Today Horoscope: ಇಂದು ಮಣ್ಣೆತ್ತಿನ ಅಮಾವಾಸ್ಯೆ ಇದ್ದು, ಇದರ ಆಚರಣೆ ಏಕೆ ಮಾಡಬೇಕು ?

Jul 5, 2024, 8:31 AM IST

ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಶುಕ್ರವಾರ, ಅಮಾವಾಸ್ಯೆ ತಿಥಿ, ಆರಿದ್ರಾ ನಕ್ಷತ್ರ.

ಈ ದಿನ ಮಣ್ಣೆತ್ತಿನ ಅಮಾವಾಸ್ಯೆ ಇದ್ದು, ಕೃಷಿ ಕೆಲಸದ ಆರಂಭದ ಸೂಚನೆಯನ್ನು ಇದು ನೀಡುತ್ತದೆ. ಜೊತೆಗೆ ಪಿತೃದೇವತೆಗಳ ನೆನೆದು, ಅನ್ನದಾನ ಮಾಡಿ. ಮೇಷ ರಾಶಿಯವರಿಗೆ ಈ ದಿನ ಬುದ್ಧಿ-ಆಲೋಚನೆಗಳ ದುರ್ಬಲತೆ. ಬಂಧುಗಳಲ್ಲಿ ಮನಸ್ತಾಪ. ಸ್ತ್ರೀಯರಿಗೆ ಮಾನಸಿಕ ಒತ್ತಡ. ವೃತ್ತಿಯಲ್ಲಿ ಅನುಕೂಲ. ಆರೋಗ್ಯದಲ್ಲಿ ಅನುಕೂಲ. ಲಲಿತಾಪರಮೇಶ್ವರೀ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ:  ಎಲ್ಲರಂಥಲ್ಲ ಈ ಪವಾಡ ಪುರುಷ ಭೋಲೇಬಾಬಾ! ಪೊಲೀಸ್ ಆಗಿದ್ದ ವ್ಯಕ್ತಿ ಭೋಲೇ ಬಾಬಾ ಆಗಿದ್ದೇ ರೋಚಕ!