ಸಾಲು ಸಾಲು ಸರ್ವೆಗಳಲ್ಲೂ ಮೋದಿಗೇ ಗೆಲುವು! ನಿಜವಾಗಲಿದೆಯಾ ಮೋದಿ ‘400’ ನಿರೀಕ್ಷೆ?

ಸಾಲು ಸಾಲು ಸರ್ವೆಗಳಲ್ಲೂ ಮೋದಿಗೇ ಗೆಲುವು! ನಿಜವಾಗಲಿದೆಯಾ ಮೋದಿ ‘400’ ನಿರೀಕ್ಷೆ?

Published : Dec 25, 2023, 02:58 PM IST

ಸಾಲು ಸಾಲು ಸರ್ವೆಗಳಲ್ಲೂ ಮೋದಿಗೇ ಗೆಲುವು!
ಮತ್ತೊಂದು ಸರ್ವೆ ಹೇಳಿದೆ ಮತ್ತೊಮ್ಮೆ ಮೋದಿ!
ವಿಪಕ್ಷಗಳಿಗೆ ಶಾಕ್ ಕೊಟ್ಟಿತೇಕೆ ಹೊಸ ಸಮೀಕ್ಷೆ!

ಅದೊಂದು ಸರ್ವೇ ಅಚ್ಚರಿ ಅಂಕಿಅಂಶಗಳನ್ನ ತೆರೆದಿಟ್ಟಿದೆ. ಬಿಜೆಪಿ(BJP)- ಜೆಡಿಎಸ್(JDS) ಮೈತ್ರಿಗೆ ಅದೃಷ್ಟ ಒಲಿಯುತ್ತಾ ಅನ್ನೋ ಪ್ರಶ್ನೆಗೆ ಉತ್ತರ ಕೊಟ್ಟಿದೆ. ಸಿದ್ದರಾಮಯ್ಯ(Siddaramaiah) ಸರ್ಕಾರಕ್ಕೆ ಬಿಗ್ ಶಾಕ್ ಕೊಟ್ಟಿದೆ. 2024ರ ಲೋಕಸಭಾ ಚುನಾವಣೆ(Loksabha), ಈ ಚುನಾವಣೆಯನ್ನ ಯಾರೊಬ್ಬರೂ ಈಗ ದೇಶದ ಮತ್ತೊಂದು ಎಲೆಕ್ಷನ್ ಅನ್ನೋ ಹಾಗೆ ನೋಡೋಕೆ ಸಾಧ್ಯವೇ ಇಲ್ಲ. ಇದು ಯುದ್ಧ.. ಮಹಾಯುದ್ಧ ಮೋದಿ ವರ್ಸಸ್ ವಿಪಕ್ಷಗಳ ಘನಘೋರ ಕದನ. ಲೋಕಸಮರಕ್ಕೆ ಅದಾಗಲೇ ಲೆಕ್ಕಾಚಾರುಗಳು, ರಣತಂತ್ರಗಳು, ಎಲ್ಲವೂ ಸಿದ್ಧವಾಗ್ತಾ ಇದಾವೆ. ಈ ಕಡೆ ಪ್ರಧಾನಿ ನರೇಂದ್ರ ಮೋದಿ, ತಮ್ಮ ಕೇಸರಿ ಪಾಳಯದ ಸೇನಾನಿಗಳಿಗೆ ವೋಟ್ ಶೇರ್ 50 ಪರ್ಸಂಟ್ ಹೆಚ್ಚಿಸಿಕೊಳ್ಳಬೇಕು. ಕನಿಷ್ಟ 350 ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲಬೇಕು ಅಂತ ಹೇಳಿದ್ದಾರೆ. ಅದೂ ಅಲ್ಲದೆ, ಕಳೆದ ಸಲ 303 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ ಈ ಸಲ 400 ಕ್ಷೇತ್ರಗಳನ್ನ ಗೆಲ್ಲಲೇಬೇಕು ಅಂತ ಸನ್ನದ್ಧವಾಗಿದೆ. ಅದರಲ್ಲೂ ಪಂಚರಾಜ್ಯ ಚುನಾವಣೆಗಳ ಬಳಿಕ ಈ ಹೆಬ್ಬಯಕೆ ಮತ್ತೂ ಹೆಚ್ಚಾಗಿದೆ. ಕೇಸರಿ ಪಾಳಯ ಹೀಗೆ ಗೆದ್ದೇ ಗೆಲುವೆ ಎಂಬ ಗುಂಗಲ್ಲಿರುವಾಗ್ಲೇ, ಇನ್ನೊಂದು ಸಮೀಕ್ಷೆ ನಡೆದಿದೆ. ಆ ಸಮೀಕ್ಷೆ ಒಂದಷ್ಟು ಅಂಕಿ ಅಂಶಗಳನ್ನ ಬಯಲು ಮಾಡಿದೆ. ಅದರಿಂದ ಲೋಕಸಂಗ್ರಾಮದ ಮತ್ತೊಂದು ಮಜಲು ಬಯಲಾಗಿದೆ. ಎಬಿಪಿ ಸುದ್ದಿ ವಾಹಿನಿ ಮತ್ತು ಸಿ- ವೋಟರ್ ಸಮೀಕ್ಷಾ ಸಂಸ್ಥೆ ನಡೆಸಿದ ಸರ್ವೆ ಪ್ರಕಾರ,ಎಲ್ಲೆಲ್ಲಿ ಏನು ಫಲಿತಾಂಶ ಬರಬಹುದು ಅನ್ನೋದನ್ನ ನೋಡೋ ಮುಂಚೆ, ನಮ್ಮ ಕರ್ನಾಟಕದಿಂದಲೇ ಕತೆ ಶುರುಮಾಡೋಣ. ಈ ಸರ್ವೆ ಪ್ರಕಾರ ಕರ್ನಾಟಕದಲ್ಲಿ(Karnataka) ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮೇಲುಗೈ ಪಡೆಯಲಿದೆ. ಜೊತೆಗೆ ಗ್ರಾರಂಟಿ ಅಸ್ತ್ರ ಪ್ರಯೋಗಿಸಿ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಿಸುವ ಕಾಂಗ್ರೆಸ್ ಪಕ್ಷ ಕೆಲವೇ ಸ್ಥಾನಗಳನ್ನ ಪಡೆಯಲಿದೆ.

ಇದನ್ನೂ ವೀಕ್ಷಿಸಿ: ಶಿವಾನಂದ ಪಾಟೀಲ್ ರೈತರಿಗೆ ಅಪಮಾನ ಮಾಡಿದ್ದು, ಕ್ಷಮೆ ಕೇಳಬೇಕು: ಬಿ.ವೈ. ವಿಜಯೇಂದ್ರ

21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more