ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ: ಕರ್ನಾಟಕದಿಂದ 530 ಮಂದಿಗೆ ಹೈಕಮಾಂಡ್‌ನಿಂದ ಆಹ್ವಾನ

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ: ಕರ್ನಾಟಕದಿಂದ 530 ಮಂದಿಗೆ ಹೈಕಮಾಂಡ್‌ನಿಂದ ಆಹ್ವಾನ

Published : Feb 17, 2024, 11:03 AM ISTUpdated : Feb 17, 2024, 11:04 AM IST

ಅಧಿವೇಶನದ ಮೊದಲ ದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾರಿಂದ ಭಾಷಣ
ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ ನಾಥ್ ಸಿಂಗ್ ಸೇರಿ ಹಲವರಿಂದ ಭಾಷಣ
ನಾಳೆ ಅಧಿವೇಶನ ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ನರೇಂದ್ರ ಮೋದಿ
 

ಇಂದಿನಿಂದ ದೆಹಲಿಯಲ್ಲಿ ಎರಡು ದಿನಗಳ ರಾಷ್ಟ್ರೀಯ ಬಿಜೆಪಿ ಕಾರ್ಯಕಾರಿಣಿ ಸಭೆ(National Executive Meeting) ನಡೆಯಲಿದೆ. ಕರ್ನಾಟಕದಿಂದ 530 ಬಿಜೆಪಿ(BJP) ನಾಯಕರಿಗೆ ಹೈಕಮಾಂಡ್‌ನಿಂದ ಆಹ್ವಾನ ಬಂದಿದೆ. ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ಮೋದಿ ಭಾಷಣವೇ ಪ್ರಮುಖವಾಗಿದೆ. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಲೋಕಸಭಾ ಚುನಾವಣೆ(Loksabha Election) ಬಗ್ಗೆ ಪಾಠ ಮಾಡಲಿದ್ದಾರೆ. 400 ಕ್ಷೇತ್ರ ಗೆಲುವಿಗೆ ಬೇಕಾದ ನೀಲ ನಕ್ಷೆ ತಯಾರಿಸಿ ಕೊಡಲಿದ್ದಾರೆ ಎಂದು ತಿಳಿದುಬಂದಿದೆ. ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಕರ್ನಾಟಕ(Karnataka) ನಾಯಕರು ಭಾಗಿಯಾಗಲಿದ್ದಾರೆ. ಯಡಿಯೂರಪ್ಪ, ವಿಜಯೇಂದ್ರ, ಅಶೋಕ್, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಈಶ್ವರಪ್ಪ, ಅಶ್ವತ್ಥನಾರಾಯಣ, ಕೋಟಾ ಶ್ರೀನಿವಾಸಪೂಜಾರಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳು ರಾಷ್ಟ್ರೀಯ ಬಿಜೆಪಿ ಕಾರ್ಯಕಾರಿಣಿಯಲ್ಲಿ ಭಾಗಿಯಾಗಲಿದ್ದಾರೆ. ವಿವಿಧ ರಾಜ್ಯಗಳಿಂದ 12 ಸಾವಿರ ಕೇಸರಿ ನಾಯಕರಿಗೆ ಆಹ್ವಾನ ನೀಡಲಾಗಿದೆ. ನವದೆಹಲಿಯ ಭಾರತ್ ಮಂಟಪದಲ್ಲಿ ಕಾರ್ಯಕಾರಿಣಿ ಸಭೆ ನಡೆಯಲಿದೆ. ಬೇರೆ ಬೇರೆ ರಾಜ್ಯದ ಚುನಾಯಿತ ಜನಪ್ರತಿನಿಧಿಗಳು, ಮಾಜಿ ಶಾಸಕ, ಸಂಸದರು, ಮಾಜಿ ಸಿಎಂಗಳು, ಕೇಂದ್ರ ಸಚಿವರು, ಮೇಯರ್, ಉಪ ಮೇಯರ್ಗಳು, ರಾಷ್ಟ್ರೀಯ, ರಾಜ್ಯ ಘಟಕಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ವೀಕ್ಷಿಸಿ:  Maldives: ಆರ್ಥಿಕ ದುಸ್ಥಿತಿಗೆ ತಲುಪಿದ ಮಾಲ್ಡೀವ್ಸ್‌: ಬೇಲ್ಔಟ್ ಸಾಲಕ್ಕಾಗಿ IMF ಮೊರೆ, ದಿವಾಳಿ ಎಂದು ಘೋಷಣೆ

24:09ದೀದಿ ಕೋಟೆಯಲ್ಲಿ ಮಹಾಬಿರುಕು.. ಏನು ಕಾರಣ? ಗಜಕೇಸರಿ ವ್ಯೂಹ.. ದೀದಿ ದಿಗ್ಬಂಧನ.. ಏನಿದರ ಗುಟ್ಟು?
24:26ಪ್ಲಾಸ್ಟಿಕ್ ನೋಟು... ಕರೆನ್ಸಿ ಕ್ರಾಂತಿ! ಕಾಗದದ ನೋಟುಗಳ ಆಯಸ್ಸು ಖತಂ, ಮತ್ತೆ ಡಿಮಾನಟೈಸೇಶನ್..?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
Read more