ಕಾಂಗ್ರೆಸ್ ಕುತಂತ್ರದ ಮಾತು ಹೇಳಿದ್ಯಾರು..? ಯಾಕೆ..? ಹೇಗೆ ನಡೆದಿದೆ I.N.D.I.A ಜೋಡೋ ಸರ್ಕಸ್?

ಕಾಂಗ್ರೆಸ್ ಕುತಂತ್ರದ ಮಾತು ಹೇಳಿದ್ಯಾರು..? ಯಾಕೆ..? ಹೇಗೆ ನಡೆದಿದೆ I.N.D.I.A ಜೋಡೋ ಸರ್ಕಸ್?

Published : Jan 30, 2024, 05:33 PM IST

ಲೋಕಸಮರದ ಹೊತ್ತಲ್ಲೇ ಮೈತ್ರಿಯಲ್ಲಿ ಅಂತರ್ಯುದ್ಧ!
ಶುರುವಿಗೂ ಮುನ್ನವೇ ಮುಗಿಯಿತಾ I.N.D.I.A ಕತೆ ?
ರಾಹುಲ್ ನ್ಯಾಯ್ ಯಾತ್ರೆ ವೇಳೆ ನೂರೆಂಟು ವಿಘ್ನಗಳು!

ಮಹಾಮೈತ್ರಿ ಒಕ್ಕೂಟದಿಂದ ಘಟಾನುಘಟಿಗಳೇ ಹೊರಗೆ ಬತ್ತಿದ್ದಾರೆ. ಇದನ್ನ ನೋಡ್ತಾ ಇದ್ರೆ, ಉಳಿಯುತ್ತಾ ಘಟಬಂಧನ ಅನ್ನೋ ಪ್ರಶ್ನೆ ಹುಟ್ಟುತ್ತೆ..? ಅದಕ್ಕಿಂತಾ ಮುಖ್ಯವಾಗಿ, ರಾಹುಲ್ ಗಾಂಧಿ(Rahul Gandhi) ಅವರು ಭಾರತ್ ಜೋಡೋ ನ್ಯಾಯ ಯಾತ್ರೆಗೂ ಮೊದಲು, I.N.D.I.A. ಜೋಡೋ ಯಾತ್ರೆ ಮಾಡ್ಬೇಕಾ ಅನ್ನೋ ಅನುಮಾನ ಮೂಡುತ್ತೆ. ಪ್ರಧಾನಿ ಮೋದಿಯ ಅಶ್ವಮೇಧ ಕಟ್ಟಿಹಾಕೋಕೆ ಹಸ್ತಪಾಳಯದ ಯುವರಾಜ ದೊಡ್ಡ ಸಾಹಸ ಮಾಡ್ತಾ ಇದಾರೆ. ಅದೇ, ಭಾರತ್ ಜೋಡೋ ನ್ಯಾಯ್ ಯಾತ್ರೆ. ರಾಜ್ಯದಿಂದ ರಾಜ್ಯಕ್ಕೆ ಸಾಗ್ತಾ, ಮೋದಿ (Narendra Modi)ಆಡಳಿತ ವಿರುದ್ಧ ಅಬ್ಬರಿಸ್ತಾ, ಭರ್ಜರಿ ಭಾಷಣದಿಂದ ಜನರನ್ನು ತನ್ನತ್ತ ಸೆಳೆಯೋ ಮಹಾಯತ್ನವೇ, ಈ ನ್ಯಾಯ್ ಯಾತ್ರೆ. ದ್ವೇಷದ ಮಾರ್ಕೆಟ್ನಲ್ಲಿ ಪ್ರೇಮದ ಅಂಗಡಿ ತೆಗೀತೀವಿ ಅನ್ನೋ ಮಾತೇ, ಈ ಬಾರಿ ರಾಹುಲ್ ಗಾಂಧಿ ಅವರ ಬಳಿ ಇರೋ ದೊಡ್ಡ ಆಯುಧ. ಕಳೆದ ಕೆಲವಾರು ತಿಂಗಳುಗಳಿಂದಲೂ ಕಾಂಗ್ರೆಸ್(Congress) ಇದೇ ಮಾತನ್ನೇ ಹೇಳ್ತಾ ಇದೆ. ಆದ್ರೆ, ಈಗ ಆ ಆಯುಧಕ್ಕೆ ಬಲ ಇರೋ ಹಾಗೆ ಕಾಣ್ತಾ ಇಲ್ಲ. ಯಾಕಂದ್ರೆ, ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಅಂತ ಯಾತ್ರೆ ಹೊರಟಿದ್ದಾರೆ. ಆದ್ರೆ ಅವರು ಮೈತ್ರಿ ಜೋಡೋ ಅನ್ನೋ ಹೊಸ ಯಾತ್ರೆ ಮಾಡ್ಲೇಬೇಕಾದ ಅನಿವಾರ್ಯತೆ ಹುಟ್ಟಿಕೊಂಡಿದೆ.

ಇದನ್ನೂ ವೀಕ್ಷಿಸಿ: Bhagwanth Khuba: ವಿಜಯೇಂದ್ರ ಕಾಲಿಗೆ ಬಿದ್ದ ಚವ್ಹಾಣ್: ಬೀದರ್‌ ಬಿಜೆಪಿಯಲ್ಲಿ ತೀವ್ರಗೊಂಡ ಆಂತರಿಕ ಕಚ್ಚಾಟ

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more