26/11 ದಾಳಿಯ ಮಾಸ್ಟರ್ ಮೈಂಡ್ ಸತ್ಯ ಕಕ್ಕುತ್ತಾನಾ?

26/11 ದಾಳಿಯ ಮಾಸ್ಟರ್ ಮೈಂಡ್ ಸತ್ಯ ಕಕ್ಕುತ್ತಾನಾ?

Published : Apr 12, 2025, 08:24 PM ISTUpdated : Apr 12, 2025, 09:11 PM IST

26/11ರ ಮುಂಬೈ ದಾಳಿಯ ಪ್ರಮುಖ ಉಗ್ರ ತಹಾವುರ್ ರಾಣಾನನ್ನು ಅಮೆರಿಕದಿಂದ ಭಾರತಕ್ಕೆ ಕರೆತರಲಾಗಿದೆ. ಈ ಹಿಂದೆ ತಪ್ಪಿಸಿಕೊಂಡಿದ್ದ ಮಾಸ್ಟರ್ ಮೈಂಡ್ ಈಗ ಭಾರತದ ಕೈಗೆ ಸಿಕ್ಕಿಬಿದ್ದಿದ್ದು, ಭಾರತದ ರಣತಂತ್ರವೇನು ಎಂಬುದನ್ನು ಕಾದು ನೋಡಬೇಕಿದೆ.

ಅದು ಭಾರತದ ಪಾಲಿಗೆ ಆರದ ಗಾಯ. ಕೋಟಿ ಕೋಟಿ ಭಾರತೀಯರ ಎದೆಯಲ್ಲಿ ಕ್ರೋಧಾಗ್ನಿ ಹೊತ್ತಿಸಿದ ಗಾಯ. ಅವತ್ತು ಆ ದಾರುಣ ದಾಳಿ ನಡೆಸಿದ ರಾಕ್ಷಸರನ್ನ ಭಾರಯ ಯಾವತ್ತೋ ಯಮಸದನಕ್ಕೆ ಕಳಿಸಿದೆ. ಆದ್ರೆ, ಈ ರಣರಕ್ಕಸ ದಾಳಿಯ ಹಿಂದಿದ್ದ ಮಾಸ್ಟರ್ ಮೈಂಡ್ ಒಬ್ಬ ಮಾತ್ರ, ಬಚಾವ್ ಆಗಿಬಿಟ್ಟಿದ್ದ. ಈಗ ಅವನ ತಲೆಗೇ ಗಂಡಾಂತರ ಎದುರಾಗಿದೆ. ಅಷ್ಟಕ್ಕೂ ದೂರದೇಶದಲ್ಲೆಲ್ಲೋ ಬೆಚ್ಚಗಿದ್ದ ಉಗ್ರಸರ್ಪನಾ, ಅದ್ಯಾವ ಗರುಡಮಂತ್ರ ಪಠಿಸಿ ಭಾರತ ಬರಮಾಡಿಕೊಳ್ತು. ಬಂದಿರೋ ಉಗ್ರನನ್ನ ಏನು ಮಾಡಲಿದೆ ಭಾರತ?  

ನಾವು ನಿಮಗೆ ಹೇಳ್ಬೇಕು ಅಂತಿರೋದು ಇದೇ ಕತೆ. ಈ ಎರಡು ಶಕ್ತಿಗಳು ಒಟ್ಟಾಗಿ ಹೇಗೆ ಹೊಸ ಚರಿತ್ರೆ ಸೃಷ್ಟಿಸಿವೆ ಅನ್ನೋದನ್ನ ಕೇಳೋದೇ ರೋಮಾಂಚಕವಾಗಿದೆ. ಭಾರತ ಈಗ ಬದಲಾಗಿದೆ. ಎದುರಾಳಿ ಒಂದು ಹೆಜ್ಜೆ ಇಡೋ ಮೊದಲೇ, ಭಾರತದ ಅವನ ಕಾಲನ್ನೇ ಕಟ್ಟಿಹಾಕೋ ಮಟ್ಟಕ್ಕೆ ಬಲಿಷ್ಠವಾಗಿದೆ. ಈ ಬದಲಾವಣೆಗೆ ಕಾರಣವಾಗಿದ್ದು, ಆ ಇಬ್ಬರು. ಭಾರತ ನಡೆಸಿದ ಆ ಸರ್ಜಿಕಲ್ ಸ್ಟ್ರೈಕ್, ಭಾರತದ ಶಕ್ತಿ ಎಂಥದ್ದು ಅನ್ನೋದನ್ನ ಇಡೀ ಜಗತ್ತಿಗೆ ಹೊಸದಾಗಿ ಪರಿಚಯಿಸಿತ್ತು. ಆ ಶಕ್ತಿ ಪ್ರದರ್ಶನದ ಹಿಂದೆ ಇದ್ದದ್ದು, ಇದೇ ಅಜಿತ್ ದೋವಲ್. ಭಾರತದ ವಿದೇಶಾಂಗ ನೀತಿ, ಈಗ ಬದಲಾಗಿದೆ. ಅದೇ ಥರ ದೇಶದ ಗಡಿಯಲ್ಲೂ, ಗಡಿಯೊಳಗೂ ಭಾರತ ಬಲಿಷ್ಠವಾಗಿದೆ. ಅದಕ್ಕೆ ಸಣ್ಣ ಉದಾಹರಣೆ 26/11 ದಾಳಿಯ ಉಗ್ರ ತಹಾವುರ್‌ ರಾಣಾನನ್ನು ಅಮೆರಿಕದಿಂದ ಭಾರತಕ್ಕೆ ಕರೆತರಲಾಗಿದ್ದು, ವಿಚಾರಣೆ ಆರಂಭವಾಗಿದೆ. 
 

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
24:19ಮುಸ್ಲಿಮರೆಲ್ಲಾ ಒಂದೇ ಥರ ಅಲ್ಲ.. ಹೀಗೆ ಹೇಳಿದ್ದೇಕೆ ಭಾಗವತ್? RSS ವಿರುದ್ಧದ ಪ್ರಶ್ನೆಗಳಿಗೆಲ್ಲಾ ಮೋಹನ್ ಭಾಗವತ್ ಉತ್ತರ!
Read more