Lok Sabha elections 2024: ಅಂದು ಮನಮೋಹನ್ ಸಿಂಗ್ ಹೇಳಿದ್ದೇನು..? ಈಗ ಮೋದಿ ಹೇಳಿದ್ದೇನು..?

Lok Sabha elections 2024: ಅಂದು ಮನಮೋಹನ್ ಸಿಂಗ್ ಹೇಳಿದ್ದೇನು..? ಈಗ ಮೋದಿ ಹೇಳಿದ್ದೇನು..?

Published : Apr 23, 2024, 04:44 PM IST

ಲೋಕಸಭಾ ಸಮರದಲ್ಲಿ ಹೊಸ ಆಯುಧ ಪ್ರಯೋಗ!
ಚಿಂತಾಜನಕವಾಗಿದೆಯಂತಲ್ಲಾ ಕಾಂಗ್ರೆಸ್ನ ಪ್ರಣಾಳಿಕೆ!?
ಚರ್ಚೆಗೆ ಕಾರಣವಾಯ್ತೇಕೆ ಮನಮೋಹನ್ ಸಿಂಗ್ ಹೇಳಿಕೆ?

ಲೋಕಸಭಾ ಸಮರ ಅದಾಗಲೇ ಆರಂಭವಾಗಿದೆ. ಆದ್ರೆ ಅಂತಿಮ ಫಲಿತಾಂಶ ಬರೋ ತನಕ, ಯುದ್ಧದ ತೀವ್ರತೆ ಹೆಚ್ಚಾಗೋ ಲಕ್ಷಣಗಳೂ ಕಾಣ್ತಾ ಇದಾವೆ. ಅದಕ್ಕೆ ಈಗಷ್ಟೇ ಮೋದಿ ಅವರು ಕೊಟ್ಟಿರೋ ಹೇಳಿಕೆನೇ ಉದಾಹರಣೆ. ಕಾಂಗ್ರೆಸ್‌ನ ಪ್ರಣಾಳಿಕೆ, ಕಾಂಗ್ರೆಸ್(Congress) ಮಾಜಿ ಪ್ರಧಾನಿಯ ಹೇಳಿಕೆ, ಇದನ್ನೇ ಇಟ್ಕೊಂಡು ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದಾರೆ ಮೋದಿ(Narendra Modi). ಆದ್ರೆ, ಮೋದಿ ಮಾತಿಗೆ, ಕಾಂಗ್ರೆಸ್ ಕೊಟ್ಟ ಪ್ರತ್ಯುತ್ತರ ಬೇರೆಯದೇ ಕತೆ ಹೇಳ್ತಾ ಇದೆ. ರಾಜಸ್ಥಾನದ(Rajasthan) ಬನ್ಸ್ವಾರದಲ್ಲಿ ಬಿಜೆಪಿ(BJP) ಚುನಾವಣಾ ಸಮಾವೇಶ ನಡೀತಿತ್ತು. ಪ್ರಧಾನಿ ಮೋದಿ ಅವರು ವೇದಿಕೆ ಮೇಲೆ ನಿಂತು ಮಾತಾಡ್ತಾ ಇದ್ರು. ಮಾತಿನ ಮೂಲಕ, ಕಾಂಗ್ರೆಸ್ ಪ್ರಣಾಳಿಕೆಗೆ ಟಕ್ಕರ್ ಕೊಟ್ಟಿದ್ರು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿದ್ದ ಅದೊಂದು ವಿಚಾರವನ್ನೇ ಅಸ್ತ್ರವಾಗಿಟ್ಕೊಂಡು, ಎದುರಾಳಿ ಪಾಳಯದ ವಿರುದ್ಧ ಸಿಡಿದೆದ್ದಿದ್ರು. ಕಾಂಗ್ರೆಸ್ ಪಾಳಯ ಮ್ಯಾನಿಫೆಸ್ಟೋ ಮುಂದಿಟ್ಟು ಅಖಾಡ ಪ್ರವೇಶ ಮಾಡ್ತಿದ್ದ ಹಾಗೇ, ಬಿಜೆಪಿ ಅಟ್ಯಾಕಿಂಗ್ ಮೋಡ್‌ಗೆ ಬಂದಾಗಿತ್ತು. ಕಾಂಗ್ರೆಸ್ ವಿರುದ್ಧ ಗುಡುಗೋಕೆ ಆರಂಭಿಸಿತ್ತು. ಕರ್ನಾಟಕದಲ್ಲಿ ಅದೃಷ್ಟ ಖುಲಾಯಿಸಿದ ಗ್ಯಾರಂಟಿನೇ ತನ್ನ ಬತ್ತಳಿಕೆಯ ಬ್ರಹ್ಮಾಸ್ತ್ರ ಅನ್ನೋ ಹಾಗೆ ಕಾಂಗ್ರೆಸ್ ಬಳಸಿತ್ತು. ಕಾಂಗ್ರೆಸ್ ಸಂಪತ್ತಿನ ಸರ್ವೆ ಮಾಡಿದ್ರೆ, ಅದರಲ್ಲಿ ಮಂಗಳಸೂತ್ರವೂ ಸೇರಿಕೊಂಡಿರುತ್ತೆ. ಅದನ್ನೂ ಕೂಡ ರಿಡಿಸ್ಟ್ರಿಬ್ಯೂಟ್ ಮಾಡ್ಬಿಡುತ್ತೆ ಕಾಂಗ್ರೆಸ್ ಅಂದ್ರು ಮೋದಿ. ಅಂದ್ ಹಾಗೆ, ಈ ಸಂಪತ್ತು ಹಂಚಿಕೆಯಾದ್ರೆ, ಬಂಗಾರ ಯಾರ ಪಾಲಾಗುತ್ತೆ ಅಂತ ಹೇಳುವಾಗ ಹೇಳಿದ ಮಾತೇ, ದೇಶದಲ್ಲಿ ದೊಡ್ಡ ಹಲ್ ಚಲ್ ಸೃಷ್ಟಿಸಿರೋದು.

ಇದನ್ನೂ ವೀಕ್ಷಿಸಿ:  Devegowda: ಲೋಕಸಭಾ ಚುನಾವಣೆ ವೇಳೆ ಗೌಡರ ಕಣ್ಣೀರು ಅಸ್ತ್ರ! 'ನಾನು ಇನ್ನೇರಡು ವರ್ಷ ಬದುಕಬಹುದು ಅಷ್ಟೇ'

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
24:19ಮುಸ್ಲಿಮರೆಲ್ಲಾ ಒಂದೇ ಥರ ಅಲ್ಲ.. ಹೀಗೆ ಹೇಳಿದ್ದೇಕೆ ಭಾಗವತ್? RSS ವಿರುದ್ಧದ ಪ್ರಶ್ನೆಗಳಿಗೆಲ್ಲಾ ಮೋಹನ್ ಭಾಗವತ್ ಉತ್ತರ!
Read more