Ayodhya Ram Mandir: ಅಯೋಧ್ಯೆಯಲ್ಲಿ ಶುರು ರಾಮರಾಜ್ಯ.. ಹೇಗಿತ್ತು ರಾಮೋತ್ಸವ..?

Ayodhya Ram Mandir: ಅಯೋಧ್ಯೆಯಲ್ಲಿ ಶುರು ರಾಮರಾಜ್ಯ.. ಹೇಗಿತ್ತು ರಾಮೋತ್ಸವ..?

Published : Jan 23, 2024, 03:00 PM IST

500 ವರ್ಷಗಳ ಬಳಿಕ ಭವ್ಯ ಮಂದಿರಕ್ಕೆ ಮರಳಿದ ಶ್ರೀರಾಮ..!
ಸರಯೂ ನದಿ ತೀರದಲ್ಲಿ ವಿಜೃಂಭಣೆಯ ರಾಮ ಪಟ್ಟಾಭಿಷೇಕ..!
"ಮಂದಿರ್ ವಹೀ ಬನಾಯೇಂಗೇ" ಅಂದಿದ್ದರು ಎಲ್.ಕೆ ಅಡ್ವಾಣಿ..!

ಅದು ಶತಮಾನಗಳ ಕನಸು ನನಸಾದ ಅಮೃತಘಳಿಗೆ. ಶತಕೋಟಿ ಭಾರತೀಯರು ಪ್ರತೀಕ್ಷೆ ಮಾಡ್ತಿದ್ದದ್ದು ಇದೇ ಕ್ಷಣಕ್ಕಾಗಿ. ಕೋಟಿ ಕೋಟಿ ರಾಮಭಕ್ತರು ಚಾತಕ ಪಕ್ಷಿಗಳಂತೆ ಕಾಯ್ತಾ ಇದ್ದದ್ದು ಇದೇ ದಿನಕ್ಕಾಗಿ. ಆ ದಿನ ಬಂದೇ ಬಿಡ್ತು, ದೇವನಗರಿ ಅಯೋಧ್ಯೆಯಲ್ಲಿ(Ayodhya) ಶ್ರೀರಾಮ ಪಟ್ಟಾಭಿಷೇಕ ನಡೆದೇ ಬಿಡ್ತು. ನಮ್ಮ ರಾಮ ಮಂದಿರಕ್ಕೆ(Ram Mandir) ಮರಳಿ ಬಂದಿದ್ದಾನೆ. ನ ಭೂತೋ ನ ಭವಿಷ್ಯತಿ ಎನ್ನುವಂತೆ ರಾಮಜನ್ಮಭೂಮಿಯಲ್ಲಿ ತಲೆ ಎತ್ತಿ ನಿಂತಿರೋ ಮಂದಿರದಲ್ಲಿ ಶ್ರೀರಾಮಚಂದ್ರ ವಿರಾಜಮಾನನಾಗಿದ್ದಾನೆ. ರಾಮ ಮಂದಿರ ಕಟ್ಟಲು ಕಟಿ ಬದ್ಧರಾಗಿ ನಿಂತಿದ್ದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸೋಮವಾರ ಮಧ್ಯಾಹ್ನದ ಅಭಿಜಿನ್ ಲಗ್ನದಲ್ಲಿ ಶ್ರೀರಾಮನಿಗೆ ಪ್ರಾಣ ಪ್ರತಿಷ್ಠೆ ನಡೆದಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕವನ್ನು ನೋಡಲು ಕಾತರಿಂದ ಕಾಯ್ತಾ ಇದ್ದವರ ಸಂಖ್ಯೆ ಲೆಕ್ಕವಿಲ್ಲದಷ್ಟು. ಭಾರತದಲ್ಲಷ್ಟೇ ಅಲ್ಲ, ಸಪ್ತಸಾಗರದಾಚೆಯೂ ರಾಮಭಕ್ತರು ಆ ದಿನದ, ಆ ಕ್ಷಣದ ಪ್ರತೀಕ್ಷೆಯಲ್ಲಿದ್ರು. ಶ್ರೀರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠೆಯನ್ನು ಎಲ್ಲರೂ ಎದುರು ನೋಡ್ತಾ ಇದ್ರು. ಹಾಗ್ ನೋಡಿದ್ರೆ, ರಾಮ ಪಟ್ಟಾಭಿಷೇಕದ ಕಾರ್ಯಕ್ರಮಗಳು, ಧಾರ್ಮಿಕ ವಿಧಿ ವಿಧಾನಗಳು ರಾಮಜನ್ಮಭೂಮಿಯಲ್ಲಿ ಒಂದು ವಾರದ ಹಿಂದೆಯೇ ಶುರುವಾಗಿದ್ವು. ಆದ್ರೆ ಸೋಮವಾರ ನಡೆದ ರಾಮೋತ್ಸವದ ತೂಕವೇ ಬೇರೆ.

ಇದನ್ನೂ ವೀಕ್ಷಿಸಿ:  Raichur: ಚಾಡಿ ಹೇಳಿದ ಆರೋಪ: ಐದಾರು ಜನರ ಗುಂಪಿನಿಂದ ವ್ಯಕ್ತಿ ಮೇಲೆ ಹಲ್ಲೆ !

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more