India@75: ಸಂಸತ್‌ನಲ್ಲಿ ಬಾಂಬ್‌ ಸಿಡಿಸಿ ಬ್ರಿಟಷರ ನಿದ್ದೆಗಡಿಸಿದ್ದ ತರುಣ ಬಟುಕೇಶ್ವರ್ ದತ್

Jul 24, 2022, 3:37 PM IST

ಏಪ್ರಿಲ್ 08, 1929 ದೆಹಲಿಯ ಸಂಸತ್ ಭವನ, ಆಗ ವಿಠಲ್ ಭಾಯ್ ಪಟೇಲ್ ಸ್ಪೀಕರ್ ಆಗಿದ್ರು. ಸದನದಲ್ಲಿ ಸ್ಪೀಕರ್ ಎದ್ದು ನಿಂತು ಸಾರ್ವಜನಿಕ ಸುರಕ್ಷೆ ಬಗ್ಗೆ ಮಾತನಾಡುತ್ತಿದ್ದಾಗ ಬಾಂಬ್ ಸ್ಫೋಟವಾಗುತ್ತದೆ. ಇಬ್ಬರು ಬ್ರಿಟಿಷ್ ಅಧಿಕಾರಿಗಳು ಗಾಯಗೊಂಡು ಕೆಳಗೆ ಬೀಳುತ್ತಾರೆ. ಈ ಗೊಂದಲ, ಗಲಿಬಿಲಿ ನಡುವೆ ಬಾಂಬ್ ಹಾಕಿದ ಇಬ್ಬರು ತರುಣರು ಪ್ರೇಕ್ಷಕರ ಗ್ಯಾಲರಿಯಿಂದ ಎದ್ದು ನಿಲ್ಲುತ್ತಾರೆ. ಇಂಕ್ವಿಲಾಬ್ ಜಿಂದಾಬಾದ್ ಎಂದು ಕೂಗುತ್ತಾರೆ. ಆ ಯುವಕರೇ ಭಗತ್ ಸಿಂಗ್ ಹಾಗೂ ಬಟುಕೇಶ್ವರ್ ದತ್. ಕೆಲ ತಿಂಗಳ ಹಿಂದೆ ಕ್ರಾಂತಿ ಸೇನಾನಿ ಲಾಲಾ ಲಜಪತ್‌ರಾಯ್ ಪೊಲಿಸರ ಚಿತ್ರಹಿಂಸೆಯಿಂದ ನರಳಿ ಪ್ರಾಣಬಿಟ್ಟಿದ್ದರು. ಅವರ ಸಾವಿನ ಪ್ರತಿಕಾರವಾಗಿ ಭಗತ್ ಸಿಂಗ್, ಬಟುಕೇಶ್ವರ್ ದತ್ ಸಂಸತ್ ಭವನಕ್ಕೆ ಬಾಂಬ್ ಹಾಕುತ್ತಾರೆ. 

India@75:ಪೋರ್ಚುಗೀಸರನ್ನು ಮಟ್ಟ ಹಾಕಿದ ಮಲಯಾಳಿಗಳ ಸಾಹಸಗಾಥೆ!