ಹಣ್ಣನು ಮಾರಲು ಗೋಕುಲಕ್ಕೆ ಬಂದ ಮಹಿಳೆಯ ಬುಟ್ಟಿ ತುಂಬೆಲ್ಲಾ ವಜ್ರ, ವೈಢೂರ್ಯಗಳು..!

Jan 17, 2021, 2:28 PM IST

ಒಮ್ಮೆ ನಂದಗೋಕಲಕ್ಕೆ ಮಾವಿನ ಹಣ್ಣು ಮಾರುತ್ತಾ ಮಹಿಳೆಯೊಬ್ಬಳು ಬರುತ್ತಾಳೆ. ಕೃಷ್ಣನಿಗೆ ಮಾವಿನ ಹಣ್ಣು ತಿನ್ನುವ ಆಸೆಯಾಗುತ್ತದೆ. ಕೃಷ್ಣ ಒಳಗೆ ಹೋಗಿ ಪುಟ್ಟ ಕೈಗಳಲ್ಲಿ ಅಕ್ಕಿಯನ್ನು ತರುತ್ತಾನೆ. ದಾರಿಯುದ್ಧಕ್ಕೂ ಅಕ್ಕಿ ಚೆಲ್ಲಿ ಹೋಗುತ್ತದೆ. ಆ ಮಹಿಳೆಗೆ ಕೃಷ್ಣ ಪ್ರಯತ್ನ ನೋಡಿ ಖುಷಿಯಾಗಿ, ಜಾಸ್ತಿ ಹಣ್ಣನ್ನು ಕೊಡುತ್ತಾಳೆ. ಬುಟ್ಟಿಯಲ್ಲಿ ನೋಡಿದರೆ ರತ್ನಗಳು, ವಜ್ರವೈಢೂರ್ಯದಿಂದ ತುಂಬಿ ಹೋಗುತ್ತದೆ.