ಮೋದಿಗೆ ಮುಂದೆ RSSನ ಅವಶ್ಯಕತೆ ಇಲ್ವಾ..? ನಿತಿನ್ ಗಡ್ಕರಿಯಿಂದ ಬಯಲಾಯ್ತಾ ಮೋದಿ-ಆರ್‌ಎಸ್ಎಸ್ ಮುನಿಸು?

ಮೋದಿಗೆ ಮುಂದೆ RSSನ ಅವಶ್ಯಕತೆ ಇಲ್ವಾ..? ನಿತಿನ್ ಗಡ್ಕರಿಯಿಂದ ಬಯಲಾಯ್ತಾ ಮೋದಿ-ಆರ್‌ಎಸ್ಎಸ್ ಮುನಿಸು?

Published : Jul 14, 2024, 05:02 PM ISTUpdated : Jul 14, 2024, 05:03 PM IST


ನಿತಿನ್ ಗಡ್ಕರಿ, ಮೋದಿ ನಡುವಿನ ಸಂಬಂಧ ಸರಿ ಇಲ್ಲವಾ..? 
RSS ಸಂಘಟನೆಗೆ ಮುಂದೆ ಮೋದಿಯ ಅವಶ್ಯಕತೆ ಇಲ್ಲವಾ..? 
RSS ಬೆಂಬಲ ಬೇಡದಿರುವಷ್ಟು BJP ಎತ್ತರಕ್ಕೆ ಬೆಳೆದಿದೆಯಾ..?

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಡುವೆ ಎಲ್ಲವೂ ಸರಿ ಇಲ್ಲ ಅನ್ನೋದು ಈಗ ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಲೋಕಸಭಾ ಚುನಾವಣೆ (Lok Sabha election) ನಂತರ ಈ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದಂತಿದೆ. ಬಿಜೆಪಿ ನಾಯಕರಿಗೆ ಅಹಂಕಾರವೆಂದು ಆರ್‌ಎಸ್‌ಎಸ್ ನಾಯಕರು ಹೇಳ್ತಿದ್ದಾರೆ. ಆರ್‌ಎಸ್‌ಎಸ್‌ನ(RSS) ಅವಶ್ಯತೆ ನಮಗೆ ಬೇಕಾಗಿಲ್ಲವೆಂದು ಬಿಜೆಪಿ(BJP) ನಾಯಕರು ಹೇಳ್ತಿದ್ದಾರೆ. ಬಿಜೆಪಿ ಪಕ್ಷದ ಹುಟ್ಟಿಗೆ ಕಾರಣವೇ ಆರ್‌ಎಸ್‌ಎಸ್‌ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಬಿಜೆಪಿ ಒಂದು ರಾಜಕೀಯ ಪಕ್ಷವಾದರು ಸಹ, ಆರ್‌ಎಸ್‌ಎಸ್‌ ಸಿದ್ಧಾಂತಗಳ ಮೇಲೆ ನಿಂತಿರುವ ಪಕ್ಷ. ಹಾಗೆನೇ ಬಿಜೆಪಿ ಪಕ್ಷ ಮೊದಲಿನಿಂದಲೂ ಆರ್‌ಎಸ್‌ಎಸ್‌ ಕಂಟ್ರೋಲ್‌ನಲ್ಲಿ ಇದ್ದುಕೊಂಡೇ ಬಂದಿದೆ. ಆದ್ರೆ ಈಗ ಅದೆಲ್ಲವೂ ಬದಲಾಗುತ್ತಿದೆ ಅನ್ನೋ ಸುಳಿವು ಸಿಗುತ್ತಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಈಗ ಬಿಜೆಪಿ ವರ್ಸಸ್ ಆರ್‌ಎಸ್‌ಎಸ್‌ ಆಗುತ್ತಿದೆಯಾ ಎಂಬ ಅನುಮಾನ ಶುರುವಾಗಿದೆ. ಯಾಕೆಂದ್ರೆ ಇತ್ತೀಚಿಗೆ ಆರ್‌ಎಸ್‌ಎಸ್‌ ನಾಯಕರಿಗು ಮತ್ತು ಮೋದಿಗೂ(Narendra Modi) ಹೊಂದಾಣಿಕೆ ಆಗ್ತಿಲ್ಲವಂತೆ. ಮೋದಿ ಆರ್‌ಎಸ್‌ಎಸ್‌ ಮಾತು ಕೇಳ್ತಿಲ್ಲವಂತೆ, ನಿಧಾನಕ್ಕೆ ಪಕ್ಷದಿಂದ ಆರ್‌ಎಸ್‌ಎಸ್‌ ಅನ್ನು ದೂರ ಇಡುತ್ತಿದ್ದಾರೆಂಬ ಆರೋಪಗಳು ಮೋದಿ ಮೇಲೆ ಕೇಳಿ ಬರುತ್ತಿವೆ. ಹಾಗೆನೇ ಮೋದಿಯ ಈ ನಡವಳಿಕೆಯಿಂದ ಆರ್‌ಎಸ್‌ಎಸ್‌ ನಾಯಕರು ಮೋದಿ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ವೀಕ್ಷಿಸಿ:  Chitradurga Murder: ಮಲಗಿದ್ದವನ ಮೇಲೆ ಕಲ್ಲು ಎತ್ತಿಹಾಕಿದ ಗೆಳೆಯ..! ಬೆಸ್ಟ್ ಫ್ರೆಂಡ್ ಮುಗಿಸಲು ಕಾರಣ ಅವಳು..!

21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
19:54ಮುಖ್ಯಮಂತ್ರಿ ವಿಜಯ್ ಫಸ್ಟ್ ಡೇ ಫಸ್ಟ್ ಶೋ: ಭರವಸೆಗಳ ಬೆಟ್ಟ, ಖಜಾನೆಗೆ ಭಾರಿ ಹೊರೆ!
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
Read more