2024ರಲ್ಲಿ ದೇಶದ ಗದ್ದುಗೆ ಏರೋದು ಯಾರು? ಲೋಕಸಭೆಯ ಭವಿಷ್ಯ ಬಿಚ್ಚಿಟ್ಟ 2 ಮಹಾ ಸಮೀಕ್ಷೆ!

2024ರಲ್ಲಿ ದೇಶದ ಗದ್ದುಗೆ ಏರೋದು ಯಾರು? ಲೋಕಸಭೆಯ ಭವಿಷ್ಯ ಬಿಚ್ಚಿಟ್ಟ 2 ಮಹಾ ಸಮೀಕ್ಷೆ!

Published : Oct 09, 2023, 09:32 AM IST

2024ರ ಚುನಾವಣೆಯಲ್ಲಿ ನರೇಂದ್ರ ಮೋದಿ ಗೆದ್ದು ಮತ್ತೆ ಪ್ರಧಾನಿಯಾಗ್ತಾರಾ..? ನೆಹರು ನಂತರ ಈವರೆಗೆ ಯಾವ ಪ್ರಧಾನಿಯೂ 3ನೇ ಬಾರಿಗೆ ಆಯ್ಕೆಯಾದ ಉದಾಹರಣೆಯಿಲ್ಲ. 3 ಬಾರಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಗೆದ್ದಿದ್ದು ಸತತ 2 ಚುನಾವಣೆಗಳನ್ನಷ್ಟೇ. ಮೂರನೇ ಚುನಾವಣೆಯನ್ನ ಸೋತಿದ್ದರು ಇಂದಿರಾ. ಈಗ ಮೋದಿ ಮತ್ತೆ ನಾನೇ ಪ್ರಧಾನಿ ಅಂತಿದ್ದಾರೆ.. ಇತ್ತೀಚೆಗೆ 2 ಸಂಸ್ಥೆಗಳು ಲೋಕಸಭಾ ಚುನಾವಣೆಯ ಸಮೀಕ್ಷೆಗಳನ್ನ ಮಾಡಿವೆ.

2024ರ ಲೋಕಸಭಾ ಚುನಾವಣೆಗೆ ಉಳಿದಿರೋದು ಕೇವಲ 5 ತಿಂಗಳಷ್ಟೇ ಈಗಾಗಲೇ ರಾಜಕೀಯ ಪಕ್ಷಗಳು ಅಧಿಕಾರದ ಗದ್ದುಗೆ ಹಿಡಿಯೋಕೆ  ತಮ್ಮದೇ ಆದ ರಣತಂತ್ರ ಹೆಣೆಯುತ್ತಿವೆ. ಈ ಮಧ್ಯೆ ಲೋಕಸಭೆ ಚುನಾವಣೆ(Loksabha) ಬಗ್ಗೆ  2 ಸಮೀಕ್ಷೆಗಳು ಹೊರಬಿದ್ದಿದ್ದು. ಇವರೇ ಮುಂದೆ ಅಧಿಕಾರ ಹಿಡಿಯೋದು ಎಂದು ಹೇಳ್ತಿವೆ. ಇಂಡಿಯಾ ಟಿವಿ ಹಾಗೂ ಟೈಮ್ಸ್ ನೌ ಸಮೀಕ್ಷೆಗಳ(Survey) ಪ್ರಕಾರ ಆಡಳಿತರೂಢ ಎನ್ಡಿಎ ಮತ್ತೆ ಅಧಿಕಾರ ಹಿಡಿಯೋದು ಫಿಕ್ಸ್ ಎಂದು ಭವಿಷ್ಯ ನುಡಿದಿವೆ. ಇಂಡಿಯಾ ಮೈತ್ರಿಕೂಟ ಸ್ವಲ್ಪ ಉತ್ತಮ ಸಾಧನೆ ಮಾಡಿದ್ರೂ ಅಧಿಕಾರ ಹಿಡಿಯೋದು ಕನಸಾಗಿಯೇ ಉಳಿಯಲಿದೆ ಎಂದಿದೆ ಸಮೀಕ್ಷೆ. ಇಂಡಿಯಾ ಟಿವಿ ಸಮೀಕ್ಷೆ ಪ್ರಕಾರ 2024ರ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ(NDA) 543 ಸ್ಥಾನಗಳ ಪೈಕಿ 318 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ. ಇನ್ನೂ ಇಂಡಿಯಾ ಮೈತ್ರಿಕೂಟ 175 ಸ್ಥಾನ ಗೆಲ್ಲಬಹುದು ಎನ್ನಲಾಗಿದೆ. ಟೈಮ್ಸ್ ನೌ ಸಮೀಕ್ಷೆ(Times Now survey) ಪ್ರಕಾರ ಎನ್ಡಿಎ ಮೈತ್ರಿಕೂಟ 2024ರ ಚುನಾವಣೆಯಲ್ಲಿ ಶೇಕಡ 42.6ರಷ್ಟು ಮತಗಳೊಂದಿಗೆ 297 ರಿಂದ 317 ಸ್ಥಾನ,  ಇಂಡಿಯಾ ಮೈತ್ರಿಕೂಟ ಶೇಕಡ 40.2ರಷ್ಟು ಮತಗಳೊಂದಿಗೆ 165 ರಿಂದ 185 ರ ಸ್ಥಾನ, ಯಾವುದೇ ಬಣ ಸೇರದೇ ತಟಸ್ಥವಾಗಿರೋ ವೈಎಸ್ಆರ್ಸಿಪಿ 24 ರಿಂದ 25 ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಇನ್ನೂ ಬಿಜೆಡಿ 13 ರಿಂದ 15 ಸ್ಥಾನ ಗೆಲ್ಲಬಹುದು, ಬಿಆರ್ಎಸ್ 9 ರಿಂದ 11 ಸ್ಥಾನ ಗೆಲ್ಲುವ ಸಾಧ್ಯತೆ ಇದೆ.. ಪಕ್ಷೇತರರು 11 ರಿಂದ 14 ಸ್ಥಾನಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ. ಇಂಡಿಯಾ ಟಿವಿ, ಟೈಮ್ಸ್ ನೌ ಸಮೀಕ್ಷೆಗಳು ಪಕ್ಷಗಳ ಸ್ಥಾನಗಳ ಬಗ್ಗೆಯೂ ಭವಿಷ್ಯ ನುಡಿದಿದ್ದು, ಮತ್ತೆ ಆಡಳಿತರೂಢ ಬಿಜೆಪಿ ಪಕ್ಷ ಸ್ವಂತ ಬಲದ ಮೇಲೆಯೇ ಅಧಿಕಾರದ ಗದ್ದುಗೆ ಏರಲಿದೆ ಎಂದು ಹೇಳಿದೆ.

ಇದನ್ನೂ ವೀಕ್ಷಿಸಿ:  Today Horoscope: ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ? ವೃಶ್ಚಿಕ ರಾಶಿಯವರಿಗೆ ವೃತ್ತಿಯಲ್ಲಿ ಇಂದು ಅನುಕೂಲ

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more