Aug 19, 2023, 11:42 PM IST
ಲಖನೌ(ಆ.19) ಜೈಲರ್ ಚಿತ್ರ ದೇಶಾದ್ಯಂತ ಭರ್ಜರಿ ಯಶಸ್ಸು ಕಂಡಿದೆ. ಸೂಪರ್ ಸ್ಟಾರ್ ರಜನಿಕಾಂತ್ ಮತ್ತೆ ತೆರೆ ಮೇಲೆ ಅಬ್ಬರಿಸಿದ್ದಾರೆ. ಇದೀಗ ಯಶಸ್ಸಿನ ಅಲೆಯಲ್ಲಿರುವ ರಜನಿಕಾಂತ್ ಇಂದು ಲಖನೌದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿಯಾಗಿದ್ದಾರೆ. ಈ ವೇಳೆ ರಜನಿಕಾಂತ್, ಸಿಎಂ ಯೋಗಿ ಪಾದ ಮುಟ್ಟಿ ನಮಸ್ಕರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ರಜನಿಕಾಂತ್ಗೆ ಆತ್ಮೀಯ ಸ್ವಾಗತ ನೀಡಿದ ಯೋಗಿ ಆದಿತ್ಯನಾಥ್, ಮಾತುಕತೆ ನಡೆಸಿದ್ದಾರೆ. ಬಳಿಕ ರಜನಿಕಾಂತ್ಗೆ ಪುಸ್ತಕ ಸೇರಿದಂತೆ ಎರಡು ಉಡುಗೊರೆ ನೀಡಿದ್ದಾರೆ.