46 ವರ್ಷಗಳ ರತ್ನ ಭಂಡಾರದ ಬೀಗದ ಕೈ ರಹಸ್ಯ ಏನು ? ಕೀ ನಾಪತ್ತೆಗೂ ತಮಿಳುನಾಡಿಗೂ ಲಿಂಕ್ ಮಾಡಿದ್ದೇಕೆ ಪಿಎಂ ?

46 ವರ್ಷಗಳ ರತ್ನ ಭಂಡಾರದ ಬೀಗದ ಕೈ ರಹಸ್ಯ ಏನು ? ಕೀ ನಾಪತ್ತೆಗೂ ತಮಿಳುನಾಡಿಗೂ ಲಿಂಕ್ ಮಾಡಿದ್ದೇಕೆ ಪಿಎಂ ?

Published : Jul 15, 2024, 09:32 AM ISTUpdated : Jul 15, 2024, 09:33 AM IST

ಕೊನೆಯ ಬಾರಿ 1979ರಲ್ಲಿ ರತ್ನ ಭಂಡಾರದ ತೆರೆಯಲಾಗಿತ್ತು..!
79 ದಿನ ಭಂಡಾರಗೊಳಗಿದ್ದ ಸಂಪತ್ತಿನ ಮೌಲ್ಯದ ಲೆಕ್ಕಾಚಾರ..!
ರಹಸ್ಯ ತುಂಬಿದ ಕೋಣೆಯಲ್ಲಿ ಮೂರ್ಛೆ ಹೋದ ಅಧಿಕಾರಿ..!

ಒಂದಲ್ಲ ಎರಡಲ್ಲ..ಬರೋಬ್ಬರಿ 46 ವರ್ಷಗಳ ನಂತರ ಈ ಬಾಗಿಲು ತೆರೆಯುತ್ತಿರೋದು. ಅಷ್ಟಕ್ಕೂ ಇದು ಅಂತಿಂಥ ಬಾಗಿಲಲ್ಲ, ಇದು ಪುರಿ ಜಗನ್ನಾಥನ (Jagannath Puri) ರತ್ನ ಭಂಡಾರದ ಬಾಗಿಲು. ಈ ರತ್ನ ಭಂಡಾರದಲ್ಲಿ(Rathna Bandara) ಏನೇನು ಇರಬಹುದು. ಅದು ನಮ್ಮೆಲ್ಲರ ಅಂಕೆ ಶಂಕೆಯೂ ಮೀರಿದ್ದು. ವಜ್ರ ವೈಢೂರ್ಯ, ಒಂದು ಕಾಲು ಲಕ್ಷಕ್ಕೂ ಹೆಚ್ಚು ತೊಲ ಚಿನ್ನ. 250ಕ್ಕೂ ಹೆಚ್ಚು ಬೆಳ್ಳಿ ಈ ಭಂಡಾರದೊಳಗೆ ಇದೆ ಅಂತ ಹೇಳಲಾಗಿದ್ದರೂ, ಅದಕ್ಕಿಂತಲೂ ಹೆಚ್ಚು ಅತ್ಯಮೂಲ್ಯ ವಸ್ತುಗಳಿವೆ ಅಂತ ಕೂಡ ಹೇಳಲಾಗುತ್ತಿದೆ. ಈ ರತ್ನ ಭಂಡಾರದ ಬಾಗಿಲು ಕೊನೆಯ ಬಾರಿ ಅಂದರೆ 46 ವರ್ಷದ ಹಿಂದೆ ತೆರೆಯಲಾಗಿತ್ತು. ಅದರ ನಂತರ ಇಂದು ತೆರೆಯಲಾಗಿದೆ. ಪಿಎಂ ಮೋದಿ (Narendra Modi)ಒಡಿಶಾದಲ್ಲಿ ಪ್ರಚಾರಕ್ಕೆಂದು ಹೋದಾಗ ಹೇಳಿದ್ದ ಮಾತಿದು. ಬಿಜೆಪಿ(BJP) ಅಧಿಕಾರಕ್ಕೆ ಬಂದರೆ, ಈ ರತ್ನ ಭಂಡಾರದ ಬಾಗಿಲು ತೆರೆದೇ ತೆರೆಯುತ್ತೆ. ಜೊತೆಗೆ ಈ ರತ್ನ ಭಂಡಾರದ ಹಿಂದಿರೋ ರಹಸ್ಯ ಕೂಡ ಬಯಲಾಗೇ ಆಗುತ್ತೆ ಅಂತ ಹೇಳಿದ್ದರು. ಆ ದಿನ ಕೊಟ್ಟ ಮಾತನ್ನ ಪ್ರಧಾನಿ ಮೋದಿ ಇಂದು ಉಳಿಸಿಕೊಂಡಿದ್ದಾರೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ತೆಗೆದುಕೊಂಡು ಇನ್ನೂ ಒಂದುವರೆ ತಿಂಗಳಾಗಿದೆ. ಆಗಲೇ ಕೊಟ್ಟ ಮಾತನ್ನ ಉಳಿಸಿಕೊಂಡಿದ್ದು. ಈ ರತ್ನ ಭಂಡಾರದ ಬಾಗಿಲ ಹಿಂದಿರೋ ರಹ್ಯವನ್ನ ಬಯಲು ಮಾಡುವುದಕ್ಕೆ ತೊಡೆತಟ್ಟಿ ನಿಂತಿದ್ದಾರೆ. 

ಇದನ್ನೂ ವೀಕ್ಷಿಸಿ:  Bridge collapse: ಭಕ್ತರ ಪಾಲಿಗೆ ಸಾವಿನ ಸೇತುವೆಯಾದ ಮಚ್ಚು ನದಿಯ ಸೇತುವೆ! ಕಳಪೆ ಗುಣಮಟ್ಟದ ಕಾಮಗಾರಿಯೇ ಈ ದುರಂತಗಳಿಗೆ ಕಾರಣ..!

19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!
39:34ಅಮಿತ್ ಶಾ ರಣತಂತ್ರ: ಬದಲಾಗಲಿದೆಯೇ ಬಲಾಬಲ? 3ನೇ 2ರಷ್ಟು ಬಹುಮತ ಪಡೆಯಲು ಹೆಜ್ಜೆ
21:15ಬೆಲೆಗೆ ಬಿದ್ದ 200 ಕೋಟಿ ರೂ ಸರ್ಕಾರಿ ಎಂಜಿನೀಯರ್, ಕೆಜಿಗಟ್ಟಲೇ ಚಿನ್ನ ಬೆಳ್ಳಿ, ಹಲವು ಭವ್ಯ ಬಂಗಲೇ ಸೀಝ್
19:50Suvarna Special: ನನ್ನವರು ಯಾರೂ ಇಲ್ಲ, ದೀದಿ ಕಟ್ಟಿದ ದಶಕದ ಕೋಟೆ ಒಂದೇ ಏಟಿಗೆ ಛಿದ್ರ
21:25ಮಧ್ಯಪ್ರಾಚ್ಯ ಯುದ್ಧ ನಡುವೆ ಭಾರತ ಟಾರ್ಗೆಟ್, ಟ್ರಂಪ್ ಎಡವಟ್ಟಿಗೆ ಮೋದಿ ಸರ್ಕಾರ ಮಾಡಿದ್ದೇನು?
24:27ನೆಹರು ದಾಖಲೆ ಮುರಿದ ಮೋದಿ ಸುದೀರ್ಘ ಆಡಳಿತ, 3 ಬಾರಿ ಜನಾದೇಶ, ಕದಲದ ಮೋದಿ ಸಿಂಹಾಸನ, ಹೇಗಿತ್ತು 4398 ದಿನಗಳ ಆಡಳಿತ?
24:09ದೀದಿ ಕೋಟೆಯಲ್ಲಿ ಮಹಾಬಿರುಕು.. ಏನು ಕಾರಣ? ಗಜಕೇಸರಿ ವ್ಯೂಹ.. ದೀದಿ ದಿಗ್ಬಂಧನ.. ಏನಿದರ ಗುಟ್ಟು?
24:26ಪ್ಲಾಸ್ಟಿಕ್ ನೋಟು... ಕರೆನ್ಸಿ ಕ್ರಾಂತಿ! ಕಾಗದದ ನೋಟುಗಳ ಆಯಸ್ಸು ಖತಂ, ಮತ್ತೆ ಡಿಮಾನಟೈಸೇಶನ್..?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
Read more