ಕಾಂಗ್ರೆಸ್‌ಗೆ  "ಕೈ" ಬಿಜೆಪಿಗೆ "ಜೈ.." ಹೈಜಂಪ್ ಹಿಂದಿನ ಅಸಲಿಯತ್ತೇನು..?

ಕಾಂಗ್ರೆಸ್‌ಗೆ "ಕೈ" ಬಿಜೆಪಿಗೆ "ಜೈ.." ಹೈಜಂಪ್ ಹಿಂದಿನ ಅಸಲಿಯತ್ತೇನು..?

Published : Feb 20, 2024, 06:21 PM ISTUpdated : Feb 20, 2024, 06:29 PM IST

ಬಿಜೆಪಿಗೆ ನೂರಾನೆ ಬಲ ತಂದು ಕೊಟ್ಟಿತು ಮೋದಿ ನಾಯಕತ್ವ..!
ಕಾಂಗ್ರೆಸ್‌ನ ಬುಡವನ್ನೇ ಅಲುಗಾಡಿಸಿತು ಮೋದಿ ಗಜಕೇಸರಿ ಶಕ್ತಿ..!
"ಕೈ" ಬಿಟ್ಟು "ಕಮಲ" ಹಿಡಿದರು 9 ಮಾಜಿ ಮುಖ್ಯಮಂತ್ರಿಗಳು..!

2014.. ಮೇ 26.. ನರೇಂದ್ರ ಮೋದಿ(Narendra MOdi) ಮೊದಲ ಬಾರಿ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನ. ಆ ಕ್ಷಣ ದೇಶದಲ್ಲಿ ಎರಡು ಘಟನೆಗಳಿಗೆ ಮುನ್ನುಡಿ ಬರೆದಿತ್ತು. ಭಾರತದ(India) ರಾಜಕಾರಣದ ದಿಕ್ಕನ್ನೇ ಬದಲಿಸಿದ್ದ ಮಹಾ ಮುನ್ನುಡಿ, ಜಗತ್ತಿನ ಅತ್ಯಂತ ಹಳೆಯ ರಾಜಕೀಯ ಪಕ್ಷದ ಅಧಃಪತನಕ್ಕೆ ಬರೆದಿದ್ದ ಮುನ್ನುಡಿ. ಆ ಮುನ್ನುಡಿಗೆ ಕಾರಣವಾಗಿದ್ದು ರಾಷ್ಟ್ರ ರಾಜಕಾರಣಕ್ಕೆ ನರೇಂದ್ರ ದಾಮೋದರದಾಸ್ ಮೋದಿ ಅನ್ನೋ ಪವರ್'ಫುಲ್ ನಾಯಕನ ಧಾಮ್ ಧೂಮ್ ಎಂಟ್ರಿ. ರಾಜಕೀಯದಲ್ಲಿ ಪಕ್ಷಾಂತರ ಅನ್ನೋದು ಹೊಸತೇನಲ್ಲ. ರಾಜಕಾರಣಿಗಳು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯೋದು, ಪಕ್ಷನಿಷ್ಠೆ ಬದಲಿಸೋದು. ಇದಕ್ಕೆ ದೊಡ್ಡ ಚರಿತ್ರೆಯೇ ಇದೆ. ಆದ್ರೆ ಕಳೆದ 10 ವರ್ಷಗಳಲ್ಲಿ ನಡೆದಂಥಾ ಮಹಾವಲಸೆ ಮಾತ್ರ ತುಂಬಾನೇ ಇಂಟ್ರೆಸ್ಟಿಂಗ್. ಯಾಕಂದ್ರೆ 2014ರಿಂದ 2024ರವರೆಗೆ ಕಾಂಗ್ರೆಸ್'ನಿಂದ ಬಿಜೆಪಿಗೆ(BJP) ಜಿಗಿದಿರೋರು ಸಾಮಾನ್ಯರಲ್ಲ. ಒಂದೊಂದು ರಾಜ್ಯಗಳಲ್ಲಿ ಹತ್ತಾರು ವರ್ಷಗಳ ಕಾಲ ದರ್ಬಾರ್ ನಡೆಸಿರೋರು.. ಆ ರಾಜ್ಯಗಳಲ್ಲಿ ಕಾಂಗ್ರೆಸ್(Congress) ಪಕ್ಷದ ಮಹಾ ಸೇನಾನಿಗಳಾಗಿದ್ದವರು. ಅಂದ್ರೆ ಕಳೆದ 10 ವರ್ಷಗಳಲ್ಲಿ ಕಾಂಗ್ರೆಸ್'ನ 9 ಮಂದಿ ಮಾಜಿ ಮುಖ್ಯಮಂತ್ರಿಗಳು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಆ ಸಾಲಿಗೆ 10ನೆಯವರಾಗಿ ಸೇರಲು ರೆಡಿಯಾಗಿ ನಿಂತಿದ್ದಾರೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್.

ಇದನ್ನೂ ವೀಕ್ಷಿಸಿ:  Mamata Banerjee: ಹಿಂದೂ ಮಹಿಳೆಯರೇ ಈತನ ಟಾರ್ಗೆಟ್..! ರಾಜಾರೋಷವಾಗಿ ಕಿಡ್ನಾಪ್..ನಿರಂತರ ಅತ್ಯಾಚಾರ..!

39:34ಅಮಿತ್ ಶಾ ರಣತಂತ್ರ: ಬದಲಾಗಲಿದೆಯೇ ಬಲಾಬಲ? 3ನೇ 2ರಷ್ಟು ಬಹುಮತ ಪಡೆಯಲು ಹೆಜ್ಜೆ
21:15ಬೆಲೆಗೆ ಬಿದ್ದ 200 ಕೋಟಿ ರೂ ಸರ್ಕಾರಿ ಎಂಜಿನೀಯರ್, ಕೆಜಿಗಟ್ಟಲೇ ಚಿನ್ನ ಬೆಳ್ಳಿ, ಹಲವು ಭವ್ಯ ಬಂಗಲೇ ಸೀಝ್
19:50Suvarna Special: ನನ್ನವರು ಯಾರೂ ಇಲ್ಲ, ದೀದಿ ಕಟ್ಟಿದ ದಶಕದ ಕೋಟೆ ಒಂದೇ ಏಟಿಗೆ ಛಿದ್ರ
21:25ಮಧ್ಯಪ್ರಾಚ್ಯ ಯುದ್ಧ ನಡುವೆ ಭಾರತ ಟಾರ್ಗೆಟ್, ಟ್ರಂಪ್ ಎಡವಟ್ಟಿಗೆ ಮೋದಿ ಸರ್ಕಾರ ಮಾಡಿದ್ದೇನು?
24:27ನೆಹರು ದಾಖಲೆ ಮುರಿದ ಮೋದಿ ಸುದೀರ್ಘ ಆಡಳಿತ, 3 ಬಾರಿ ಜನಾದೇಶ, ಕದಲದ ಮೋದಿ ಸಿಂಹಾಸನ, ಹೇಗಿತ್ತು 4398 ದಿನಗಳ ಆಡಳಿತ?
24:09ದೀದಿ ಕೋಟೆಯಲ್ಲಿ ಮಹಾಬಿರುಕು.. ಏನು ಕಾರಣ? ಗಜಕೇಸರಿ ವ್ಯೂಹ.. ದೀದಿ ದಿಗ್ಬಂಧನ.. ಏನಿದರ ಗುಟ್ಟು?
24:26ಪ್ಲಾಸ್ಟಿಕ್ ನೋಟು... ಕರೆನ್ಸಿ ಕ್ರಾಂತಿ! ಕಾಗದದ ನೋಟುಗಳ ಆಯಸ್ಸು ಖತಂ, ಮತ್ತೆ ಡಿಮಾನಟೈಸೇಶನ್..?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
Read more