ಮಕ್ಕಳಿಗೆ ಓದುವುದೇ ಕಷ್ಟವೇಕೆ? ಎಷ್ಟು ಓದಿದರೂ ತಲೆಗೆ ಹತ್ತೋಲ್ಲ ಯಾಕೆ? ಜಾತಕದಲ್ಲಿ ವಿದ್ಯಾ ಸ್ಥಾನ ಬುದ್ಧಿ ಸ್ಥಾನ ಯಾವುದು, ಎಲ್ಲವನ್ನೂ ಶ್ರೀಕಂಠ ಶಾಸ್ತ್ರಿಗಳು ವಿವರಿಸುತ್ತಾರೆ.
ಹಣಕ್ಕಿಂತ ಹೆಚ್ಚಿನದು ವಿದ್ಯೆ. ವಿದ್ಯೆಯು ಬುದ್ಧಿ, ವಿವೇಕವನ್ನು ಕರುಣಿಸುತ್ತದೆ. ಹಾಗಾಗಿ, ಎಲ್ಲ ಪೋಷಕರಿಗೂ ತಮ್ಮ ಮಕ್ಕಳಿಗೆ
ಆದರೆ, ಬಹಳಷ್ಟು ಮಕ್ಕಳ ಸಮಸ್ಯೆ ಎಂದರೆ ಅವರು ಹಗಲೂ ರಾತ್ರಿ ಓದಿದರೂ ಜ್ಞಾನ ಫಲ ಸಿಗುವುದಿಲ್ಲ. ಮತ್ತೆ ಕೆಲವರಿಗೆ ಓದಿದ್ದು ಮರೆತು ಹೋಗುತ್ತದೆ, ಮತ್ತೆ ಕೆಲ ಮಕ್ಕಳಿಗೆ ಸರಿಯಾಗಿ ಅರ್ಥವಾಗುವುದಿಲ್ಲ. ಇನ್ನು ಕೆಲ ಮಕ್ಕಳಿಗೆ ಓದುವುದು, ಬರೆಯುವುದು, ಕಲಿಕೆ ಎಂದರೇ ಅಲರ್ಜಿ. ವಿದ್ಯೆಯ ಈ ಸಮಸ್ಯೆಗೆ ಜ್ಯೋತಿಷ್ಯದಲ್ಲಿ ಏನು ಪರಿಹಾರವಿದೆ?
ಮನೆಯಿಂದ ದರಿದ್ರಲಕ್ಷ್ಮೀ ಓಡಿಸಲು ಹೀಗೆ ಮಾಡಿ ಅಂತಾರೆ ಬ್ರಹ್ಮಾಂಡ ಗುರೂಜಿ
ಪ್ರತಿಯೊಬ್ಬರೂ ತಿಳಿಯಬೇಕಾದ ವಿದ್ಯಾ ವಿಚಾರವೆಂದರೆ ಜಾತಕದ ಐದನೇ ಮನೆಯಲ್ಲಿ ಶುಭಗ್ರಹವಿರಬೇಕು. ಪಂಚಮ ಸ್ಥಾನದಲ್ಲಿ ಮನೆಯಲ್ಲಿ ಗುರುವಿದ್ದರೆ ವಿದ್ಯಾ ಬುದ್ಧಿ ಚೆನ್ನಾಗಿರುತ್ತದೆ. ಪಂಚಮ ಸ್ಥಾನದಲ್ಲಿ ಗುರು, ಶುಕ್ರ ಅಥವಾ ಬುಧ ಇದ್ದಾಗ ವಿದ್ಯೆ, ಜ್ಞಾನ ಅಸಾಧಾರಣವಾಗಿರುತ್ತದೆ. ವಿದ್ಯೆ ಹತ್ತದವರು ಏನು ಮಾಡಬೇಕು, ಯಾವ ಮಂತ್ರ ಪಠಿಸಬೇಕು, ಯಾರನ್ನು ಆರಾಧಿಸಬೇಕು ಎಲ್ಲ ವಿವರಗಳನ್ನು ಜ್ಯೋತಿಷಿಗಳಾದ ಶ್ರೀಕಂಠ ಶಾಸ್ತ್ರಿಗಳು ವಿವರಿಸುತ್ತಾರೆ.