ರಕ್ತ ಬೀಜಾಸುರನ ರಕ್ತದಿಂದ ಹುಟ್ಟಿದ ರಕ್ಕಸರನ್ನು ಸಂಹಾರ ಮಾಡಲು ಕಾಳಿದೇವಿ ಮಾಡಿದ ತಂತ್ರವಿದು

Jun 6, 2021, 5:36 PM IST

ಶುಂಭನ ಉಪಟಳ ಹೆಚ್ಚಾದಾಗ, ಶಂಕರನು, ಶುಂಭನಿಗೆ ಹೇಳುತ್ತಾನೆ. ಆದರೆ ಅಹಂಕಾರವೇ ಮೈಗೇರಿಸಿಕೊಂಡ ಶುಂಭ ಶಂಕರನ ಮಾತನ್ನು ಕೇಳುವುದಿಲ್ಲ. ಕೊನೆಗೆ ತಾಯಿ ವೃಹಭವಾಹನಳಾಗಿ ಶುಂಭನನ್ನು ಸಂಹಾರ ಮಾಡುತ್ತಾಳೆ. ಬೇರೆ ಬೇರೆ ಅವತಾರ ತಾಳಿ ರಕ್ಕಸರನ್ನು ಸಂಹರಿಸುತ್ತಾಳೆ.

ಮಾತೆ ಆದಿಶಕ್ತಿ ದರ್ಶನದಿಂದ ಸಂತುಷ್ಟರಾದ ತ್ರಿಮೂರ್ತಿಗಳು ಹೀಗೆ ಪ್ರಾರ್ಥಿಸುತ್ತಾರೆ

ಇದನ್ನೆಲ್ಲಾ ನೋಡಿದ ರಕ್ತ ಬೀಜಾಸುರ ಕಾಳಿ ದೇವಿಯ ಜೊತೆ ಯುದ್ಧಕ್ಕೆ ನಿಲ್ಲತ್ತಾನೆ. ಆಗ ವೈಷ್ಣವಿ ದೇವಿ ರಕ್ತವೀಜಾಸುರನನ್ನು ಸಂಹರಿಸುತ್ತಾಳೆ. ಆತನ ರಕ್ತದ ಹನಿಯಿಂದ ಸಾವಿರಾರು ರಕ್ಕಸರು ಜನಿಸುತ್ತಾರೆ. ಆಗ ಜಗನ್ಮಾತೆ ಉಪಾಯ ಮಾಡುತ್ತಾಳೆ. ಕಾಳಿಕಾ ದೇವಿಗೆ ನಾಲಿಗೆ ಬೃಹದಾಕಾರ ಮಾಡಲು ಹೇಳುತ್ತಾಳೆ.