Today Horoscope: ಈ ರಾಶಿಯವರಿಗೆ ಇಂದು ಮಾನಸಿಕ ಕಿರಿಕಿರಿ ಇರಲಿದ್ದು, ವೃತ್ತಿಯಲ್ಲಿ ಅನುಕೂಲವಿದೆ..

Jun 3, 2024, 8:45 AM IST

ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ಸೋಮವಾರ, ದ್ವಾದಶಿ ತಿಥಿ, ರೇವತಿ ನಕ್ಷತ್ರ.

ಸೋಮವಾರ ಅಶ್ವಿನಿ ನಕ್ಷತ್ರ ಇರುವುದರಿಂದ ಒಳ್ಳೆಯ ಕಾಲವಾಗಿದೆ. ಮೇಷ ರಾಶಿಯವರಿಗೆ ಕೃಷಿ-ಆಹಾರ ಕ್ಷೇತ್ರಗಳಿಗೆ ಅನುಕೂಲ. ಬಂಧು-ಮಿತ್ರರಲ್ಲಿ ಸಹಕಾರ. ಲಾಭವಿದೆ. ಇಷ್ಟದೇವತಾರಾಧನೆ ಮಾಡಿ. ವೃಷಭ ರಾಶಿಯವರಿಗೆ ಹೆಚ್ಚಿನ ಹೂಡಿಕೆ. ದೇಹಕ್ಕೆ ಪೆಟ್ಟಾಗಲಿದೆ. ವೃತ್ತಿಯಲ್ಲಿ ಅನುಕೂಲ. ಸಾಲ ಬಾಧೆಯಾಗಬಹುದು. ಋಣಮೋಚನ ನರಸಿಂಹ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ:  ಭವ್ಯಾ ನರಸಿಂಹಮೂರ್ತಿ ಇನ್ಮುಂದೆ ಲೆಫ್ಟಿನೆಂಟ್‌! ಇಂಡೋ-ಪಾಕ್ LOC ಬಳಿಯ ಸೇನಾ ಘಟಕದಲ್ಲಿ ನೇಮಕ!