Aug 5, 2022, 3:49 PM IST
18 ನೇ ವಯಸ್ಸಿನಲ್ಲಿ ರಾಜಪ್ರಭುತ್ವದ ವಿರುದ್ಧ ಲೇಖನ ಬರೆದ, 19 ನೇ ಶತಮಾನದ ಪ್ರಮುಖ ಸಂಪಾದಕ, ಗಾಂಧೀಜಿಯ ಆಪ್ತ ಇವರೇ ಬ್ಯಾರಿಸ್ಟರ್ ಜಿ ಪಿ ಪಿಳ್ಳೈ. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ತಿರುವಂಕೂರು ರಾಜಪ್ರಭುತ್ವದ ವಿರುದ್ಧ ಲೇಖನ ಬರೆಯುತ್ತಾರೆ. ಸಹಜವಾಗಿ ಇದು ರಾಮಯ್ಯಂಗಾರ್ನ ಕೆರಳಿಸುತ್ತದೆ. ಕಾಲೆಜಿನಿಂದ ಹೊರ ಹಾಕುತ್ತಾರೆ. ಅಲ್ಲಿಂದ ಚೆನ್ನೈಗೆ ಹೋದ ಪಿಳ್ಳೈ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮದ್ರಾಸ್ ರೆಸಿಡೆನ್ಸಿ ಕಾಲೇಜು ಸೇರುತ್ತಾರೆ. ದಕ್ಷಿಣ ಭಾರತದ ಮೊದಲ ಇಂಗ್ಲೀಷ್ ಪತ್ರಿಕೆ ಮದ್ರಾಸ್ ಸ್ಟಾಂಡರ್ಡ್ಗೆ ಸಂಪಾದಕರಾಗುತ್ತಾರೆ. ಮುಂದೆ ಪ್ರಜಾಪ್ರಭುತ್ವ ಚಳವಳಿಯ ಪಿತಾಮಹ ಎನಿಸಿಕೊಳ್ಳುತ್ತಾರೆ.