India@75:  18ರ ಹರೆಯದ ಖುದಿರಾಮ್ ಬೋಸ್, ನಗುತ್ತಲೇ ಗಲ್ಲಿಗೇರಿದ ಕಿರಿಯ ಸ್ವಾತಂತ್ರ್ಯ ಸೇನಾನಿ!

India@75: 18ರ ಹರೆಯದ ಖುದಿರಾಮ್ ಬೋಸ್, ನಗುತ್ತಲೇ ಗಲ್ಲಿಗೇರಿದ ಕಿರಿಯ ಸ್ವಾತಂತ್ರ್ಯ ಸೇನಾನಿ!

Published : Jun 08, 2022, 09:32 PM ISTUpdated : Jun 14, 2022, 09:33 PM IST

ಬಂಗಾಳದಲ್ಲಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಆ 18ರ ಹರೆಯದ ಯುವಕನ ಹೋರಾಟದ ಕಥೆ ಇದು. ಗಲ್ಲಿಗೇರಿಸುವಾಗಲು ನಗನಗುತ್ತಲೇ ಕೊರಳೊಡ್ಡಿದ ಖುದಿರಾಮ್‌ ಬೋಸ್‌ ಬಗ್ಗೆ ಒಂದಿಷ್ಟು ಮಾಹಿತಿ..
 

ಬೆಂಗಳೂರು (ಜೂನ್ 8): ಭಾರತ ಈ ಬಾರಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು (Azaadi Ki Amrith Mahothsav ) ಆಚರಣೆ ಮಾಡಲಿದೆ. ಭಾರತಕ್ಕೆ ಸ್ವಾತಂತ್ರ್ಯ ಕೊಡಿಸುವ ನಿಟ್ಟಿನಲ್ಲಿ ಸಾಕಷ್ಟು ವೀರರು ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ. ಅವರಲ್ಲಿ ಒಬ್ಬರು 18 ವರ್ಷದ ಖುದಿರಾಮ್ ಬೋಸ್ ( Khudiram Bose). ನಗುಮುಖದಲ್ಲಿಯೇ ನೇಣುಗಂಬಕ್ಕೆ (gallows) ಕೊರಳೊಡ್ಡಿದ ಧೀರ ಸ್ವಾತಂತ್ರ್ಯ ಹೋರಾಟಗಾರ (freedom fighter).

ಬಂಗಾಳ ವಿಭಜನೆಯಾದ ನಂತರ ಪ್ರಮುಖವಾಗಿ ಕಾಣಿಸಿಕೊಂಡ ಕ್ರಾಂತಿಕಾರಿಗಳ ಪೈಕಿ ಖುದಿರಾಮ್ ಬೋಸ್ ಕೂಡ ಒಬ್ಬರು. ಮೇದಿನಿಪುರದ ತಹಸೀಲ್ಡಾರ ತ್ರೈಲೋಕ್ಯನಾಥ ಹಾಗೂ ಲಕ್ಷ್ಮೀದೇವಿಯವರ ಒಬ್ಬನೇ ಮಗ. ಇಬ್ಬರು ಗಂಡುಮಕ್ಕಳ ಸಾವು, ನಂತರದ ಮೂರು ಹೆಣ್ಣೆಮಕ್ಕಳ ಬಳಿಕ ಹುಟ್ಟಿದವರು ಖುದಿರಾಮ್ ಬೋಸ್. ಖುದಿರಾಮ್ ಅವರ ರಕ್ಷಣೆಗಗಾಗಿ ತಾಯಿ ಲಕ್ಷ್ಮೀ ದೇವಿ ಪ್ರತಿ ದಿನ ಪೂನೆ ಪುನಸ್ಕಾರಗಳನ್ನು ಮಾಡುತ್ತಿದ್ದರು. ಆದರೆ, ದುರಂತ ಏನೆಂದರೆ, ಖುದಿರಾಮ್ ಬಾಲಕನಾಗಿದ್ದಾಗಲೇ ಅಪ್ಪ-ಅಮ್ಮ ಇಬ್ಬರೂ ಸಾವಿಗೀಡಾದರು.

India@75: ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯ ತಾಣ ಮೈಸೂರಿನ ಸುಬ್ಬರಾಯನ ಕೆರೆ

ಅಕ್ಕನ ಆರೈಕೆಯಲ್ಲಿ ಬೆಳೆದ ಖುದಿರಾಮ್ ಬೋಸ್, ಆ ಸಮಯದಲ್ಲಿ ಬಂಗಾಳದಲ್ಲಿ ನಡೆಯುತ್ತಿದ್ದ ಕ್ರಾಂತಿಕಾರಿ ಚಟುವಟಿಕೆಗಳ ಬಗ್ಗೆ ಆಕರ್ಷಿತನಾಗಿದ್ದರು. ಅರಬಿಂದೋ ಘೋಷ್ ಹಾಗೂ ಸಿಸ್ಟರ್ ನಿವೇದಿತಾ ಅವರ ಭಾಷಣಗಳು ಖುದಿರಾಮ್ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದವು. ಬ್ರಿಟಿಷರನ್ನೂ ಶಕ್ತಿಯಿಂದಲೇ ಹೊರಹಾಕಬೇಕು ಎಂದು ಬಯಸಿದ್ದ ಅನುಶೀಲನ್ ಸಮಿತಿಗೆ ಖುದಿರಾಮ್ ಬೋಸ್ ಸದಸ್ಯರೂ ಆಗಿದ್ದರು.

17:44ಭಾರತದ ರಕ್ಷಣಾ ಸಾಮರ್ಥ್ಯ: ಡ್ರೋನ್‌ಗಳಿಂದ ಸ್ವದೇಶಿ ಶಸ್ತ್ರಾಸ್ತ್ರಗಳವರೆಗೆ ಜಯರಾಂ ಮಾಹಿತಿ
01:13ಮದ್ವೆಗೆ ಟಿ-ಶರ್ಟ್‌ನಲ್ಲಿ ಬಂದ ಬಾಬಿ ಡಿಯೋಲ್‌; ಏನಾಗಿದೆ ನಿನಗೆ ಎಂದು ಕಾಲೆಳೆದ ನೆಟ್ಟಿಗರು
20:46ಭೌತ ವಿಜ್ಞಾನಿಯ ಕನಸಿನ ಕೂಸು ರಾಮನ್ ಸಂಶೋಧನಾ ಸಂಸ್ಥೆಗೆ ಅಮೃತ ಮಹೋತ್ಸವ ಯಾತ್ರೆ
03:01India@75: ಕೊಳಲಲ್ಲಿ ದಿಲ್ ದಿಯಾ ಹೈ ಜಾನ್ ಭಿ ದೇಂಗೆ ನುಡಿಸಿದ ಐಟಿಬಿಪಿಯ ಕಾನ್‌ಸ್ಟೇಬಲ್‌
05:19Mangaluru; 900 ಕೆ.ಜಿ ಧಾನ್ಯಗಳಲ್ಲಿ ಮೂಡಿಬಂದ ತ್ರಿವರ್ಣ ಧ್ವಜ
05:53India@75: ಚಿಕ್ಕಬಳ್ಳಾಪುರದಲ್ಲಿ ತ್ರಿವರ್ಣ ನಡಿಗೆಗೆ ಡಾ. ಸುಧಾಕರ್ ಚಾಲನೆ
05:56India@75:ಭಾರತದ ಸಮಾಜ ಸುಧಾರಣೆಯ ಪಿತಾಮಹ ಮಹಾತ್ಮ ಜ್ಯೋತಿಬಾ ಪುಲೆ ಜೀವನಗಾಥೆ
21:23ಅಮೃತ ಮಹೋತ್ಸವಕ್ಕೆ ಹರ್ ಘರ್ ತಿರಂಗ ಅಭಿಯಾನ, ಮನೆ ಮನೆಗೂ ತ್ರಿವರ್ಣ!
05:44India@75: ಕೇರಳದ ಭಗತ್‌ಸಿಂಗ್ ವಕ್ಕಂ ಮೊಹಮ್ಮದ್ ಅಬ್ದುಲ್ ಖಾದರ್ ಹೋರಾಟದ ಕತೆ
04:12India@75: 3 ನೇ ದಿನಕ್ಕೆ ಕಾಲಿಟ್ಟ ವಿಜಯಪುರ ಯುವಜನ ಸಂಕಲ್ಪ ನಡಿಗೆ