
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಸೋಮವಾರ, ತೃತೀಯ ತಿಥಿ, ಆಶ್ಲೇಷ ನಕ್ಷತ್ರ.
ಈ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಜೊತೆಗೆ ಈ ಸಮಯದಲ್ಲಿ ಕೃಷಿ ಕಾರ್ಯಗಳು ಹೆಚ್ಚಾಗಿ ನಡೆಯುತ್ತವೆ. ಅಮ್ಮನವರ ಪ್ರಾರ್ಥನೆ ಮಾಡಿ, ಜೊತೆಗೆ ಆಶ್ಲೇಷ ನಕ್ಷತ್ರ ಇರುವುದರಿಂದ ನಾಗ ದೇವರ ಪ್ರಾರ್ಥನೆ ಮಾಡಿ. ಮೇಷ ರಾಶಿಯ ಕೃಷಿಕರಿಗೆ ಉತ್ತಮ. ಬಂಧು-ಮಿತ್ರರ ಸಹಕಾರ. ವೃತ್ತಿಯಲ್ಲಿ ಅನುಕೂಲ. ವಸ್ತು ನಷ್ಟತೆ. ಇಷ್ಟ ದೇವತಾರಾಧನೆ ಮಾಡಿ. ವೃಷಭ ರಾಶಿಯ ವ್ಯಾಪಾರಿಗಳಿಗೆ ಲಾಭ. ಸಹೋದರರ ಸಹಕಾರ. ವೃತ್ತಿಯಲ್ಲಿ ಅನುಕೂಲ. ದಂಪತಿಗಳಲ್ಲಿ ಅಸಮಾಧಾನ. ಸುಬ್ರಹ್ಮಾಣ್ಯ ಪ್ರಾರ್ಥನೆ ಮಾಡಿ.
ಇದನ್ನೂ ವೀಕ್ಷಿಸಿ: Weekly Horoscope: ಈ ರಾಶಿಯ ಸ್ತ್ರೀಯರ ಸಾಲ ನಿವಾರಣೆಯಾಗಲಿದ್ದು, ತಂದೆ-ಮಕ್ಕಳಲ್ಲಿ ಅಸಮಾಧಾನ ಬರಲಿದೆ