ಬ್ರಿಟಿಷ್ ಕಾಲದ 3 ಕ್ರಿಮಿನಲ್ ಕಾನೂನು ನೇಪಥ್ಯಕ್ಕೆ..! ಹೊಸ ಕಾನೂನು ವ್ಯವಸ್ಥೆಯಲ್ಲಿ ಏನೆಲ್ಲ ಬದಲಾಗಲಿದೆ..?

ಬ್ರಿಟಿಷ್ ಕಾಲದ 3 ಕ್ರಿಮಿನಲ್ ಕಾನೂನು ನೇಪಥ್ಯಕ್ಕೆ..! ಹೊಸ ಕಾನೂನು ವ್ಯವಸ್ಥೆಯಲ್ಲಿ ಏನೆಲ್ಲ ಬದಲಾಗಲಿದೆ..?

Published : Jul 02, 2024, 04:51 PM IST

ಹೊಸದಾಗಿ ಜಾರಿ ಆಯ್ತು ಜೀರೊ ಎಫ್ಐಆರ್ ಪರಿಕಲ್ಪನೆ 
ರಾಜ್ಯದಲ್ಲೂ ದಾಖಲಾಯ್ತು ಮೊದಲ ಬಿಎನ್ಎಸ್ ಪ್ರಕರಣ 
ಹಾಸನದ ರೂರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
 

ಭಾರತದ ಕಾನೂನು ವ್ಯವಸ್ಥೆಯಲ್ಲಿ ಹೊಸ ಯುಗಾರಂಭವಾಗಿದೆ. ಬ್ರಿಟಿಷರ ಕಾಲದ ಪ್ರಮುಖ ಮೂರು ಕ್ರಿಮಿನಲ್ ಲಾಗಳು ನೇಪಥ್ಯೆಕ್ಕೆ ಸರಿದಿವೆ. ಇದರ ಬದಲಾಗಿ ಭಾರತೀಯರಿಗಾಗಿ ಮೂರು ಹೊಸ ಕಾನೂನು ವ್ಯವಸ್ಥೆ ಜಾರಿಗೊಂಡಿವೆ. 2024, ಜುಲೈ 1 ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ(Indian Judicial System) ಹೊಸ ಯುಗಾರಂಭವಾದ ದಿನ. ಮೂರು ಹೊಸ ಕಾನೂನಿನಡಿಯಲ್ಲೇ ಕೇಸ್‌ಗಳು ದಾಖಲಾಗಲಿವೆ. ಐಪಿಸಿ, ಅಂದ್ರೆ ಇಂಡಿಯನ್ ಪೀನಲ್ ಕೋಡ್ ಜಾರಿಯಲ್ಲಿರುವುದಿಲ್ಲ. ಇದರ ಜೊತೆ ಇನ್ನೂ ಎರಡು ಪ್ರಮುಖ ಕ್ರಿಮಿನಲ್ ಲಾ ಗಳಾದ ಕೋಡ್ ಆಫ್ ಕ್ರಿಮಿನಲ್ ಪ್ರೊಸಿಜರ್ (Code of Criminal Procedure) ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್(Indian Evidence Act), ಪ್ರಮುಖ ಬದಲಾದ ಮೂರು ಕಾನೂನುಗಳು ಇರಲಿವೆ. ಜುಲೈ 1 ರಿಂದ ದೇಶದಲ್ಲಿ ದಾಖಲಾಗುವ ಕೇಸ್‌ಗಳೆಲ್ಲ ಐಪಿಸಿ ಬದಲಿಗೆ ಬಿಎನ್‌ಎಸ್‌ನ (BNS) ಅಡಿಯಲ್ಲಿ ದಾಖಲಾಗುತ್ತವೆ. ಅಂದ್ರೆ ಭಾರತೀಯ ದಂಡ ಸಂಹಿತೆ ಬದಲಿಗೆ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಕೇಸ್‌ಗಳು ದಾಖಲಾಗಲಿವೆ. ಭಾರತೀಯ ದಂಡ ಸಂಹಿತೆ ದೇಶದಲ್ಲಿ ಸ್ವತಂತ್ರ ಪೂರ್ವದಲ್ಲಿ ಜಾರಿಗೆ ಬಂದ ಕಾನೂನಿದು. ಅಂದ್ರೆ ದೇಶ ಬ್ರಿಟಿಷರ ಕೈಯಲ್ಲಿದ್ದಾಗ ಬ್ರಿಟಿಷರು 1860ರಲ್ಲಿ ಭಾರತೀಯ ದಂಡ ಸಂಹಿತೆಯನ್ನು ಜಾರಿಗೆ ತರುತ್ತಾರೆ. ಅಂದು ಬ್ರಿಟಿಷರಿಗೆ ಭಾರತೀಯರನ್ನು ದಂಡಿಸುವುದೇ ಪ್ರಮುಖ ಉದ್ದೇಶವಾಗಿತ್ತು. ಹೀಗಾಗಿ ಈ ಐಪಿಸಿನಲ್ಲಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಲುವ ಬದಲು ಆರೋಪಿಗಳಿಗೆ ಶಿಕ್ಷೆ ಕೊಡಿಸುವುದರಲ್ಲೇ ಈ ಕಾನೂನು ಹೆಚ್ಚು ಒತ್ತು ಕೊಡುತ್ತಿತ್ತು. ಜೊತೆಗೆ ಇದು 164 ವರ್ಷಗಳ ಅತ್ಯಂತ ಹಳೇಯ ಕಾನೂನಾಗಿತ್ತು. ಹೀಗಾಗಿ ಈ ಹಳೇಯ ಕಾನೂನನ್ನು ಇಂದಿನ ದಿನಮಾನಗಳಿಗೆ ತಕ್ಕನಾಗಿ ಬದಲಾಯಿಸಲಾಗಿದೆ. ಭಾರತೀಯರಿಗಾಗಿ ಭಾರತೀಯರೇ ಈಗ ಹೊಸ ಕಾನೂನು ಜಾರಿಗೊಳಿಸಿದ್ದಾರೆ. ಕೇವಲ ಶಿಕ್ಷೆಗೆ ಒತ್ತುಕೊಡುತ್ತಿದ್ದ ಐಪಿಸಿ ಬದಲಿಗೆ ನ್ಯಾಯ ಕೊಡಿಸಲು ಹೆಚ್ಚು ಒತ್ತು ಕೊಡುವ ಭಾರತೀಯ ನ್ಯಾಯ ಸಂಹಿತೆ ಜಾರಿಗೊಂಡಿದೆ. 

ಇದನ್ನೂ ವೀಕ್ಷಿಸಿ:  ಮತ್ತಷ್ಟು ಸಾಮ್ರಾಜ್ಯ ವಿಸ್ತರಣೆಗೆ ಮುಂದಾದ ಸತೀಶ್ ಜಾರಕಿಹೊಳಿ: ಪುತ್ರನನ್ನು ರಾಜಕೀಯಕ್ಕೆ ಕರೆತರಲು ಪ್ರಯತ್ನ

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?