Ayodhya Ram Mandir: ಶ್ರೀರಾಮ ಇಂದಿಗೂ ನಮಗೆ ಯಾಕೆ ಮುಖ್ಯ?: ಧರ್ಮ ಚಿಂತಕ ಹರಿ ರವಿಕುಮಾರ್ ಹೇಳಿದ್ದೇನು?

Apr 16, 2024, 5:54 PM IST

ಭಾರತಕ್ಕೂ ಪಾಶ್ಚಾತ್ಯ ಜಗತ್ತಿಗೂ ಬಹಳ ದೊಡ್ಡ ವ್ಯತ್ಯಾಸ ಏನೆಂದರೆ ಇತಿಹಾಸದ ಪರಿಕಲ್ಪನೆ. ಭಾರತೀಯ ಪರಿಕಲ್ಪನೆ ಏನೆಂದರೆ ಕಾಲ ಚಕ್ರದ ರೀತಿ ಮುಂದೆ ಹೋಗುತ್ತಿರುವುದು. ಆದರೆ ಪಾಶ್ಚಾತ್ಯ ಪರಿಕಲ್ಪನೆ ಎಂದರೆ ನೇರವಾದ ಒಂದು ಗೆರೆ ಇದ್ದಂತೆ ಎಂದು ಲೇಖಕರು ಹಾಗೂ ಧರ್ಮ ಚಿಂತಕರಾದ ಹರಿ ರವಿಕುಮಾರ್(Hari Ravikumar) ವಿವರಿಸಿದ್ದಾರೆ. ಅಯೋಧ್ಯೆಯ ರಾಮಮಂದಿರದ (Ram Mandir) ಇತಿಹಾಸ ಕುರಿತು ಮಾತನಾಡಿರುವ ಅವರು, ರಾಮ ಐತಿಹಾಸಿಕ ವ್ಯಕ್ತಿಯೋ ಇಲ್ಲವೋ ಎಂಬ ಪ್ರಶ್ನೆ ಬರುತ್ತದೆ. ರಾಮ, ಕೃಷ್ಣ, ಶಿವ ಐದು ಸಾವಿರ ವರ್ಷಗಳಿಂದಲೂ ಜನಸಾಮಾನ್ಯರ ಮನಸ್ಸಿನಲ್ಲಿ ದೃಢವಾಗಿ ನಿಂತಿದ್ದಾರೆ. ಯಾಕೆಂದರೆ ಅವರ ವ್ಯಕ್ತಿತ್ವ ಆ ರೀತಿ ಇದೆ. ರಾಮನ ಜೀವನವನ್ನು ನೋಡಿದರೆ ನಾವು ಸಾಕಷ್ಟು ವಿಷಯಗಳನ್ನು ಕಲಿಯಬಹುದು ಎಂದು ವಿವರಿಸಿದ್ದಾರೆ.

ಇದನ್ನೂ ವೀಕ್ಷಿಸಿ:  Crime News: ಅವಳನ್ನ ಕೊಂದವನು ಅವಳ ಮನೆಯಲ್ಲೇ ಇದ್ದ..! ಅನ್ನ ಹಾಕಿದವಳನ್ನೇ ಕೊಂದು ಮುಗಿಸಿದ..!