ತಿಹಾರ್ ಜೈಲು ಕಂಬಿ ಹಿಂದೆ ಉಗ್ರ ತಹಾವೂರ್.. ಯಾರು next​ ಟಾರ್ಗೆಟ್​..?

ತಿಹಾರ್ ಜೈಲು ಕಂಬಿ ಹಿಂದೆ ಉಗ್ರ ತಹಾವೂರ್.. ಯಾರು next​ ಟಾರ್ಗೆಟ್​..?

Published : Apr 11, 2025, 02:16 PM ISTUpdated : Apr 11, 2025, 02:20 PM IST

ಉಗ್ರ ಸಂಹಾರ ಯಜ್ಞ ಶುರುಮಾಡಿದ್ದಾರೆ ನರೇಂದ್ರ ಮೋದಿ.. ಭಾರತವನ್ನ ಬಲಿಷ್ಠಗೊಳಿಸ್ತಾ.. ಮೋದಿ ಇಡ್ತಾ ಇರೋ ಮಹಾ ಹೆಜ್ಜೆಗಳು ಹೇಗಿವೆ.? ನಮೋ ಆಡಳಿತದಲ್ಲಿ ರಕ್ತಪಿಪಾಸು ಉಗ್ರರ ಉಸಿರುಗಟ್ಟಿರೋದು ಹೇಗೆ.? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಮೋದಿ ರಕ್ಷಾವ್ಯೂಹ..

ಉಗ್ರ ಸಂಹಾರ ಯಜ್ಞ ಶುರುಮಾಡಿದ್ದಾರೆ ನರೇಂದ್ರ ಮೋದಿ.. ಭದ್ರಕೋಟೆಯಾಗಿ ಬದಲಾಗ್ತಿದೆ ಭಾರತ.. ತಿಹಾರ್ ಜೈಲು ಕಂಬಿ ಹಿಂದೆ ಬಂದಾಗಿದೆ ರಕ್ಕಸ ಉಗ್ರ ತಹಾವೂರ್ ರಾಣಾ.. ಹಾಗಿದ್ರೆ ನೆಕ್ಸ್ಟ್ ಯಾರು..? ಮೋದಿ ಮುಂದಿನ ಟಾರ್ಗೆಟ್ ಏನು..? ವೈರಿಗಳನ್ನ ವಿನಾಶ ಮಾಡ್ತಾ.. ಭಾರತವನ್ನ ಬಲಿಷ್ಠಗೊಳಿಸ್ತಾ.. ಮೋದಿ ಇಡ್ತಾ ಇರೋ ಮಹಾ ಹೆಜ್ಜೆಗಳು ಹೇಗಿವೆ.? ನಮೋ ಆಡಳಿತದಲ್ಲಿ ರಕ್ತಪಿಪಾಸು ಉಗ್ರರ ಉಸಿರುಗಟ್ಟಿರೋದು ಹೇಗೆ.? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಮೋದಿ ರಕ್ಷಾವ್ಯೂಹ..

 ಭಯೋತ್ಪಾದಕರ ಮಟ್ಟ ಹಾಕೋಕೆ ಮೋದಿ ಪಣತೊಟ್ಟಿರುವಾಗಲೇ ಅತ್ತ ಪಾಕಿಸ್ತಾನದಲ್ಲಿ ಮುಸುಕುಧಾರಿಗಳ ಆರ್ಭಟ ಜೋರಾಗಿದೆ. ಭಾರತಕ್ಕೆ ಬೇಕಾಗಿದ್ದ ಉಗ್ರರ ಕಥೆಯನ್ನ ಆ ಮುಸುಕುಧಾರಿಗಳು ಮುಗಿಸ್ತಾ ಇದ್ದಾರೆ.
 ಇತ್ತ ಉಗ್ರ ಸಂಹಾರಕ್ಕೆ ಮೋದಿ ಮಹಾಯಜ್ಞ ಶುರು ಮಾಡಿದ್ದಾರೆ.. ಅತ್ತ ಪಾಕಿಸ್ತಾನದಲ್ಲಿ  ಭಯೋತ್ಪಾಕದರನ್ನ ಹುಡುಕಿ, ಹುಡುಕಿ ಕೊಲ್ತಿದ್ದಾರೆ ಮುಸುಕುಧಾರಿಗಳು.. ಹೀಗಲ್ಲಿ ಉಗ್ರರ ಬೇಟೆಯಾಡ್ತಾ ಇರೋದು ಯಾರು ಅಂತ ಗೊತ್ತಿಲ್ಲ. ಆದ್ರೆ, ಅಲ್ಲಿ ಬಲಿಯಾಗಿರೋರ ಪೈಕಿ ಬಹುತೇಕರು ಭಾರತಕ್ಕೆ ಬೇಕಾಗಿದ್ದ ಉಗ್ರರು.

ದೇಶದ ಒಳಗೇ ಇದ್ಕೊಂಡು ಸರ್ಕಾರಕ್ಕೆ ಸವಾಲು ಹಾಕ್ತಿದ್ದ ಮತ್ತೊಂದು ಶಕ್ತಿಯನ್ನ ನಾಶಗೊಳಿಸಲು ಮೋದಿ ಸರ್ಕಾರ ಮುಂದಾಗಿದೆ. ಹಾಗಿದ್ರೆ, ಆ ಶಕ್ತಿ ಯಾವುದು..? ಅದನ್ನ ಇಲ್ಲವಾಗಿಸ್ತಾ ಇರೋದು ಹೇಗೆ..?
ದೇಶದ ಒಳಗೆ ಒಂದು ದೊಡ್ಡ ಕಾರ್ಯಾಚರಣೆ ನಡೆಯುತ್ತಿದೆ.. ಶರಣಾಗಿ ಇಲ್ಲವೇ ಹತರಾಗಿ ಎನ್ನುವ ಸಂದೇಶ ರವಾನೆಯಾಗಿದೆ. ಹಾಗಿದ್ರೇ ಈ ಸಂದೇಶ ಯಾರಿಗೆ ರವಾನೆಯಾಗಿರೋದು.? ಈಗ ನಡೀತಾಯಿರೋ ಕಾರ್ಯಾಚರಣೆಯಾದ್ರೂ ಏನು..?

ಇದುವರೆಗೆ ಭಾರತದ ತನಿಖಾ ಸಂಸ್ಥೆ ಕರೆತಂದಿರುವ ಉಗ್ರರು

ಗ್ಯಾಂಗ್​​ಸ್ಟರ್​ ಹಾಗೂ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾಗಿರೋ  ಆರೋಪ ಹೊತ್ತಿರುವ ಛೋಟಾ ರಾಜನ್ ನ ಇಂಡೋನೇಶಿಯಾದ ಬಾಲಿಯಿಂದ 2015ರಲ್ಲಿ ಭಾರತಕ್ಕೆ ಕರೆದುಕೊಂಡು ಬರಲಾಗಿದೆ. ಹಾಗೇನೆ, ಬಬ್ಬರ್ ಖಾಲ್ಸಾ ಇಂಟರ್​ ನ್ಯಾಷನಲ್​ ಸಂಘಟನೆಯ ಸದಸ್ಯ, 1995ರಲ್ಲಿ ಪಂಜಾಬ್​ ಸಿಎಂ ಬಿಯಾಂತ್​ ಸಿಂಗ್​ ಹತ್ಯೆ ಸಂಚಿನಲ್ಲಿ ಭಾಗಿಯಾಗಿದ್ದ ಜಗ್ತಾರ್​ ಸಿಂಗ್ ತಾರಾ  ಥೈಲ್ಯಾಂಡ್​ನಿಂದ ಭಾರತಕ್ಕೆ 2015ರಲ್ಲಿ ಹಸ್ತಾಂತರಗೊಂಡಿದ್ದ. ಇನ್ನು ಭಯೋತ್ಪಾದನೆ ಜೊತೆಗೆ ನಂಟು ಹೊಂದಿರೋ ಭೂಗತ ಪಾತಕಿ ರವಿಪೂಜಾರಿಯನ್ನ ಆಫ್ರಿಕಾದ ಸೆನೆಗಲ್​ನಿಂದ 2020ರಲ್ಲಿ ಕರೆದಕೊಂಡು ಬರಲಾಗಿದೆ. ಹಾಗೇನೆ, ಲಷ್ಕರ್​-ಎ-ತೊಯ್ಬಾ ಸದಸ್ಯನಾಗಿ ಬೆಂಗಳೂರಿನಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಆರೋಪ ಹೊತ್ತಿರೋ ಸಲ್ಮಾನ್ ರೆಹಮಾನ್ ಖಾನ್​ನ 2024ರಲ್ಲಿ ಆಫ್ರಿಕಾದ ರುವಾಂಡದಿಂದ ಕರೆದುಕೊಂಡು ಬರಲಾಗಿದೆ.

39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:58ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ
19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!
Read more