ಕೃಷ್ಣ vs ರಾಮ ಭಕ್ತರ ನಡುವೆ ಸವಾಲು..! ‘ಓರ್ಚಾ’ದ ಶ್ರೀರಾಮನಿಗೆ ಪೊಲೀಸರಿಂದ ಗನ್ ಸೆಲ್ಯೂಟ್..!

ಕೃಷ್ಣ vs ರಾಮ ಭಕ್ತರ ನಡುವೆ ಸವಾಲು..! ‘ಓರ್ಚಾ’ದ ಶ್ರೀರಾಮನಿಗೆ ಪೊಲೀಸರಿಂದ ಗನ್ ಸೆಲ್ಯೂಟ್..!

Published : Feb 05, 2024, 08:21 AM ISTUpdated : Feb 05, 2024, 08:22 AM IST

ರಾಮನ ಆಗಮನಕ್ಕೆ ಕುಣಿದ ಅಯೋಧ್ಯಾ ನಗರಿ..!
ಬಾಲರಾಮನ ಹೆಸರಲ್ಲಿ ನಡೀತು ಮಹಾ ಉತ್ಸವ..!
ವಿಶ್ವವೇ ತಿರುಗಿ ನೋಡಿದ ಭವ್ಯ ರಾಮಮಂದಿರ..!

ರಾಮ ಲಲ್ಲಾ ಅಂತೂ ಇಂತೂ ಅಯೋಧ್ಯೆಯ ತನ್ನ ಮನೆಗೆ ಬಂದಾಗಿದೆ. ಅಲ್ಲಿ ಪ್ರಾಣ ಪ್ರತಿಷ್ಠೆ ಅದ್ಧೂರಿಯಾಗಿ ನಡೆದಿದೆ. ಇಡೀ ಭಾರತ ಆ ಸಂಭ್ರಮದಲ್ಲಿ ಭಾಗಿಯಾಗಿತ್ತು. ಅಯೋಧ್ಯಾ(Ayodhya) ಅಂದ ಕೂಡಲೇ ರಾಮನೇ ನೆನಪಿಗೆ ಬರ್ತಾನೆ. ಮುಂಬರುವ ದಿನಗಳಲ್ಲಿ ಭಾರತದ ಶ್ರೇಷ್ಟ ಧಾರ್ಮಿಕ ಪ್ರವಾಸಿತಾಣವಾಗೋದ್ರಲ್ಲಿ ಅನುಮಾನವಿಲ್ಲ. ಆದ್ರೆ ವೀಕ್ಷಕರೇ ಅನೇಕರಿಗೆ 2ನೇ ಅಯೋಧ್ಯೆ ಬಗ್ಗೆ ಗೊತ್ತಿರೋದಿಲ್ಲ. ಇದು ಮಧ್ಯ ಪ್ರದೇಶ(Madhya Pradesh) ನಿವಾರಿ ಜಿಲ್ಲೆಯಲ್ಲಿ ಇರೋ ಒಂದು ಚಿಕ್ಕ ಊರು. ಈ ಊರನ್ನು ಎರಡನೇ ಅಯೋಧ್ಯೆ ಅಂತಲೇ ಭಕ್ತರು ಕರೀತಾರೆ. ಈ ಓರ್ಚಾ ಪಟ್ಟಣ ಸೋಜಿಗಗಳ ಆಗರ ಅಂದ್ರೂ ತಪ್ಪಾಗೋದಿಲ್ಲ. ಭಗವಾನ್ ರಾಮನನ್ನು(Lord Rama) ಓರ್ಚಾದ ರಾಜ ಎಂದು ಪರಿಗಣಿಸಲಾಗುತ್ತದೆ. ಇಂದಿಗೂ ಕೂಡ ರಾಮ ಬೇರೆ ಅಲ್ಲ, ಓರ್ಚಾದ ರಾಜ ಬೇರೆ ಅಲ್ಲ. ಅಯೋಧ್ಯೆಯ ಹೊರತಾಗಿ ಭಾರತದ ಏಕೈಕ ರಾಮ ಆಳಿದ ಸ್ಥಳವೆಂದರೆ ಓರ್ಚಾ, ಅಲ್ಲಿ ಭಗವಾನ್ ರಾಮ ಪಟ್ಟಣದ ಏಕೈಕ ರಾಜನೂ ಆಗಿದ್ದಾನೆ. ಅದು 16 ನೇ ಶತಮಾನ. ಓರ್ಚಾದಲ್ಲಿ ಆದ ಆಡಳಿತ ಮಾಡ್ತಾ ಇದ್ದಿದ್ದು  ರಾಜ ಮಧುಕರ್ ಷಾ. ಆ ರಾಜ ಶ್ರೀಕೃಷ್ಣ ಪರಮಾತ್ಮನ ಅಪ್ರತಿಮ ಭಕ್ತನಾಗಿದ್ದ, ದಿನಾಲೂ ಕೃಷ್ಣಾರಾಧನೆ ಮಾಡದೇ ದಿನದ ಶುರುವೇ ಆಗ್ತಾ ಇರ್ಲಿಲ್ಲಾ. ಸರ್ವಂ ಕೃಷ್ಣ ಮಯಂ ಅಂತ, ಕೃಷ್ಣನ ಉಪಾಸನೆಯಿಂದಲೇ ರಾಜ್ಯಭಾರ ಶುರು ಮಾಡ್ತಾ ಇದ್ದ.

ಇದನ್ನೂ ವೀಕ್ಷಿಸಿ: Today Horoscope: ಧನಸ್ಸುವಿನಿಂದ ಮಕರ ರಾಶಿಗೆ ಕುಜನ ಪರಿವರ್ತನೆಯಾಗಲಿದ್ದು, ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ?

39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:58ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ
19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!
Read more