ಮೈಸೂರಿನಲ್ಲಿ ಇನ್ನೂ ಜೀವಂತ ಇದೆ ಅನಿಷ್ಟ ಪದ್ಧತಿ

Oct 27, 2021, 11:24 AM IST

ಮೈಸೂರು (ಅ.27):  ಮೈಸೂರಿನಲ್ಲಿ ಇನ್ನೂ ಜೀವಂತ ಇದೆ ಅನಿಷ್ಟ ಬಹಿಷ್ಕಾರ ಪದ್ದತಿ. ಯಜಮಾನರ ಮಾತು ಮೀರಿದ ಹಿನ್ನೆಲೆ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ.  ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಮೂಗೂರು ಗ್ರಾಮದಲ್ಲಿ ಅನಿಷ್ಟ ಪದ್ಧತಿ ಬೆಳಕಿಗೆ ಬಂದಿದೆ. 

ಬೆಳಗಾವಿ: ಜಮೀನು ವಿವಾದ, ಯೋಧನ ಕುಟುಂಬಕ್ಕೆ ಬಹಿಷ್ಕಾರ

ತಮಗಾದ ಅನ್ಯಾಯ ಪ್ರಶ್ನಿಸಿದ್ದಕ್ಕೆ ಹಾಕಿರುವ ಬಹಿಷ್ಕಾರ ಹಾಕಲಾಗಿದೆ. ಗ್ರಾಮ ಪಂಚಾಯ್ತಿ ಸದಸ್ಯೆಯ ಕುಟುಂಬಕ್ಕೂ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಬಹಿಷ್ಕಾರಕ್ಕೆ ಒಳಾಗಿರುವ ಕುಟುಂಬ ಸದಸ್ಯರನ್ನು ಯಾರು ಮಾತನಾಡಿಸುವಂತಿಲ್ಲ. ಶುಭ ಸಮಾರಂಭಗಳಿಗೆ ಆಹ್ವಾನಿಸುವಂತಿಲ್ಲ, ನೆರವು ನೀಡುವಂತಿಲ್ಲ.ಬಹಿಷ್ಕಾರಕ್ಕೊಳಗಾದವರ ವಿವಾಹವೊಂದರಲ್ಲಿ ಭಾಗಿಯಾದವರಿಗೆ ಬಿದ್ದಿದೆ 25 ಸಾವಿರ ದಂಡ ವಿಧಿಸಲಾಗುತ್ತದೆ.  ವಾಲ್ಮೀಕಿ ಭವನಕ್ಕೆ ಜಾಗ ಕೊಡಲಿಲ್ಲ ಎಂದು ಕೋಪದಿಂದ ಬಹಿಷ್ಕಾರ ಹಾಕಲಾಗಿದೆ.