Ratna Bhandar Key Lost: ಜಗನ್ನಾಥನ ಖಜಾನೆಯಲ್ಲಿ 150 ಕೆ.ಜಿ ಚಿನ್ನ ಬೆಳ್ಳಿ ವಜ್ರ.. ಏನಿದು ರತ್ನ ಭಂಡಾರ..?

Ratna Bhandar Key Lost: ಜಗನ್ನಾಥನ ಖಜಾನೆಯಲ್ಲಿ 150 ಕೆ.ಜಿ ಚಿನ್ನ ಬೆಳ್ಳಿ ವಜ್ರ.. ಏನಿದು ರತ್ನ ಭಂಡಾರ..?

Published : May 23, 2024, 02:20 PM ISTUpdated : May 23, 2024, 02:21 PM IST

ಪುರಿ ಜಗನ್ನಾಥನ ’ರತ್ನ ಭಂಡಾರ'ದ ಮೂಲ ಕೀಲಿ ಕೈ ನಾಪತ್ತೆ..!
ರತ್ನ ಭಂಡಾರದ ಮೂಲ ಕೀಲಿ ಕೈ ನಾಪತ್ತೆ ಹಿಂದೆ ಯಾರ ಕೈವಾಡ..?
ಒಡಿಶಾ ಚುನಾವಣಾ ದಿಕ್ಕನ್ನೇ ಬದಲಿಸುತ್ತಾ ರತ್ನ ಭಂಡಾರ ರಹಸ್ಯ..?

ವಿಶ್ವವಿಖ್ಯಾತ ಪುರಿ ಜಗನ್ನಾಥ ದೇವಾಲಯ(Jagannath Mandir). ಹಿಂದೂಗಳ ಪವಿತ್ರ ಕ್ಷೇತ್ರ. ಆ ದೇವಸ್ಥಾನದಲ್ಲೊಂದು ರಹಸ್ಯ ರತ್ನ ಭಂಡಾರ(Ratna Bhandar). ಅಲ್ಲಿ ಮೌಲ್ಯದ ಚಿನ್ನ-ಬೆಳ್ಳಿ-ವಜ್ರ-ವೈಢೂರ್ಯ ಸಹಿತ ಕೋಟ್ಯಂತರ ರೂಪಾಯಿ ಮೌಲ್ಯದ ಸಂಪತ್ತು. ಆದ್ರೆ ವಿಷ್ಯ ಏನಂದ್ರೆ ರತ್ನ ಭಂಡಾರದ ಒರಿಜಿನಲ್ ಕೀಲಿ ಕೈ ನಾಪತ್ತೆ. ಇದೇ ವಿಚಾರ ಒಡಿಶಾ(Odisha) ಚುನಾವಣಾ ರಣರಂಗದಲ್ಲಿ ಪ್ರತಿಧ್ವನಿಸ್ತಾ ಇದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವ್ರೇ(Narendra Modi) ರತ್ನ ಭಂಡಾರದ ಕೀಲಿ ಕೈ ನಾಪತ್ತೆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ರತ್ನ ಭಂಡಾರ.. ಆ ಖಜಾನೆಯೊಳಗಿದೆ ಒಂದೂಕಾಲು ಲಕ್ಷಕ್ಕೂ ಹೆಚ್ಚು ತೊಲ ಚಿನ್ನ. ಚಿನ್ನಾಭರಣ, ಚಿನ್ನವನ್ನೊಳಗೊಂಡ ಕಲ್ಲುಗಳು ಒಂದೂವರೆ ಲಕ್ಷ ಗ್ರಾಂ. ಬೆಳ್ಳಿ 258 ಕೆಜಿ. ಇದು ಒಡಿಶಾದ ಕರಾವಳಿಯಲ್ಲಿ ನೆಲೆ ನಿಂತಿರೋ ಪುರಿ ಜಗನ್ನಾಥನ ಆಸ್ತಿ. ಈ ದೇವಸ್ಥಾನಕ್ಕೆ ಬರೋಬ್ಬರಿ 800 ವರ್ಷಗಳ ಇತಿಹಾಸವಿದೆ. ಪುರಿ ದೇಗುಲದ ಒಟ್ಟು ಸಂಪತ್ತಿನ ಮೌಲ್ಯ 150 ಕೋಟಿ ರೂಪಾಯಿಗೂ ಹೆಚ್ಚು. ಜಗನ್ನಾಥ ದೇವಾಲಯದ ಒಳಕೋಣೆಯಲ್ಲೊಂದು ರತ್ನಭಂಡಾರವಿದೆ. ಇದು ಬೆಲೆಯನ್ನೇ ಕಟ್ಟಲಾಗದ ವಸ್ತುಗಳಿಂದ ತುಂಬಿರುವ ರತ್ನ ಭಂಡಾರ. ಅದೇ ರತ್ನ ಭಂಡಾರದ ಮೂಲ ಕೀಲಿ ಕೈ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಇದನ್ನೂ ವೀಕ್ಷಿಸಿ:  ಬೀಳುವ ಸ್ಥಿತಿಯಲ್ಲಿ ಡೆಡ್ಲಿ ವಿದ್ಯುತ್ ಕಂಬಗಳು: ದುರಂತ ಆಗೋವರೆಗೂ ಎಚ್ಚೆತ್ತುಕೊಳ್ಳಲ್ವಾ ಬೆಸ್ಕಾಂ..?

23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
Read more