ಎನ್‌ಡಿಎ ಒಳಗೂ ನಡೀತಿದೆಯಾ ಮುಸುಕಿನ ಗುದ್ದಾಟ..? ಐಎನ್‌ಡಿಐಎಗೆ ಶಾಪವಾಗುತ್ತಾ ಒಳಜಗಳ..?

ಎನ್‌ಡಿಎ ಒಳಗೂ ನಡೀತಿದೆಯಾ ಮುಸುಕಿನ ಗುದ್ದಾಟ..? ಐಎನ್‌ಡಿಐಎಗೆ ಶಾಪವಾಗುತ್ತಾ ಒಳಜಗಳ..?

Published : Nov 03, 2023, 02:58 PM IST

I.N.D.I.Aಲಿ ಶುರುವಾಗಿದೆ ಕ್ಷೇತ್ರಕ್ಕಾಗಿ ಹಗ್ಗಜಗ್ಗಾಟ..!
ಪಂಚರಾಜ್ಯ ಚುನಾವಣೆ ಹೊತ್ತಲ್ಲಿ ಮೈತ್ರಿ-ಮನಸ್ತಾಪ!
ಕೋಲಾಹಲ ಸೃಷ್ಟಿಸಿದೆ ಕ್ಷೇತ್ರ ಹಂಚಿಕೆಯ ಗೊಂದಲ!

ಅರ್ಧ ವರ್ಷ ಇನ್ನೊಂದರ್ಧ ವರ್ಷ ಅಷ್ಟೇ ಬಾಕಿ, ಲೋಕಸಭಾ(Loksabha) ಸಂಗ್ರಾಮ ಅನ್ನೋ ಮಹಾ ಸಂಘರ್ಷಕ್ಕೆ. ಆದ್ರೆ, ಆ ಯುದ್ಧವನ್ನ ಗೆಲ್ಲೋದಕ್ಕೆ ಸಿದ್ಧವಾಗ್ತಾ ಇರೋ ಮೈತ್ರಿಪಡೆಗಳಲ್ಲೇ ಸವಾಲು ಸೃಷ್ಟಿಯಾಗಿದೆ. ಸಮಸ್ಯೆ ತಲೆದೂರಿದೆ. ಲೆಕ್ಕಾಚಾರಗಳೇ ಬುಡಮೇಲಾಗೋ ಸಾಧ್ಯತೆ ಕಾಣ್ತಾ ಇದೆ. ಈ ಎರಡು ಮೈತ್ರಿಕೂಟಗಳ ಮಧ್ಯೆ ಯುದ್ಧವಂತೂ ಶುರುವಾಗಿದೆ. ಆದ್ರೆ, ಈ ಮೈತ್ರಿ ಕೂಟದ ಒಳಗೇ ಅಂತರ್ಯುದ್ಧವೇ ಆರಂಭವಾಗಿದೆಯಾ ಅನ್ನೋ ಕುತೂಹಲವೊಂದು ಈಗ ನಿರ್ಮಾಣವಾಗಿದೆ. ಅದಕ್ಕೆ ಒಂದಲ್ಲ ಅಂತ ಹತ್ತಾರು ಕಾರಣಗಳು ಕಣ್ಣಿಗೆ ರಾಚ್ತಾ ಇದಾವೆ. ಕಳೆದ ನಾಲ್ಕು ತಿಂಗಳ ಹಿಂದೆ, ಇದೇ ಬೆಂಗಳೂರಲ್ಲಿ, ಯುಪಿಎ(UPA) ಅನ್ನೋ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ, ಐಎನ್‌ಡಿಐಎ(I.N.D.I.A ) ಅನ್ನೋ ಹೊಸ ಸ್ವರೂಪ ಪಡೆದು, ಎನ್‌ಡಿಎ ವಿರುದ್ಧ ರಣಘೋಷ ಮೊಳಗಿಸಿತ್ತು. ಅದೇ ಹೊತ್ತಲ್ಲಿ, ಅಲ್ಲಿ, ದೂರದ ದೆಹಲಿಯಲ್ಲಿ ಮೋದಿ ನಾಯಕತ್ವದಲ್ಲಿ ಎನ್‌ಡಿಎ ಮೈತ್ರಿ ಕೂಟವೂ ಹೊಸ ಆಕೃತಿ ಪಡೆದಿತ್ತು. ಈ ಇಬ್ಬರ ಟಾರ್ಗೆಟ್ ಇದ್ದದ್ದು, ಅವರನ್ನ ಇವರು ಗೆಲ್ಲೋದು. ಇವರನ್ನ ಅವರು ಗೆಲ್ಲೋದು. ಈ ಗೆದ್ದೇ ಗೆಲ್ಲೋ ಆಟದಲ್ಲಿ, ನಾಲ್ಕು ತಿಂಗಳ ಬಳಿಕ ಯಾರ್ಯಾರು ಏನೇನು ಮಾಡಿದಾರೆ ಅನ್ನೋದನ್ನ ನೋಡಿದ್ರೆ, ಈ ಮೈತ್ರಿಕೂಟಗಳ ಮಿಸ್ಟ್ರಿ ಅರ್ಥವಾಗುತ್ತೆ. ಕರ್ನಾಟಕದ ಪ್ರಾದೇಶಿಕ ಪಕ್ಷ ಜೆಡಿಎಸ್ ಈಗ ಎನ್‌ಡಿಎ ಭಾಗವಾಗಿದೆ. ಮುಂದಿನ ಲೋಕಸಭಾ ಚುನಾವಣೆನಾ ಬಿಜೆಪಿ ಜೊತೆ ಮೈತ್ರಿ ಮಾಡ್ಕೊಂಡು ಎದುರಿಸಲಿದೆ. ಇದರಿಂದ ಬಿಜೆಪಿಗೆ ಅದೇನು ಲಾಭವಾಗಲಿದೆಯೋ ಅಂದಾಜು ಸಿಗುತ್ತಿಲ್ಲ. ಆದ್ರೆ, ಜೆಡಿಎಸ್‌ಗೆ ಅಂತೂ ಕನಿಷ್ಟ ಕೆಲವು ಸೀಟುಗಳಲ್ಲಿ ಗೆಲುವು ಸಿಕ್ಕಷ್ಟೇ ಖುಷಿಯಾಗಿದೆ.

ಇದನ್ನೂ ವೀಕ್ಷಿಸಿ:  ಅಪ್ಪ ಮಗನನ್ನ ಕೊಂದರೆ.. ಇಲ್ಲಿ ಮಗ ತಾಯಿಯನ್ನ ಮುಗಿಸಿದ..!

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more