26/11 ದಾಳಿಯ ಮಾಸ್ಟರ್ ಮೈಂಡ್ ಸತ್ಯ ಕಕ್ಕುತ್ತಾನಾ?

26/11 ದಾಳಿಯ ಮಾಸ್ಟರ್ ಮೈಂಡ್ ಸತ್ಯ ಕಕ್ಕುತ್ತಾನಾ?

Published : Apr 12, 2025, 08:24 PM ISTUpdated : Apr 12, 2025, 09:11 PM IST

26/11ರ ಮುಂಬೈ ದಾಳಿಯ ಪ್ರಮುಖ ಉಗ್ರ ತಹಾವುರ್ ರಾಣಾನನ್ನು ಅಮೆರಿಕದಿಂದ ಭಾರತಕ್ಕೆ ಕರೆತರಲಾಗಿದೆ. ಈ ಹಿಂದೆ ತಪ್ಪಿಸಿಕೊಂಡಿದ್ದ ಮಾಸ್ಟರ್ ಮೈಂಡ್ ಈಗ ಭಾರತದ ಕೈಗೆ ಸಿಕ್ಕಿಬಿದ್ದಿದ್ದು, ಭಾರತದ ರಣತಂತ್ರವೇನು ಎಂಬುದನ್ನು ಕಾದು ನೋಡಬೇಕಿದೆ.

ಅದು ಭಾರತದ ಪಾಲಿಗೆ ಆರದ ಗಾಯ. ಕೋಟಿ ಕೋಟಿ ಭಾರತೀಯರ ಎದೆಯಲ್ಲಿ ಕ್ರೋಧಾಗ್ನಿ ಹೊತ್ತಿಸಿದ ಗಾಯ. ಅವತ್ತು ಆ ದಾರುಣ ದಾಳಿ ನಡೆಸಿದ ರಾಕ್ಷಸರನ್ನ ಭಾರಯ ಯಾವತ್ತೋ ಯಮಸದನಕ್ಕೆ ಕಳಿಸಿದೆ. ಆದ್ರೆ, ಈ ರಣರಕ್ಕಸ ದಾಳಿಯ ಹಿಂದಿದ್ದ ಮಾಸ್ಟರ್ ಮೈಂಡ್ ಒಬ್ಬ ಮಾತ್ರ, ಬಚಾವ್ ಆಗಿಬಿಟ್ಟಿದ್ದ. ಈಗ ಅವನ ತಲೆಗೇ ಗಂಡಾಂತರ ಎದುರಾಗಿದೆ. ಅಷ್ಟಕ್ಕೂ ದೂರದೇಶದಲ್ಲೆಲ್ಲೋ ಬೆಚ್ಚಗಿದ್ದ ಉಗ್ರಸರ್ಪನಾ, ಅದ್ಯಾವ ಗರುಡಮಂತ್ರ ಪಠಿಸಿ ಭಾರತ ಬರಮಾಡಿಕೊಳ್ತು. ಬಂದಿರೋ ಉಗ್ರನನ್ನ ಏನು ಮಾಡಲಿದೆ ಭಾರತ?  

ನಾವು ನಿಮಗೆ ಹೇಳ್ಬೇಕು ಅಂತಿರೋದು ಇದೇ ಕತೆ. ಈ ಎರಡು ಶಕ್ತಿಗಳು ಒಟ್ಟಾಗಿ ಹೇಗೆ ಹೊಸ ಚರಿತ್ರೆ ಸೃಷ್ಟಿಸಿವೆ ಅನ್ನೋದನ್ನ ಕೇಳೋದೇ ರೋಮಾಂಚಕವಾಗಿದೆ. ಭಾರತ ಈಗ ಬದಲಾಗಿದೆ. ಎದುರಾಳಿ ಒಂದು ಹೆಜ್ಜೆ ಇಡೋ ಮೊದಲೇ, ಭಾರತದ ಅವನ ಕಾಲನ್ನೇ ಕಟ್ಟಿಹಾಕೋ ಮಟ್ಟಕ್ಕೆ ಬಲಿಷ್ಠವಾಗಿದೆ. ಈ ಬದಲಾವಣೆಗೆ ಕಾರಣವಾಗಿದ್ದು, ಆ ಇಬ್ಬರು. ಭಾರತ ನಡೆಸಿದ ಆ ಸರ್ಜಿಕಲ್ ಸ್ಟ್ರೈಕ್, ಭಾರತದ ಶಕ್ತಿ ಎಂಥದ್ದು ಅನ್ನೋದನ್ನ ಇಡೀ ಜಗತ್ತಿಗೆ ಹೊಸದಾಗಿ ಪರಿಚಯಿಸಿತ್ತು. ಆ ಶಕ್ತಿ ಪ್ರದರ್ಶನದ ಹಿಂದೆ ಇದ್ದದ್ದು, ಇದೇ ಅಜಿತ್ ದೋವಲ್. ಭಾರತದ ವಿದೇಶಾಂಗ ನೀತಿ, ಈಗ ಬದಲಾಗಿದೆ. ಅದೇ ಥರ ದೇಶದ ಗಡಿಯಲ್ಲೂ, ಗಡಿಯೊಳಗೂ ಭಾರತ ಬಲಿಷ್ಠವಾಗಿದೆ. ಅದಕ್ಕೆ ಸಣ್ಣ ಉದಾಹರಣೆ 26/11 ದಾಳಿಯ ಉಗ್ರ ತಹಾವುರ್‌ ರಾಣಾನನ್ನು ಅಮೆರಿಕದಿಂದ ಭಾರತಕ್ಕೆ ಕರೆತರಲಾಗಿದ್ದು, ವಿಚಾರಣೆ ಆರಂಭವಾಗಿದೆ. 
 

50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
Read more