ಬ್ರಿಟಿಷ್ ಕಾಲದ 3 ಕ್ರಿಮಿನಲ್ ಕಾನೂನು ನೇಪಥ್ಯಕ್ಕೆ..! ಹೊಸ ಕಾನೂನು ವ್ಯವಸ್ಥೆಯಲ್ಲಿ ಏನೆಲ್ಲ ಬದಲಾಗಲಿದೆ..?

ಬ್ರಿಟಿಷ್ ಕಾಲದ 3 ಕ್ರಿಮಿನಲ್ ಕಾನೂನು ನೇಪಥ್ಯಕ್ಕೆ..! ಹೊಸ ಕಾನೂನು ವ್ಯವಸ್ಥೆಯಲ್ಲಿ ಏನೆಲ್ಲ ಬದಲಾಗಲಿದೆ..?

Published : Jul 02, 2024, 04:51 PM IST

ಹೊಸದಾಗಿ ಜಾರಿ ಆಯ್ತು ಜೀರೊ ಎಫ್ಐಆರ್ ಪರಿಕಲ್ಪನೆ 
ರಾಜ್ಯದಲ್ಲೂ ದಾಖಲಾಯ್ತು ಮೊದಲ ಬಿಎನ್ಎಸ್ ಪ್ರಕರಣ 
ಹಾಸನದ ರೂರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
 

ಭಾರತದ ಕಾನೂನು ವ್ಯವಸ್ಥೆಯಲ್ಲಿ ಹೊಸ ಯುಗಾರಂಭವಾಗಿದೆ. ಬ್ರಿಟಿಷರ ಕಾಲದ ಪ್ರಮುಖ ಮೂರು ಕ್ರಿಮಿನಲ್ ಲಾಗಳು ನೇಪಥ್ಯೆಕ್ಕೆ ಸರಿದಿವೆ. ಇದರ ಬದಲಾಗಿ ಭಾರತೀಯರಿಗಾಗಿ ಮೂರು ಹೊಸ ಕಾನೂನು ವ್ಯವಸ್ಥೆ ಜಾರಿಗೊಂಡಿವೆ. 2024, ಜುಲೈ 1 ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ(Indian Judicial System) ಹೊಸ ಯುಗಾರಂಭವಾದ ದಿನ. ಮೂರು ಹೊಸ ಕಾನೂನಿನಡಿಯಲ್ಲೇ ಕೇಸ್‌ಗಳು ದಾಖಲಾಗಲಿವೆ. ಐಪಿಸಿ, ಅಂದ್ರೆ ಇಂಡಿಯನ್ ಪೀನಲ್ ಕೋಡ್ ಜಾರಿಯಲ್ಲಿರುವುದಿಲ್ಲ. ಇದರ ಜೊತೆ ಇನ್ನೂ ಎರಡು ಪ್ರಮುಖ ಕ್ರಿಮಿನಲ್ ಲಾ ಗಳಾದ ಕೋಡ್ ಆಫ್ ಕ್ರಿಮಿನಲ್ ಪ್ರೊಸಿಜರ್ (Code of Criminal Procedure) ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್(Indian Evidence Act), ಪ್ರಮುಖ ಬದಲಾದ ಮೂರು ಕಾನೂನುಗಳು ಇರಲಿವೆ. ಜುಲೈ 1 ರಿಂದ ದೇಶದಲ್ಲಿ ದಾಖಲಾಗುವ ಕೇಸ್‌ಗಳೆಲ್ಲ ಐಪಿಸಿ ಬದಲಿಗೆ ಬಿಎನ್‌ಎಸ್‌ನ (BNS) ಅಡಿಯಲ್ಲಿ ದಾಖಲಾಗುತ್ತವೆ. ಅಂದ್ರೆ ಭಾರತೀಯ ದಂಡ ಸಂಹಿತೆ ಬದಲಿಗೆ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಕೇಸ್‌ಗಳು ದಾಖಲಾಗಲಿವೆ. ಭಾರತೀಯ ದಂಡ ಸಂಹಿತೆ ದೇಶದಲ್ಲಿ ಸ್ವತಂತ್ರ ಪೂರ್ವದಲ್ಲಿ ಜಾರಿಗೆ ಬಂದ ಕಾನೂನಿದು. ಅಂದ್ರೆ ದೇಶ ಬ್ರಿಟಿಷರ ಕೈಯಲ್ಲಿದ್ದಾಗ ಬ್ರಿಟಿಷರು 1860ರಲ್ಲಿ ಭಾರತೀಯ ದಂಡ ಸಂಹಿತೆಯನ್ನು ಜಾರಿಗೆ ತರುತ್ತಾರೆ. ಅಂದು ಬ್ರಿಟಿಷರಿಗೆ ಭಾರತೀಯರನ್ನು ದಂಡಿಸುವುದೇ ಪ್ರಮುಖ ಉದ್ದೇಶವಾಗಿತ್ತು. ಹೀಗಾಗಿ ಈ ಐಪಿಸಿನಲ್ಲಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಲುವ ಬದಲು ಆರೋಪಿಗಳಿಗೆ ಶಿಕ್ಷೆ ಕೊಡಿಸುವುದರಲ್ಲೇ ಈ ಕಾನೂನು ಹೆಚ್ಚು ಒತ್ತು ಕೊಡುತ್ತಿತ್ತು. ಜೊತೆಗೆ ಇದು 164 ವರ್ಷಗಳ ಅತ್ಯಂತ ಹಳೇಯ ಕಾನೂನಾಗಿತ್ತು. ಹೀಗಾಗಿ ಈ ಹಳೇಯ ಕಾನೂನನ್ನು ಇಂದಿನ ದಿನಮಾನಗಳಿಗೆ ತಕ್ಕನಾಗಿ ಬದಲಾಯಿಸಲಾಗಿದೆ. ಭಾರತೀಯರಿಗಾಗಿ ಭಾರತೀಯರೇ ಈಗ ಹೊಸ ಕಾನೂನು ಜಾರಿಗೊಳಿಸಿದ್ದಾರೆ. ಕೇವಲ ಶಿಕ್ಷೆಗೆ ಒತ್ತುಕೊಡುತ್ತಿದ್ದ ಐಪಿಸಿ ಬದಲಿಗೆ ನ್ಯಾಯ ಕೊಡಿಸಲು ಹೆಚ್ಚು ಒತ್ತು ಕೊಡುವ ಭಾರತೀಯ ನ್ಯಾಯ ಸಂಹಿತೆ ಜಾರಿಗೊಂಡಿದೆ. 

ಇದನ್ನೂ ವೀಕ್ಷಿಸಿ:  ಮತ್ತಷ್ಟು ಸಾಮ್ರಾಜ್ಯ ವಿಸ್ತರಣೆಗೆ ಮುಂದಾದ ಸತೀಶ್ ಜಾರಕಿಹೊಳಿ: ಪುತ್ರನನ್ನು ರಾಜಕೀಯಕ್ಕೆ ಕರೆತರಲು ಪ್ರಯತ್ನ

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!