70ಕ್ಕೂ ಹೆಚ್ಚಿನ ಹಾಲಿ ಎಂಪಿಗಳಿಗೆ ಈ ಬಾರಿ ಟಿಕೆಟ್ ಡೌಟ್..? ತಮಿಳುನಾಡಿನಲ್ಲಿ ಕಮಲ ಅರಳಿಸಲು ಮೋದಿ ಮಾಸ್ಟರ್ ಪ್ಲಾನ್

70ಕ್ಕೂ ಹೆಚ್ಚಿನ ಹಾಲಿ ಎಂಪಿಗಳಿಗೆ ಈ ಬಾರಿ ಟಿಕೆಟ್ ಡೌಟ್..? ತಮಿಳುನಾಡಿನಲ್ಲಿ ಕಮಲ ಅರಳಿಸಲು ಮೋದಿ ಮಾಸ್ಟರ್ ಪ್ಲಾನ್

Published : Mar 02, 2024, 05:34 PM IST

18 ರಾಜ್ಯಗಳು ಮತ್ತು 150 ಕ್ಷೇತ್ರಗಳ ಕುರಿತು ನಡೆದ ಚರ್ಚೆ
ಈ ಬಾರಿಯೂ ಹೊಸಬರಿಗೆ ಮತ್ತು ಮಹಿಳೆಯರಿಗೆ ಆಧ್ಯತೆ
ಕೆಲಸ ಮಾಡದೇ ಇದ್ದವರಿಗೆ ಮೋದಿ ಕೊಡ್ತಾರಾ ಶಾಕ್..? 

ಲೋಕ ಸಮರಕ್ಕೆ ಬಿಜೆಪಿ ಮೊದಲ ಮುದ್ರೆ ಒತ್ತಿದೆ. ಎಲೆಕ್ಷನ್ ಕಮಿಟಿಯೊಂದಿಗೆ ಮೋದಿ(Narendra Modi) ಮೊದಲ ಮೀಟಿಂಗ್ ನಡೆಸಿದ್ದಾರೆ. ರಾತ್ರಿ ಆರಂಭವಾದ ಮೀಟಿಂಗ್ ಬೆಳಗಿನ ಜಾವದವರೆಗೂ ನಡೆದ ಮೀಟಿಂಗ್‌ನಲ್ಲಿ ಹಲವಾರು ಪ್ರಮುಖ ಚರ್ಚೆಗಳು ನಡೆದಿವೆ. ಕೆಲವು ಕ್ಷೇತ್ರಗಳ ಕ್ಯಾಂಡಿಡೇಟ್‌ಗಳ ಪಟ್ಟಿ ಕೂಡ ರೆಡಿಯಾಗಿದೆಯಂತೆ. ಬಿಜೆಪಿ(BJP) ಪಾಳೆಯದಲ್ಲಿ ಲೋಕಸಭೆ ಎಲೆಕ್ಷನ್ ತಯಾರಿಗೆ ಅಧಿಕೃತ ಮುದ್ರೆ ಬಿದ್ದಿದೆ. ನರೇಂದ್ರ ಮೋದಿ ಮೊದಲ ಮೀಟಿಂಗ್ ನಡೆಸಿದ್ದಾರೆ. ರಾತ್ರಿ 10:30ಕ್ಕೆ ಆರಂಭವಾದ ಮೀಟಿಂಗ್(Meeting) ಬೆಳಗಿನ ಜಾವ 3:15ರ ವರೆಗೂ ಮೀಟಿಂಗ್ ನಡೆದಿದೆ. ನಾಲ್ಕು ಗಂಟೆಗೂ ಹೆಚ್ಚು ಸಮಯಗಳ ಕಾಲ ನಡೆದ ಈ ಮೀಟಿಂಗ್‌ನಲ್ಲಿ ಹಲವು ಪ್ರಮುಖ ಕ್ಷೇತ್ರಗಳ ಕುರಿತು ಚರ್ಚೆಗಳು ನಡೆದಿವೆ. ಪ್ರಧಾನಿಗಳ ಮನೆಯಲ್ಲಿ ನಡೆದ ಈ ಮೀಟಿಂಗ್ನಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ಸೇರಿದಂತೆ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಪ್ರಕಾಶ್ ಜಾವ್ಡೇಕರ್, ಮನ್ಸುಖ್ ಮಾಂಡವಿಯಾ, ಪುಷ್ಕರ್ ಧಾಮಿ, ಪ್ರಮೋದ್ ಸಾವಂತ, ಭೂಪೇಂದ್ರ ಯಾದವ್, ಜೋತಿರಾದಿತ್ಯ ಸಿಂಧಿಯಾ, ಕೇಶವ್ ಮೌರ್ಯ ಮತ್ತು ಉತ್ತರ ಪ್ರದೇಶ್ ಸಿಎಂ ಯೋಗಿ ಆದಿತ್ಯನಾಥ್ ಭಾಗಿಯಾಗಿದ್ದರು. ಲೋಕಸಭೆ ಎಲೆಕ್ಷನ್‌ಗೆ(Loksabha Election) ನಡೆದ ಮೊದಲ ಮೀಟಿಂಗ್ನಲ್ಲಿ, ಮೋದಿ ಈ ಪ್ರಮುಖ ನಿರ್ಧಾರವನ್ನು ಕೈಗೊಂಡಿದ್ದಾರೆಂದು ಹೇಳಲಾಗುತ್ತಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಒಟ್ಟು 303 ಸೀಟ್ಗಳನ್ನು ಗೆದ್ದಿದೆ. ಈಗಿರುವ 303 ಎಂಪಿಗಳಲ್ಲಿ 70ಕ್ಕೂ ಹೆಚ್ಚಿನ ಎಂಪಿಗಳಿಗೆ ಈ ಬಾರಿ ಟಿಕೆಟ್ ನೀಡುವುದು ಡೌಟ್ ಎಂದು ಹೇಳಲಾಗುತ್ತಿದೆ. 

ಇದನ್ನೂ ವೀಕ್ಷಿಸಿ:  ಅಲ್ಲೇ ಇಡ್ಲಿ ತಿಂದವನು ಅಲ್ಲೇ ಬಾಂಬೂ ಇಟ್ಟನಾ..? ರಾಮೇಶ್ವರಂ ಕೆಫೆಯೇ ಟಾರ್ಗೆಟ್ ಆಗಿದ್ದು ಯಾಕೆ..?

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more