ಅಕ್ಷಯ ತೃತೀಯದ ದಿನ ಚಿನ್ನ ಖರೀದಿಯಿಂದ ಒಳಿತಿಗಿಂತ ಕೆಡುಕೇ ಹೆಚ್ಚಾಗುವುದು ಅಂತಾರೆ ಬ್ರಹ್ಮಾಂಡ ಗುರೂಜಿ. ಯಾಕೆ ಎಂಬ ವಿವರ ತಿಳಿಯಿರಿ.
ಅಕ್ಷಯ ತೃತೀಯ ಸಂಭ್ರಮ ಎಲ್ಲೆಡೆ ಜೋರಾಗಿದೆ. ಜನರು ಬಂಗಾರ ಖರೀದಿಸಲು ಸಂಪೂರ್ಣ ಸಜ್ಜಾಗಿದ್ದಾರೆ. ಬಂಗಾರದಂಗಡಿಗಳಲ್ಲಿ ಕಾಲು ಹಾಕಲೂ ಜಾಗವಿಲ್ಲದಷ್ಟು ಜನಜಂಗುಳಿ ಅಕ್ಷಯ ತೃತೀಯದ ದಿನ ಕಾಣಿಸುತ್ತದೆ. ಈ ದಿನ ಬಂಗಾರ ಖರೀದಿಸಿದರೆ ಸಮೃದ್ಧಿ ಹೆಚ್ಚುತ್ತದೆ ಎಂಬ ಸಂದೇಶ ಎಲ್ಲೆಡೆ ಓಡಾಡುತ್ತಿದೆ. ಆದರೆ ಈ ದಿನ ಬಂಗಾರ ಖರೀದಿ ಬೇಡವೇ ಬೇಡ, ಬಂಗಾರ ಖರೀದಿಸಲು ಯಾವ ಶಾಸ್ತ್ರದಲ್ಲಿಯೂ ಹೇಳಿಲ್ಲ. ಬೇಕಿದ್ದರೆ ಕೊಂಚ ಬೆಳ್ಳಿ ಖರೀದಿ ಮಾಡಿ ಎನ್ನುತ್ತಾ ಕಾರಣಗಳನ್ನು ನೀಡಿದ್ದಾರೆ ಬ್ರಹ್ಮಾಂಡ ಗುರೂಜಿ ಖ್ಯಾತಿಯ ನರೇಂದ್ರ ಬಾಬು ಶರ್ಮಾ.
ರಾಶಿಗನುಗುಣವಾಗಿ Akshaya Tritiyaದಂದು ಈ ಲೋಹ ಖರೀದಿಸಿ ಅದೃಷ್ಟ ಹೆಚ್ಚಿಸಿಕೊಳ್ಳಿ..
ಅಷ್ಟೇ ಅಲ್ಲ, ಮಂಗಳವಾರದ ದಿನ ರೋಹಿಣಿ ನಕ್ಷತ್ರದಲ್ಲಿ ಅಕ್ಷಯ ತೃತೀಯ ಬಂದಿರುವುದು ಶುಭವೇ ಅಶುಭವೇ? ಅಕ್ಷಯ ತೃತೀಯದಂದು ಏನು ಮಾಡಬೇಕು? ಬಸವ ಜಯಂತಿ, ರಾಮಾನುಜಂ ಜಯಂತಿ, ಶಂಕರ ಜಯಂತಿಯ ದಿನವೂ ಆದ ಈ ದಿನ ಏನೆಲ್ಲ ದಾನ ಮಾಡಬೇಕು? ಯಾಕಾಗಿ ಮಾಡಬೇಕು ಎಂಬ ವಿವರಗಳನ್ನು ಗುರೂಜಿ ತಿಳಿಸಿದ್ದಾರೆ.