Chitradurga: ದೇವರ ಎತ್ತುಗಳಿಗೆ ಮೆರವಣಿಗೆ, ವಿಶೇಷ ಪೂಜೆ, ಮ್ಯಾಸ ಬೇಡರಿಂದ ವಿಶೇಷ ಜಾತ್ರೆ

Chitradurga: ದೇವರ ಎತ್ತುಗಳಿಗೆ ಮೆರವಣಿಗೆ, ವಿಶೇಷ ಪೂಜೆ, ಮ್ಯಾಸ ಬೇಡರಿಂದ ವಿಶೇಷ ಜಾತ್ರೆ

Published : Jan 10, 2022, 04:57 PM ISTUpdated : Jan 10, 2022, 05:32 PM IST

ಜಾತ್ರೆಗಳ (Fest) ಸಂದರ್ಭದಲ್ಲಿ ದೇವರುಗಳ‌ ಮೆರವಣಿಗೆ, ಪೂಜಾ ಕೈಂಕರ್ಯಗಳು ಇರುವುದು ಸಹಜ. ಆದ್ರೆ ಈ ಭಾಗದ ಜನರು ತಮ್ಮ ಸಮುದಾಯದ ಸಂಪ್ರದಾಯ ಉಳುವಿಗಾಗಿ ದೇವರ ಎತ್ತುಗಳನ್ನು ಮೆರವಣಿಗೆ ಮಾಡಿ ಅವುಗಳಿಗೆ ಪೂಜೆ ಸಲ್ಲಿಸುವ ಮೂಲಕ ವಿಭಿನ್ನವಾಗಿ ಜಾತ್ರೆ ಮಾಡ್ತಾರೆ. 

ಚಿತ್ರದುರ್ಗ (ಜ. 10): ಜಾತ್ರೆಗಳ (Fest) ಸಂದರ್ಭದಲ್ಲಿ ದೇವರುಗಳ‌ ಮೆರವಣಿಗೆ, ಪೂಜಾ ಕೈಂಕರ್ಯಗಳು ಇರುವುದು ಸಹಜ. ಆದ್ರೆ ಈ ಭಾಗದ ಜನರು ತಮ್ಮ ಸಮುದಾಯದ ಸಂಪ್ರದಾಯ ಉಳುವಿಗಾಗಿ ದೇವರ ಎತ್ತುಗಳನ್ನು ಮೆರವಣಿಗೆ ಮಾಡಿ ಅವುಗಳಿಗೆ ಪೂಜೆ ಸಲ್ಲಿಸುವ ಮೂಲಕ ವಿಭಿನ್ನವಾಗಿ ಜಾತ್ರೆ ಮಾಡ್ತಾರೆ. 

ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಬಂಗಾರದೇವರಹಟ್ಟಿ ಗ್ರಾಮ ಹಾಗೂ ಮೊಳಕಾಲ್ಮೂರು ಭಾಗದ ಮ್ಯಾಸ ಬೇಡರು ವರ್ಷಕ್ಕೆ ಒಂದು ಬಾರಿ ವಿಶೇಷವಾಗಿ ಆಚರಿಸುವ ಜಾತ್ರೆ ಇದಾಗಿದೆ. ಬಂಗಾರದೇವರ ಸನ್ನಿಧಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿಜೃಂಭಣೆಯಿಂದ ಜಾತ್ರೆ ಆಚರಿಸುತ್ತಾರೆ. ಇತ್ತೀಚೆಗೆ ನಮ್ಮ ಮ್ಯಾಸ ಬೇಡರ ಸಂಪ್ರದಾಯ ನಶಿಸಿ ಹೋಗ್ತಿದೆ. ಅಂತದ್ರಲ್ಲಿ ನಮ್ಮ ಸಮುದಾಯದವರು ಕೆಲವು ಕಡೆ ಈ ರೀತಿಯ ಹಬ್ಬ ಆಚರಣೆಗಳನ್ನು ಮಾಡೋದ್ರಿಂದ ನಮ್ಮ ಮ್ಯಾಸ ನಾಯಕರ ಸಂಪ್ರದಾಯ ಉಳಿಯಲಿದೆ.

ನಮ್ಮ ಭಾಗದಲ್ಲಿ ಹಲವು ದೇವರ ಕಟ್ಟೆಮನೆಗಳು ಎಂಬ ವಾಡಿಕೆಯಿದೆ. ಅದೇ ರೀತಿ ಈ ಜಾತ್ರೆ ನನ್ನಿವಾಳ ಕಟ್ಟೆಮನೆ ವ್ಯಾಪ್ತಿಗೆ ಬರುತ್ತದೆ. ಇತ್ತೀಚೆಗೆ ಜನರು ಈ ರೀತಿ ಜಾತ್ರೆ ಮಾಡೋದನ್ನು ನಿಲ್ಲಿಸಿದ್ದಾರೆ. ಹೀಗೆ ಜಾತ್ರೆಗಳನ್ನು ನಮ್ಮ ಸಮುದಾಯದಲ್ಲಿ ಮಾಡೋದ್ರಿಂದ ಆ ಗ್ರಾಮವಲ್ಲದೇ, ಸುತ್ತಮುತ್ತಲಿನ ಗ್ರಾಮಗಳ ಜನರು ಕ್ಷೇಮವಾಗಿ ಇರ್ತಾರೆ ಎಂಬ ನಂಬಿಕೆಯಿದೆ. ಅಕ್ಕಪಕ್ಕದ ಎಲ್ಲಾ ಗ್ರಾಮದ ಜನರು ಬಂದು ಇಲ್ಲಿ ವಾಸ್ತವ್ಯ ಹೂಡಿ ಜಾತ್ರೆ ಮಾಡ್ತಿದ್ದೇವೆ. ಇದ್ರಿಂದ ಎಲ್ಲರಿಗೂ ಆರೋಗ್ಯ, ನೆಮ್ಮದಿ ಕರುಣಿಸಿ ಮಳೆ ಬೆಳೆ ಚೆನ್ನಾಗಿ ಆಗಲಿ ಎಂಬುದು ನಮ್ಮೆಲ್ಲರ ಬಯಕೆ ಅಂತಾರೆ ಭಕ್ತರು.

24:18ಮೇಲಂತಬೆಟ್ಟು ಗ್ರಾಮದ ನಾಗಬ್ರಹ್ಮ ಕ್ಷೇತ್ರ: ನಾಗದೋಷ–ನಾಗಬಾಧೆಗಳಿಂದ ಮುಕ್ತಿ ನೀಡುವ ಶಕ್ತಿಸನ್ನಿಧಾನ
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
Read more