ಅವಧಿಪೂರ್ವ ಚುನಾವಣೆ ನಡೆದುಬಿಡುತ್ತಾ..? ಅಧಿವೇಶನದಲ್ಲಿ ಸಮರ ಘೋಷ?! ಏನಿದು ರಹಸ್ಯ?

ಅವಧಿಪೂರ್ವ ಚುನಾವಣೆ ನಡೆದುಬಿಡುತ್ತಾ..? ಅಧಿವೇಶನದಲ್ಲಿ ಸಮರ ಘೋಷ?! ಏನಿದು ರಹಸ್ಯ?

Published : Sep 04, 2023, 02:14 PM IST

ಸೆಪ್ಟಂಬರ್ ಅಂತ್ಯದ ವೇಳೆಗೆ ಏನಾಗಲಿದೆ ರಾಜಕಾರಣ?
ಒನ್ ನೇಷನ್-ಒನ್ ಎಲೆಕ್ಷನ್ ಇದೊಂದೇ ಅಲ್ಲ ಮ್ಯಾಟರ್!
ಮಾಸ್ಟರ್ ಸ್ಟ್ರೋಕ್ ಕೊಡೋಕೆ ಸಜ್ಜಾಗಿದೆ ಮೋದಿ ಪಡೆ!
 

ನಮ್ಮ ರಾಷ್ಟ್ರದ ಪ್ರಧಾನಮಂತ್ರಿ ನರೇಂದ್ರ ಮೋದಿ ಏನೇ ಮಾಡಿದ್ರು, ಅದೊಂದು ಸೆನ್ಸೇಷನ್ ಸೃಷ್ಟಿಸುತ್ತೆ. ಈಗಲೂ ಅಂಥದ್ದೇ ಒಂದು ಸೆನ್ಷೇಷನ್ ಕ್ರಿಯೇಟ್ ಮಾಡೋ ಹಾಗೆ ಕಾಣ್ತಾ ಇದೆ. ಇದರ ಸುಳಿವು ನೀಡಿರೋದು ಇದೇ ತಿಂಗಳಲ್ಲಿ ನಡೆಯಲಿರೋ 5 ದಿನ ವಿಶೇಷ ಸದನ. ಸೆಪ್ಟಂಬರ್ 18ರಿಂದ 24ರ ವರೆಗೆ ವಿಶೇಷ ಸದನ ನಡೆಸೋದಕ್ಕೆ ಮೋದಿ(Narendra Modi) ಸರ್ಕಾರ ಆಹ್ವಾನ ನೀಡಿದೆ. ಇದೊಂದು ವಿಚಾರವೇ ದೊಡ್ಡದೊಂದು ಚರ್ಚೆಗೆ ಕಾರಣವಾಗಿದೆ. ಮೋದಿ ಅವರಿಗೆ ಒನ್ ನೇಷನ್ ಒನ್ ಎಲೆಕ್ಷನ್(One Nation One Election) ಅನ್ನೋ ಕಾನ್ಸೆಪ್ಟ್ ಮೇಲೆ ಒಲವು ಜಾಸ್ತಿ. 2014ರಲ್ಲಿ ಗೆದ್ದು ದೆಹಲಿ ಗದ್ದುಗೆ ಹತ್ತಿದಾಗಿಂದಲೂ ಇದರ ಬಗ್ಗೆ ಮಾತಾಡ್ತಲೇ ಇದ್ರು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ.ಹಾಗಾಗಿನೇ, ಈ ಅಧಿವೇಶನ ಕರೆದು, ತಮ್ಮ ಕನಸಿನ ಕಾನೂನಿಗೆ ಜೀವ ತುಂಬಬಹುದು ಅಂತ ಹಲವರು ಮಾತಾಡ್ಕೊಂಡ್ರು. ಎಲ್ಲರೂ ನಿರೀಕ್ಷೆ ಮಾಡ್ತಾ ಇರೋದು, ಮೋದಿ ಅವರು ಒಂದು ದೇಶ-ಒಂದು ಚುನಾವಣೆ ನೀತಿನಾ ಜಾರಿಗೆ ತರೋ ಪ್ರಯತ್ನ ಮಾಡ್ತಾರೆ ಅನ್ನೋದು. ಈ ನಿರೀಕ್ಷೆಗೆ ಕಾರಣವೂ ಇದೆ. ಈಗಾಗಲೇ ಈ ನೂತನ ಕಾನೂನು ಜಾರಿಯ ಸಾಧ್ಯಾಸಾಧ್ಯತೆಯ ಬಗ್ಗೆ ರಿಪೋರ್ಟ್ ರೆಡಿ ಮಾಡಲಿಕ್ಕೆ, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್(Ram Nath Kovind) ಅವರ ನೇತೃತ್ವದಲ್ಲಿ ಕಮಿಟಿ ರೆಡಿಯಾಗಿದೆ. ಅದರ ಜೊತೆಗೆ, ಅಮಿತ್ ಶಾ ಹಾಗೂ ವಿಪಕ್ಷ ನಾಯಕರನ್ನೊಳಗೊಂಡ ಉನ್ನತ ಸಮಿತಿಯ ರಚನೆಯೂ ಆಗಿದೆ. ಹಾಗಾದ್ರೆ, ಈ ಸಮಿತಿಗಳ ಅಭಿಪ್ರಾಯದ ಹಾಗೆ, ಒನ್ ನೇಷನ್ ಒನ್ ಎಲೆಕ್ಷನ್ ಜಾರಿಗೊಳಿಸಿಯೇ ಬಿಡ್ತಾರೆ ಅನ್ನೋದು ಹಲವರ ಅಭಿಪ್ರಾಯವಾಗಿದೆ.

ಇದನ್ನೂ ವೀಕ್ಷಿಸಿ:  ಆಫ್ರಿಕಾದಲ್ಲಿ ಫುಡ್ ಟೆಕ್ನಿಶಿಯನ್, ಭಾರತದಲ್ಲಿ ಉದ್ಯಮಿ: ಬಾವಬಾಬ್ ಹಣ್ಣು ಬಳಸಿ ಆರೋಗ್ಯ ವರ್ಧಕ ಉತ್ಪನ್ನ !

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more