ಲೋಕಸಮರಕ್ಕೆ ‘ಮೋದಿ ಕಿ ಗ್ಯಾರಂಟಿ’ ಘೋಷವಾಕ್ಯ: ಅಮೋಘ ಗೆಲುವಿನ ಗುರಿ ಕೊಟ್ಟ BJP ಬಿಗ್ ಬಾಸ್..!

ಲೋಕಸಮರಕ್ಕೆ ‘ಮೋದಿ ಕಿ ಗ್ಯಾರಂಟಿ’ ಘೋಷವಾಕ್ಯ: ಅಮೋಘ ಗೆಲುವಿನ ಗುರಿ ಕೊಟ್ಟ BJP ಬಿಗ್ ಬಾಸ್..!

Published : Dec 25, 2023, 03:15 PM IST

ಅಚ್ಚೇದಿನ್ ಘೋಷದ ಬದಲು ಮೋದಿ ಕಿ ಗ್ಯಾರಂಟಿ
50 ಪರ್ಸೆಂಟ್ ವೋಟ್ ಶೇರ್ ಮೇಲೆ ಮೋದಿ ಕಣ್ಣು
ಏಕಾಂಗಿಯಾಗಿ 350 ಕ್ಷೇತ್ರ ಗೆಲುವಿಗೆ ಬಿಜೆಪಿ ಸಂಕಲ್ಪ

ಲೋಕಸಭಾ ಚುನಾವಣೆಯ ಬಿಸಿ ನಿಧಾನವಾಗಿ ಏರ್ತಾ ಇದೆ. 2024ರಲ್ಲಿ ಭಾರತದ ಗದ್ದುಗೆ ಯಾರ ಪಾಲಾಗಲಿದೆ ಅನ್ನೋ ಪ್ರಶ್ನೆಗೆ ಉತ್ತರ ಸಿಗಲಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಅಧಿಕಾರವನ್ನ ಸ್ವೀಕರಿಸುವ ಅದಮ್ಯ ವಿಶ್ವಾಸದಲ್ಲಿದ್ದಾರೆ. ಇನ್ನೊಂದು ಕಡೆಯಲ್ಲಿ ಕಾಂಗ್ರೆಸ್(Congress) ಹಾಗೂ ಉಳಿದ ಪಕ್ಷಗಳು ಮೈತ್ರಿ ಮಾಡಿಕೊಂಡು ಮೋದಿಯನ್(Narendra modi)ನ ಮಣಿಸೋಕೆ ಸ್ಟ್ರಾಟಜಿ ಮಾಡಿಕೊಂಡಿದ್ದಾರೆ. ಇದೇ ಸಮಯದಲ್ಲಿ ಮೋದಿ ಕಿ ಗ್ಯಾರಂಟಿ(Guarantee) ರಾಷ್ಟ್ರ ರಾಜಕಾರಣದಲ್ಲಿ ಭಾರಿ ಸದ್ದು ಮಾಡ್ತಾ ಇದೆ. ಅದು 2014ರ ಲೋಕಸಭಾ ಚುನಾವಣಾ ಸಮಯ. ಬಿಜೆಪಿಯಿಂದ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅನ್ನೋ ಹೆಸರು ಬಂದಾಗ ರಾಷ್ಟ್ರಾದ್ಯಂತ ಸಂಚಲನ ಸೃಷ್ಟಿಯಾಗಿತ್ತು. ಯಾಕೆಂದ್ರೆ ಗುಜರಾತ್ ರಾಜ್ಯವನ್ನ ಮೋದಿ ಸಿಎಂ ಆಗಿ ಮುನ್ನೆಡೆಸಿದ್ದು ಹೇಗಿತ್ತು ಅನ್ನೋದನ್ನ ದೇಶ ಕಂಡಿತ್ತು. ಪ್ಯುವರ್ ಆಂಡ್ ಪವರ್ ಫುಲ್ ಲೀಡರ್ ಅನ್ನೋದನ್ನ ಅವರ ರಾಜಕೀಯ ಹಿಸ್ಟರಿ ಹೇಳ್ತಾ ಇತ್ತು. ಇನ್ನೊಂದು ಕಡೆಯಲ್ಲಿ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದಿಂದ ಜನರು ಬೇಸತ್ತಿದ್ದರು. ಹೀಗಾಗಿ ಲೋಕಸಮರದಲ್ಲಿ ಮೊದಲ ಬಾರಿ ಮೋದಿ ಗೆದ್ದು ಸಿಎಂ ಇಂದ ಪಿಎಂ ಆದರು. ಮೋದಿ ತಮ್ಮ ಮೇಲೆ ಕಾಂಗ್ರೆಸ್ ನಾಯಕರು ಮಾಡ್ತಾ ಇದ್ದ ಆರೋಪಗಳಿಗೆ ಕಾದು ಹೊಡೆಯುವ ತಂತ್ರವನ್ನ ಮಾಡ್ತಾ ಇದ್ದರು. ಕಾಂಗ್ರೆಸ್ ಮೋದಿಯ ಗೆಲುವನ್ನ ಊಹಿಸಿರ್ಲಿಲ್ಲಾ. ಹೀಗಾಗಿ ರಾಜಕೀಯ ವಿಚಾರದಿಂದ ಹಿಡಿದು ವೈಯಕ್ತಿಕ ವಿಚಾರದ ತನಕ ಕಾಂಗ್ರೆಸ್ ಮೋದಿ ಮೇಲೆ ಟೀಕಾ ಪ್ರಹಾರ ಮಾಡ್ತಾನೇ ಬಂತು. ತನ್ನತ್ತ ಎಸೆದ ಕಲ್ಲುಗಳನ್ನೇ ಒಗ್ಗೂಡಿಸಿಕೊಂಡು ಮೋದಿ ಒಂದು ಕೋಟೆಯನ್ನೇ ಕಟ್ಟಿ ಬಿಟ್ಟರು. 

ಇದನ್ನೂ ವೀಕ್ಷಿಸಿ:  ಸಾಲು ಸಾಲು ಸರ್ವೆಗಳಲ್ಲೂ ಮೋದಿಗೇ ಗೆಲುವು! ನಿಜವಾಗಲಿದೆಯಾ ಮೋದಿ ‘400’ ನಿರೀಕ್ಷೆ?

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more