'ಮುಂದುವರಿದ ಅಧ್ಯಾಯ' ದರ್ಶನ್ ಬಂದಿದ್ದ ಕಾರ್ಯಕ್ರಮದಲ್ಲಿ ಕಿಚ್ಚನಿಗಾಯ್ತಾ ಅವಮಾನ?

Jan 29, 2020, 11:01 PM IST

ಬೆಂಗಳೂರು(ಜ. 29) ಕನ್ನಡ ಚಿತ್ರರಂಗದಲ್ಲಿ ಎರಡು ಬಣಗಳಾಗಿದ್ಯಾ ಎಂಬ ಪ್ರಶ್ನೆ ಮೂಡಿದೆ. ನಟ ಆದಿತ್ಯ ಅಭಿನಯದ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಕಿಚ್ಚನಿಗಾಯ್ತಾ ಅವಮಾನ ಎಂಬ ಪ್ರಶ್ನೆ ಸಹ ಮೂಡಿದೆ.

ಆದಿತ್ಯ ಅಭಿನಯದ 'ಮುಂದುವರಿದ ಅಧ್ಯಾಯ' ಚಿತ್ರದ ಸುದ್ದಿಗೋಷ್ಠಿಯಲ್ಲಿ ಕನ್ನಡ ಸಿನಿಮಾರಂಗದ ನಿರ್ದೇಶಕರ ವಿಡಿಯೋ ಪ್ರಸಾರ ಮಾಡಲಾಗಿದೆ. ವೈವಿ ರಾವ್ ರಿಂದ ಹಿಡಿದು ಪ್ರಶಾಂತ್ ನೀಲ್ ವರೆಗೂ ನಿರ್ದೇಶಕರಿಗೆ ವಿಡಿಯೋ ಮೂಲಕ ತಂಡ ಧನ್ಯವಾದ ಹೇಳಿದೆ. ಆದ್ರೆ ಇಡೀ ವೀಟಿಯಲ್ಲಿ ಕಿಚ್ಚನ ಸುಳಿವೇ ಇಲ್ಲ‌. ಕಾರ್ಯಕ್ರಮಕ್ಕೆ ಮುಖ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಅತಿಥಿಯಾಗಿ ಬಂದಿದ್ದರು.

ಸ್ಯಾಂಡಲ್‌ವುಡ್ ನಲ್ಲಿ ಮತ್ತೆ ಶುರುವಾಯ್ತಾ ಸ್ಟಾರ್ ವಾರ್?

ದರ್ಶನ್ ಕಾರ್ಯಕ್ರಮಕ್ಕೆ ಬರ್ತಾರೆ ಅನ್ನೋ ಕಾರಣಕ್ಕೆ ಸುದೀಪ್ ಅವ್ರನ್ನ ವಿಡಿಯೋದಿಂದ ಕೈಬಿಡಲಾಯ್ತಾ? ಸುದೀಪ್ ಫೋಟೋ ಕೈ ಬಿಟ್ಟ ವಿಚಾರಕ್ಕೆ ನೋ ಕಮೆಂಟ್ಸ್ ಎಂದು ಆದಿತ್ಯ ಹೇಳಿದ್ದಾರೆ. ನಾನು ಅದನ್ನ ನೋಡಿಲ್ಲ ಮಾಡಿದವರನ್ನ ಕೇಳಿ ಎಂದು ಆದಿತ್ಯ ಇದಕ್ಕೆ ಉತ್ತರ ನೀಡಿದ್ದಾರೆ. ಸಿನಿಯಾರಿಟಿ ಮೇಲೆ ಧನ್ಯವಾವ ಹೇಳಿದ್ದೇವೆ ಎಂದು ಆದಿತ್ಯ ತಿಳಿಸಿದ್ದಾರೆ.