಗಳೂರಲ್ಲಿ ಬಾಂಬ್ ಬ್ಲಾಸ್ಟ್! ಈ ಸ್ಫೋಟ..ಭಯೋತ್ಪಾದಕ ಕೃತ್ಯವೇ..?