ರಾಮ ಮರಳಿ ಅಯೋಧ್ಯೆಗೆ ಬಂದ ದಿನವೇ ದೀಪಾವಳಿ! ರಾಜಕಾರಣದ ಮೇಲೂ ಪ್ರಭಾವ ಬೀರಲಿದೆ ರಾಮಮಂದಿರ!

ರಾಮ ಮರಳಿ ಅಯೋಧ್ಯೆಗೆ ಬಂದ ದಿನವೇ ದೀಪಾವಳಿ! ರಾಜಕಾರಣದ ಮೇಲೂ ಪ್ರಭಾವ ಬೀರಲಿದೆ ರಾಮಮಂದಿರ!

Published : Nov 14, 2023, 02:34 PM IST

ಗಿನ್ನಿಸ್ ದಾಖಲೆ ಬರೆಯಿತು ರಾಮಜನ್ಮಭೂಮಿಯ ವೈಭವ!
ಮುಂದಿನ ಸಂಕ್ರಾಂತಿಗೆ ಬರಲಿದೆ ಮತ್ತೊಂದು ದೀಪಾವಳಿ..!
ರಾಜಕಾರಣದ ಮೇಲೂ ಪ್ರಭಾವ ಬೀರಲಿದೆ ರಾಮಮಂದಿರ!

ದಾಖಲೆಯ ದೀಪಾವಳಿಯಿಂದ ಝಗಮಗ ಅಂತ ವಿಜೃಂಭಿಸ್ತಾ ಇದೆ ರಾಮಜನ್ಮಭೂಮಿ (Ramjanmabhoomi). ದೀಪಾವಳಿ(Deepavali).. ದೀಪಗಳ ಹಬ್ಬ. ಬರೀ ದೀಪಗಳನ್ನ ಬೆಳಗೋ ಹಬ್ಬವಲ್ಲ. ಬದುಕನ್ನೂ ಬೆಳಗೋ ಹಬ್ಬ. ಅಂಧಕಾರವನ್ನ ತೊಲಗಿಸಿ, ಜ್ಞಾನದ ಬೆಳಕು ಬೆಳಗಬೇಕು ಅನ್ನೋ ಪ್ರತೀಕದ ಹಬ್ಬ. ಇಡೀ ದೇಶವೇ ಸಂಭ್ರಮ ಸಡಗರದಿಂದ ಆಚರಿಸೋ ಮಹತ್ವದ ಹಬ್ಬ. ದೀಪಾವಳಿನಾ ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ಕಾರಣಕ್ಕೆ ಅದ್ದೂರಿಯಾಗಿ ಆಚರಿಸ್ತಾರ. ಕೆಲವು ಕಡೆ, ಲಕ್ಷ್ಮಿ ದೇವಿ ಹಾಲ್ಗಡಲಿನಿಂದ ಜನಿಸಿ ಬಂದಳು ಅಂತ.. ಕೆಲವು ಕಡೆ, ಕೃಷ್ಣ ನರಕಾಸುರನ ವಧೆ ಮಾಡಿದ ಅಂತ. ಮತ್ತೆ ಕೆಲವೆಡೆ ಬಲೀಂದ್ರನ ವಾಮನ ತುಳಿದ ಅಂತ, ಹೀಗೆ ಹಲವು ದೈವೀಕಾರಣಗಳಿಂದ ದೀಪಾವಳಿ ಆಚರಣೆ ಮಾಡ್ತಾರೆ. ಆದ್ರೆ ಅದರ ಜೊತೆಗೆ ಮತ್ತೂ ಒಂದು ಪ್ರಮುಖ ಕಾರಣ ಇದೆ.  ವರ್ಷ, 22 ಲಕ್ಷದ 23 ಸಾವಿರಕ್ಕೂ ಅಧಿಕ ದೀಪಗಳನ್ನ ಬೆಳಗಿದ್ದಾರೆ.. ಅಯೋಧ್ಯೆಗೆ(Ayodhya) ಅಯೋಧ್ಯೆಯೇ ಒಂದು ನಕ್ಷತ್ರದ ಹಾಗೆ ಮಿನುಗಿದೆ.. ಈ ಬಾರಿಯ ದೀಪೋತ್ಸವ, ಗಿನ್ನಿಸ್ ರೆಕಾರ್ಡ್ ಆಗಿಬಿಟ್ಟಿದೆ. 2017ರಿಂದಲೂ ಸರಯೂ ನದಿ ತೀರದಲ್ಲಿ ಅದ್ದೂರಿ ದೀಪೋತ್ಸವ ಕಾರ್ಯಕ್ರಮ ನಡೆಸೋದು ಒಂದು ಪದ್ಧತಿಯಾಗಿ ನಡೆದುಬಂದಿದೆ.. ದೀಪಾವಳಿ ಅಂದ್ರೆ ಪಟಾಕಿ ಅಲ್ಲ, ದೀಪೋತ್ಸವ ಅನ್ನೋ ವಾತಾವರಣ ನಿರ್ಮಾಣವಾಗಿದೆ.. ಆದ್ರೆ, ಇವತ್ತು ನಾವು ಗಮನಿಸಬೇಕಾದ ಅಸಲಿ ಕತೆ ಇರೋದು ಈ ದೀಪೋತ್ಸವದ ಬಗ್ಗೆ ಅಲ್ಲ,.. ರಾಮಮಂದಿರದ ಕಡೆ.

ಇದನ್ನೂ ವೀಕ್ಷಿಸಿ:  ಒಂದಲ್ಲ ಎರಡಲ್ಲ..ಅಲ್ಲಿ ಬಿದ್ದಿದ್ದು 4 ಹೆಣಗಳು: ದೀಪಾವಳಿ ದಿನ ರಕ್ತದೋಕುಳಿ ಆಡಿದ್ದ ಹಂತಕ..!

21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more