ಆಂಟಿ ಹಿಂದೆ ಬಿದ್ದು ಜೀವವನ್ನೇ ಕಳೆದುಕೊಂಡ ಬಡಪಾಯಿ ಯುವಕನ ಕಥೆ

Sep 14, 2022, 4:04 PM IST

ಯಾದದಗಿರಿ, (ಸೆಪ್ಟೆಂಬರ್.14): ಅವನು ತನ್ನ ಮನೆಯ ಆಧಾರ ಸ್ತಂಭ. ಚೆನ್ನಾಗಿ ದುಡಿದು ಅಪ್ಪ ಅಮ್ಮನನ್ನ ಚೆನ್ನಾಗಿ ನೋಡಿಕೊಂಡಿದ್ದ. ಕಷ್ಟಪಟ್ಟು ದುಡಿದು ಕಾರ್ ಖರೀಧಿಸಿ ಜೀವನಕ್ಕೆ ದಾರಿ ಮಾಡಿಕೊಂಡಿದ್ದ. ಇಷ್ಟೇ ಮಾಡಿಕೊಂಡು ಹೋಗಿದಿದ್ರೆ ಏನೂ ಆಗ್ತಿರಲಿಲ್ಲ. ಆದ್ರೆ ಆತ ಒಂದು ಆಂಟಿಯ ಸಹವಾಸ ಮಾಡಿಬಿಟ್ಟಿದ್ದ. ಅವಳಿಗಾಗಿ ತನ್ನ ಬಳಿ ಇದ್ದ ದುಡ್ಡನ್ನೆಲ್ಲಾ ಖಾಲಿ ಮಾಡಿಕೊಂಡ. ಅವಳಿಗಾಗಿ ಈತ ಯಾವ ಮಟ್ಟಕ್ಕೆ ಹೋದ ಅಂದ್ರೆ ಜೀವನಾಂಶಕ್ಕೆ ಇಟ್ಟುಕೊಂಡಿದ್ದ ಕಾರನ್ನೂ ಮಾರಿ ಊರಿಗೆ ಹೋಗಿ ಟ್ರಾಕ್ಟರ್ ಡ್ರೈವರ್ ಆದ.

ರಾಮನಗರ: ಪ್ರೀತಿ ನಿರಾಕರಣೆ: ಯುವತಿಗೆ ಚಾಕು ಇರಿದು ಆತ್ಮಹತ್ಯೆಗೆ ಯತ್ನ

 ಆದ್ರೆ ಅವಳು ಇವನ ಬಳಿ ದುಡ್ಡು ಖಾಲಿ ಆಗಿದೆ ಅಂತ ಗೊತ್ತಾಗ್ತಿದ್ದ ಹಾಗೆ ಆತನನ್ನ ಬಿಟ್ಟು, ವಾಪಸ್ ಹಳೆ ಗಂಡನ ಬಳಿ ಹೋಗಿದ್ಲು. ಈತ ಮೊದಲೇ ಅವಳ ಬಗ್ಗೆ ಹುಚ್ಚನಾಗಿದ್ರಿಂದ ಅವಳನ್ನ ಪ್ರೀತ್ಸೆ ಪ್ರೀತ್ಸೆ ಅಂತ ಬೀಳೋದಕ್ಕೆ ಶುರು ಮಾಡಿದ, ಕೊನೆಗೆ ತನ್ನ ಜೀವವನ್ನೇ ಕಳೆದುಕೊಂಡ. ಹೀಗೆ ಆಂಟಿ ಹಿಂದೆ ಬಿದ್ದು ತನ್ನ ಜೀವವನ್ನೇ ಕಳೆದುಕೊಂಡ ಬಡಪಾಯಿ ಯುವಕನ ಕಥೆಯೇ ಇವತ್ತಿನ ಎಫ್.ಐ.ಆರ್.